ಬಾಂದ್ರಾದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ೧೦೦ ರಿಂದ ೧೫೦ ಜನರ ವಿರುದ್ಧ ಪ್ರಕರಣ ದಾಖಲು : ೧೬ ಜನರ ಬಂಧನ

ಕೇವಲ ಪ್ರಕರಣ ದಾಖಲಿಸುವುದರಿಂದಲ್ಲ, ಬದಲಿಗೆ ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆ ವಿಧಿಸಿದರೆ ಮಾತ್ರ ಇಂತಹ ಘಟನೆಗಳನ್ನು ತಡೆಯಲು ಸಾಧ್ಯ! ಇದರೊಂದಿಗೆ ಪೊಲೀಸರು ಕೂಡ ತಮ್ಮದೇ ಆದ ಪ್ರಭಾವ ವಾತಾವರಣವನ್ನು ಮೂಡಿಸಬೇಕಾಗಿದೆ!

ಮುಂಬಯಿ – ಬಾಂದ್ರಾ ಪೂರ್ವದ ಗರೀಬ್‌ನಗರದಲ್ಲಿ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ೧೦೦ ರಿಂದ ೧೫೦ ಜನರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ೧೬ ಜನರನ್ನು ಬಂಧಿಸಲಾಗಿದೆ. ಕಲ್ಲು ತೂರಾಟದಲ್ಲಿ ೫ ಜನ ಪೊಲೀಸರು ಗಾಯಗೊಂಡಿದ್ದಾರೆ. ಮುಂಬಯಿ ಹೈಕೋರ್ಟ್ ನ ಆದೇಶದಂತೆ ಒಟ್ಟು ೫೦೦ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ. ಒತ್ತುವರಿ ತೆರವುಗೊಳಿಸುವ ಕಾರ್ಯ ಶೇಕಡಾ ೮೫ ರಷ್ಟು ಪೂರ್ಣಗೊಂಡಿದೆ.