ಕಲ್ಲು ಮತ್ತು ಮರದ ದೊಣ್ಣೆಗಳಿಂದ ಆಕ್ರಮಣ ಮಾಡಿದರು

ಮಹಾಗಾಂವ (ಯವತಮಾಳ ಜಿಲ್ಲೆ) – ಇಲ್ಲಿನ ಬಿಜೋರಾ ಟೋಲ್ ನಾಕಾದ ಹತ್ತಿರ ಗೋವಂಶ ಕಳ್ಳಸಾಗಣೆದಾರರು ಗೋರಕ್ಷಕ ಗಜಾನನ ಸುರೋಶೆಯವರ ಮೇಲೆ ಕಲ್ಲು ಮತ್ತು ಮರದ ದೊಣ್ಣೆಗಳಿಂದ ಮಾರಣಾಂತಿಕ ಆಕ್ರಮಣ ಮಾಡಿದರು. ಅದರಲ್ಲಿ ಸುರೋಶೆಯವರ ಸಾವಾಯಿತು. ಇಲ್ಲಿನ ಸಿಸಿಟಿವಿಯಲ್ಲಿ ಚಿತ್ರಣವಾಗಿದೆ.
೧. ರಾತ್ರಿ ಬಜರಂಗ ದಳದ ಕೆಲವು ಕಾರ್ಯಕರ್ತರು ಟೋಲ್ ನಾಕಾದ ಮೇಲೆ ನಿಂತಿದ್ದರು. ಒಂದು ಪಿಕಪ್ ವಾಹನದಲ್ಲಿ ೮ ರಿಂದ ೧೦ ಗೋವಂಶಗಳಿರುವ ಸಂಶಯ ಬಂದಿದ್ದರಿಂದ ಕಾರ್ಯಕರ್ತರು ವಾಹನವನ್ನು ಬೆನ್ನಟ್ಟಿದರು. ವಾಹನದಿಂದ ಗುದ್ದಿ ಕಾರ್ಯಕರ್ತರ ದ್ವಿಚಕ್ರ ವಾಹನವನ್ನು ಕೆಡವಿದರು. ಇದರಲ್ಲಿ ಇಬ್ಬರು ಗಾಯಗೊಂಡರು.
೨. ಈ ಸಮಯದಲ್ಲಿ ಗೋರಕ್ಷಕ ಗಜಾನನ ಸುರೋಶೆಯವರು ವಾಹನದಲ್ಲಿ ಹೋಗುತ್ತಿದ್ದರು. ಅವರು ಪಿಕಪ್ ಅನ್ನು ಬೆನ್ನಟ್ಟಿದರು. ಆಗ ಗೋಕಳ್ಳಸಾಗಣೆದಾರರು ಅವರ ವಾಹನದ ಮೇಲೆ ಭಾರಿ ಕಲ್ಲುತೂರಾಟ ಮಾಡಿದರು. ಮರದ ದೊಣ್ಣೆಗಳು ಮತ್ತು ಕೋಲುಗಳಿಂದ ಆಕ್ರಮಣ ಮಾಡಿದರು. ಇದರಲ್ಲಿ ಅವರು ಮೃತಪಟ್ಟರು. ಗೋಕಳ್ಳಸಾಗಣೆದಾರರು ಗೋವಂಶಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು.
೩. ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಉಮರಖೇಡ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ಆರೋಪಿಗಳನ್ನು ಬಂಧಿಸಲು ಬೇಡಿಕೆ ಇಟ್ಟಿದ್ದಾರೆ. (ಇಂತಹ ಬೇಡಿಕೆ ಇಡುವ ಸಮಯ ಬರುವುದು ದುರ್ದೈವ ! – ಸಂಪಾದಕರು)
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ