೧ ಲಕ್ಷದ ೪೦ ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ೨ ಅಧಿಕಾರಿಗಳ ಬಂಧನ

ನವಿ ಮುಂಬಯಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಡೆದ ಘಟನೆ

ನವಿ ಮುಂಬಯಿ, ಮೇ ೨೦ (ವಾರ್ತೆ.) – ನವಿ ಮುಂಬಯಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಇಬ್ಬರು ಅಧಿಕಾರಿಗಳು ೧ ಲಕ್ಷದ ೪೦ ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಉಪಕಾರ್ಯದರ್ಶಿ ಡಾ. ದೀಪಕ್ ಆವಟೆ ಮತ್ತು ಸ್ವಚ್ಛತಾ ಅಧಿಕಾರಿ ಸಮೀರ್ ಮ್ಹಾತ್ರೆ ಬಂಧಿತ ಆರೋಪಿಗಳು. ಮಾರುಕಟ್ಟೆ ಸಮಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಗುತ್ತಿಗೆದಾರರೊಬ್ಬರು ಈ ಕುರಿತು ದೂರು ನೀಡಿದ್ದರು. ಗುತ್ತಿಗೆದಾರರ ೧ ವರ್ಷದ ಕೆಲಸದ ಬಾಕಿ ಬಿಲ್ ಮೊತ್ತ ೯ ಲಕ್ಷದ ೭೮ ಸಾವಿರ ರೂಪಾಯಿ ಆಗಿತ್ತು. ಈ ಮೊತ್ತದ ಮೇಲೆ ಶೇಕಡಾ ೧೫ ರಷ್ಟು ಅಂದರೆ ೧ ಲಕ್ಷದ ೪೬ ಸಾವಿರ ರೂಪಾಯಿ ಲಂಚ ನೀಡುವಂತೆ ಆರೋಪಿಗಳು ಬೇಡಿಕೆಯಿಟ್ಟಿದ್ದರು. ಅದರಂತೆ ಮಾತುಕತೆಯ ಕೊನೆಯಲ್ಲಿ ೧ ಲಕ್ಷದ ೪೦ ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.

ಸಂಪಾದಕೀಯ ನಿಲುವು

ಲಂಚ ಪಡೆಯುವ ಕರ್ತವ್ಯಲೋಪಿ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು, ಹಾಗೆಯೇ ಅವರಿಂದ ಈ ಮೊತ್ತವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು! ಹಾಗೆ ಮಾಡಿದರೆ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ!