ಬ್ರಹ್ಮಗಾಂವ (ಬೀಡ್ ಜಿಲ್ಲೆ) ಇಲ್ಲಿ ಮಾಂಸದ ತುಂಡುಗಳನ್ನಿಟ್ಟು ಶ್ರೀ ಮಾರುತಿ ದೇವಸ್ಥಾನದ ವಿಡಂಬನೆ !

ದೇವಸ್ಥಾನದ ಶುದ್ಧೀಕರಣದ ನಂತರದ ಮಹಾ ಆರತಿಗೆ 5 ಸಾವಿರ ನಾಗರಿಕರ ಉಪಸ್ಥಿತಿ!

ಪೊಲೀಸರ ಮುಂದೆ ಭಕ್ತರು ಮತ್ತು ಗ್ರಾಮಸ್ಥರು ಮಾಂಸದ ತುಂಡುಗಳನ್ನು ತೆಗೆದರು

ಗೆವರಾಯಿ (ಬೀಡ್ ಜಿಲ್ಲೆ) – ಗೆವರಾಯಿ ತಾಲೂಕಿನ ಬ್ರಹ್ಮಗಾಂವನಲ್ಲಿ ಶ್ರೀ ಮಾರುತಿ ದೇವಸ್ಥಾನದ ಎದುರು ಮಾಂಸದ ತುಂಡುಗಳು ಪತ್ತೆಯಾಗಿದ್ದರಿಂದ ಸದರಿ ಪ್ರದೇಶದಲ್ಲಿ ತೀವ್ರ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಧಾರ್ಮಿಕ ಸೌಹಾರ್ದತೆಯನ್ನು ಕೆಡಿಸಲು ಯತ್ನಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಕಲಾಂಬಾ ಪೊಲೀಸರು ಅಪರಿಚಿತರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹನುಮಂತನ ಮೂರ್ತಿಯನ್ನು ಪಂಚಾಮೃತ ಮತ್ತು ಗಂಗಾಜಲದಿಂದ ಶುದ್ಧಿ ಮಾಡಿದ ಭಕ್ತರು

ಮೇ 29 ರಂದು ಬೆಳಗ್ಗೆ ದೇವಸ್ಥಾನಕ್ಕೆ ಪೂಜೆಗೆ ಹೋದ ವ್ಯಕ್ತಿಗಳಿಗೆ ದೇವಸ್ಥಾನದ ಮುಂದೆ ಮಾಂಸದ ತುಂಡುಗಳು ಕಂಡುಬಂದವು. ಈ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಹಿಂದುತ್ವವಾದಿ ಸಂಘಟನೆಗಳು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದರು. ಹ.ಭ.ಪ. ದತ್ತಾಗಿರಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಪಂಚಾಮೃತ ಮತ್ತು ಗಂಗಾಜಲದಿಂದ ಮೂರ್ತಿಯನ್ನು ಶುದ್ಧೀಕರಿಸಿ ಮಹಾ ಅಭಿಷೇಕ, ಪೂಜೆ ಮತ್ತು ಮಹಾ ಆರತಿಯನ್ನು ನೆರವೇರಿಸಲಾಯಿತು. ಸಕಲ ಹಿಂದೂ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಮಹಾ ಆರತಿಯಲ್ಲಿ ಸುಮಾರು ೫ ಸಾವಿರ ನಾಗರಿಕರು ಪಾಲ್ಗೊಂಡಿದ್ದರು.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಚಕಲಾಂಬಾ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೊಲೀಸರು ಪಂಚನಾಮೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಮಾಂಸವು ಯಾವ ಪ್ರಾಣಿಯದ್ದು? ಎಂಬುದನ್ನು ಪತ್ತೆಹಚ್ಚಲು ವಿಧಿವಿಜ್ಞಾನ ಪ್ರಯೋಗಾಲಯದ ತಂಡದಿಂದ ಮಾದರಿಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. ಈ ಘಟನೆಯ ನಂತರ, ದೋಷಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಕಲ ಹಿಂದೂ ಸಮಾಜ ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಚಕಲಾಂಬಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಸಚಿನ ಇಂಗಳೆ ಮಾತನಾಡಿ, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ತನಿಖೆಯ ಮೂಲಕ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ದೇವಸ್ಥಾನದಲ್ಲಿ ಮಾಂಸದ ತುಂಡುಗಳನ್ನು ಹಾಕಿ ಅಪವಿತ್ರಗೊಳಿಸುವವರಿಗೆ ಈಗ ಗಲ್ಲು ಶಿಕ್ಷೆಯೇ ಆಗುವುದು ಅಗತ್ಯವಾಗಿದೆ!