ಕಲ್ಲು ಮತ್ತು ಮರದ ದೊಣ್ಣೆಗಳಿಂದ ಆಕ್ರಮಣ ಮಾಡಿದರು

ಮಹಾಗಾಂವ (ಯವತಮಾಳ ಜಿಲ್ಲೆ) – ಇಲ್ಲಿನ ಬಿಜೋರಾ ಟೋಲ್ ನಾಕಾದ ಹತ್ತಿರ ಗೋವಂಶ ಕಳ್ಳಸಾಗಣೆದಾರರು ಗೋರಕ್ಷಕ ಗಜಾನನ ಸುರೋಶೆಯವರ ಮೇಲೆ ಕಲ್ಲು ಮತ್ತು ಮರದ ದೊಣ್ಣೆಗಳಿಂದ ಮಾರಣಾಂತಿಕ ಆಕ್ರಮಣ ಮಾಡಿದರು. ಅದರಲ್ಲಿ ಸುರೋಶೆಯವರ ಸಾವಾಯಿತು. ಇಲ್ಲಿನ ಸಿಸಿಟಿವಿಯಲ್ಲಿ ಚಿತ್ರಣವಾಗಿದೆ.
೧. ರಾತ್ರಿ ಬಜರಂಗ ದಳದ ಕೆಲವು ಕಾರ್ಯಕರ್ತರು ಟೋಲ್ ನಾಕಾದ ಮೇಲೆ ನಿಂತಿದ್ದರು. ಒಂದು ಪಿಕಪ್ ವಾಹನದಲ್ಲಿ ೮ ರಿಂದ ೧೦ ಗೋವಂಶಗಳಿರುವ ಸಂಶಯ ಬಂದಿದ್ದರಿಂದ ಕಾರ್ಯಕರ್ತರು ವಾಹನವನ್ನು ಬೆನ್ನಟ್ಟಿದರು. ವಾಹನದಿಂದ ಗುದ್ದಿ ಕಾರ್ಯಕರ್ತರ ದ್ವಿಚಕ್ರ ವಾಹನವನ್ನು ಕೆಡವಿದರು. ಇದರಲ್ಲಿ ಇಬ್ಬರು ಗಾಯಗೊಂಡರು.
೨. ಈ ಸಮಯದಲ್ಲಿ ಗೋರಕ್ಷಕ ಗಜಾನನ ಸುರೋಶೆಯವರು ವಾಹನದಲ್ಲಿ ಹೋಗುತ್ತಿದ್ದರು. ಅವರು ಪಿಕಪ್ ಅನ್ನು ಬೆನ್ನಟ್ಟಿದರು. ಆಗ ಗೋಕಳ್ಳಸಾಗಣೆದಾರರು ಅವರ ವಾಹನದ ಮೇಲೆ ಭಾರಿ ಕಲ್ಲುತೂರಾಟ ಮಾಡಿದರು. ಮರದ ದೊಣ್ಣೆಗಳು ಮತ್ತು ಕೋಲುಗಳಿಂದ ಆಕ್ರಮಣ ಮಾಡಿದರು. ಇದರಲ್ಲಿ ಅವರು ಮೃತಪಟ್ಟರು. ಗೋಕಳ್ಳಸಾಗಣೆದಾರರು ಗೋವಂಶಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು.
೩. ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಉಮರಖೇಡ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ಆರೋಪಿಗಳನ್ನು ಬಂಧಿಸಲು ಬೇಡಿಕೆ ಇಟ್ಟಿದ್ದಾರೆ. (ಇಂತಹ ಬೇಡಿಕೆ ಇಡುವ ಸಮಯ ಬರುವುದು ದುರ್ದೈವ ! – ಸಂಪಾದಕರು)
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ