ತೃಣಮೂಲ ಕಾಂಗ್ರೆಸ್ ನ ಮುಸಲ್ಮಾನ ಶಾಸಕರು ಸರಕಾರದ ಆದೇಶದ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದರು

ಕೊಲಕಾತಾ (ಬಂಗಾಲ) – ಬಕ್ರೀದ್ ಹಿನ್ನೆಲೆಯಲ್ಲಿ ಎತ್ತು, ಗೂಳಿ, ಹಸುಗಳು, ಕರುಗಳು ಮತ್ತು ಎಮ್ಮೆಗಳ ಹತ್ಯೆಯ ಮೇಲೆ ನಿರ್ಬಂಧ ಹೇರುವ ಬಂಗಾಲ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಕೊಲಕಾತಾ ಉಚ್ಚ ನ್ಯಾಯಾಲಯವು ನಿರಾಕರಿಸಿತು. ಸರಕಾರವು ೧೩ ಮೇ ದಿನದಂದು ಈ ಸಂದರ್ಭದಲ್ಲಿ ಅಧಿಸೂಚನೆಯನ್ನು ಪ್ರಸಾರ ಮಾಡಿತ್ತು. ‘ಈ ಅಧಿಸೂಚನೆಯು ನ್ಯಾಯಾಲಯವು ೨೦೧೮ ರಲ್ಲಿ ನೀಡಿದ ನಿರ್ದೇಶನಗಳದೇ ಕ್ರಮವಾಗಿದೆ. ಈ ಸಂದರ್ಭದಲ್ಲಿ ವಿವಾದವಿಲ್ಲ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅಧಿಸೂಚನೆಗೆ ತಡೆಯಾಜ್ಞೆ ನೀಡಲು ಅಥವಾ ಅದನ್ನು ರದ್ದುಗೊಳಿಸಲು ಯಾವುದೇ ಬಲವಾದ ಕಾರಣ ನಮಗೆ ಕಾಣಿಸುತ್ತಿಲ್ಲ’, ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
ತೃಣಮೂಲ ಕಾಂಗ್ರೆಸ್ ನ ಶಾಸಕ ಅಖರುಝಾಮನವರು ಅರ್ಜಿಯ ಮೂಲಕ, ‘ರಾಜ್ಯ ಸರಕಾರವು ೧೩ ಮೇಯ ಅಧಿಸೂಚನೆಯಲ್ಲಿ ‘ಪಶ್ಚಿಮ ಬಂಗಾಲ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ’ಯ ಕಲಂ ೧೨ ರ ಅಡಿಯಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಆದ್ದರಿಂದ ಮುಂಬರುವ ಬಕ್ರೀದ್ ಸಮಯದಲ್ಲಿ ಪ್ರಾಣಿಗಳ ಬಲಿಯ ಧಾರ್ಮಿಕ ಪರಂಪರೆಯನ್ನು ಕಾನೂನುಬದ್ಧವಾಗಿ ನೆರವೇರಿಸುವುದು ಅಸಾಧ್ಯವಾಗುವುದು. ಬಹುಸಂಖ್ಯಾತ ಮುಸಲ್ಮಾನರಿಗಾಗಿ ಎಮ್ಮೆ, ಎತ್ತು ಅಥವಾ ಗೂಳಿಯಂತಹ ದೊಡ್ಡ ಪ್ರಾಣಿಗಳ ಬಲಿ ನೀಡುವುದು, ಇದೇ ಧಾರ್ಮಿಕ ಕರ್ತವ್ಯವನ್ನು ನೆರವೇರಿಸುವ ಏಕೈಕ ಆರ್ಥಿಕ ದೃಷ್ಟಿಯಿಂದ ಕೈಗೆಟಕುವ ಮಾರ್ಗವಾಗಿದೆ’ ಎಂದು ಯುಕ್ತಿವಾದ ಮಾಡಿದ್ದರು.
ಹಸುವಿನ ಬಲಿ ನೀಡುವುದು ಬಕ್ರೀದ್ ನ ಅನಿವಾರ್ಯ ಭಾಗವಲ್ಲ ! – ಸರ್ವೋಚ್ಚ ನ್ಯಾಯಾಲಯ
ಉಚ್ಚ ನ್ಯಾಯಾಲಯವು ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಉದಾಹರಣೆ ನೀಡುತ್ತಾ, ‘ಹಸುವಿನ ಬಲಿ ನೀಡುವುದು ‘ಈದ್-ಉಲ್-ಅಜಹಾ’ದ (ಬಕ್ರೀದ್ ನ) ಅನಿವಾರ್ಯ ಭಾಗ ಅಥವಾ ಇಸ್ಲಾಮ್ ನಲ್ಲಿನ ಕಡ್ಡಾಯ ಧಾರ್ಮಿಕ ಪ್ರಥೆಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಮುಂಚೆಯೇ ಸ್ಪಷ್ಟಪಡಿಸಿದೆ’ ಎಂದು ಹೇಳಿತು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ