ಕೆಂಪುಕೋಟೆಯ ಬಳಿ ನಡೆದ ಬಾಂಬ್ ಸ್ಫೋಟಕ್ಕಾಗಿ ಉಗ್ರರು ‘ಯೂಟ್ಯೂಬ್’ ಮತ್ತು ‘ಚಾಟ್ ಜಿಪಿಟಿ’ ಬಳಸಿದ್ದರು!

‘ರಾಕೆಟ್ ತಯಾರಿಸುವುದು ಹೇಗೆ?’ ಎಂಬಂತಹ ಪ್ರಶ್ನೆಗಳನ್ನು ಕೇಳಿದ್ದರು

ನವದೆಹಲಿ – ಇಲ್ಲಿನ ಕೆಂಪುಕೋಟೆಯ ಬಳಿ ಕಳೆದ ವರ್ಷ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ೭,೫೦೦ ಪುಟಗಳ ಆರೋಪಪಟ್ಟಿಯನ್ನು ದಾಖಲಿಸಿದೆ. ಇದರ ಪ್ರಕಾರ, ಭಯೋತ್ಪಾದಕ ಸಂಘಟನೆ ‘ಅಲ್-ಖೈದಾ’ಗೆ ಸೇರಿದ ಉಗ್ರರು ವಿಧ್ವಂಸಕ ಕೃತ್ಯಕ್ಕಾಗಿ ಚಾಟ್ ಜಿಪಿಟಿ ಮತ್ತು ಯೂಟ್ಯೂಬ್ ಜಾಲತಾಣಗಳನ್ನು ಬಳಸಿದ್ದರು ಎಂದು ಹೇಳಲಾಗಿದೆ. ಉಗ್ರರು ‘ರಾಕೆಟ್ ತಯಾರಿಸುವುದು ಹೇಗೆ ಮತ್ತು ಮಿಶ್ರಣದ ಪ್ರಮಾಣ ಎಷ್ಟು ಇರಬೇಕು?’, ಎಂಬಂತಹ ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಹುಡುಕಿದ್ದರು. ಈ ಬಾಂಬ್ ಸ್ಫೋಟದಲ್ಲಿ ೧೧ ಜನರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯೊಂದು, ಕೆಂಪುಕೋಟೆಯ ಬಳಿ ನಡೆದ ಸ್ಫೋಟದ ಜವಾಬ್ದಾರಿಯನ್ನು ಜೈಶ್-ಎ-ಮೊಹಮ್ಮದ್ ಸಂಘಟನೆ ವಹಿಸಿಕೊಂಡಿದೆ ಎಂದು ದಾವೆ ಮಾಡಿದೆ.