ಪೊಲೀಸರಿಂದ ಲಾಠಿಪ್ರಹಾರ

ಕಪೂರಥಳಾ (ಪಂಜಾಬ) – ಇಲ್ಲಿನ ಜೈಲಿನಲ್ಲಿ ೨೩ ಮೇಯ ರಾತ್ರಿ ಕೈದಿಗಳು ಬ್ಯಾರಕ್ ಅನ್ನು (ಜೈಲಿನಲ್ಲಿನ ಕೊಠಡಿಗಳನ್ನು) ಧ್ವಂಸಗೊಳಿಸಿದರು. ಈ ಸಮಯದಲ್ಲಿ ಅವರು ಜೈಲಿನ ಮೂಲಭೂತ ಸೌಕರ್ಯಗಳಿಗೂ ಹಾನಿ ಮಾಡಿದರು. ಹಾಗೆಯೇ ಜೈಲಿನ ಕೆಲವು ಭಾಗಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದರು. ಓರ್ವ ಕೈದಿಗೆ ಸಂಬಂಧಿಸಿದ ವಿವಾದದಿಂದ ಈ ಘಟನೆ ನಡೆದ ನಂತರ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳ (ಅಂಡರ್ ಟ್ರಾಯಲ್ಸ್) ನಡುವೆ ಹಿಂಸಕ ಹೊಡೆದಾಟವಾಯಿತು. ಕಾರಾಗೃಹ ಆಡಳಿತವು ಜಗಳ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದಾಗ, ಕೈದಿಗಳು ಅಧಿಕಾರಿಗಳೊಂದಿಗೆ ಜಟಾಪಟಿ ಮಾಡುವ ಪ್ರಯತ್ನ ಮಾಡಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡುತ್ತಿರುವ ಜೈಲಿನ ಪೊಲೀಸ್ ಸಿಬ್ಬಂದಿಯ ಮೇಲೂ ಆಕ್ರಮಣ ಮಾಡಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪರಿಸ್ಥಿತಿ ಇನ್ನಷ್ಟು ಹದಗೆಡಬಾರದು; ಆದ್ದರಿಂದ ಜೈಲಿನ ಒಳಗೆ ಮತ್ತು ಹೊರಗೆ ದೊಡ್ಡ ಪ್ರಮಾಣದಲ್ಲಿ ಭದ್ರತಾಪಡೆಯನ್ನು ನಿಯೋಜಿಸಿದ್ದಾರೆ. ‘ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು ಮತ್ತು ಲಾಠಿಪ್ರಹಾರ ಮಾಡಿದರು’, ಎಂದು ಓರ್ವ ಅಧಿಕಾರಿಯು ಮಾಹಿತಿ ನೀಡಿದರು. ಈ ಹಿಂಸಾಚಾರದಲ್ಲಿನ ಪ್ರಾಣಹಾನಿಯ ಕುರಿತು ಅಧಿಕಾರಿಗಳು ಇದುವರೆಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ; ಆದರೆ ಈ ಘಟನೆಯ ನಂತರ ಹೊರಗೆ ಕನಿಷ್ಠ ೫ – ೬ ಎಂಬುಲನ್ಸ್ ನಿಲ್ಲಿಸಿರುವುದು ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ