ಮುಸಲ್ಮಾನ ಬಾಹುಳ್ಯದ ಕೊಂಡ್ವಾ (ಪುಣೆ) ದಲ್ಲಿನ ಸಣ್ಣ ಮಕ್ಕಳ ಜಗಳದ ಪ್ರಕರಣ
ರಸ್ತೆಯಲ್ಲಿ 'ಅಲ್ಲಾ ಹು ಅಕ್ಬರ್' ('ಅಲ್ಲಾ ಮಹಾನ್ ಆಗಿದ್ದಾನೆ' ಎಂಬ) ಘೋಷಣೆಗಳನ್ನು ಕೂಗುತ್ತಾ ಆತಂಕ ಸೃಷ್ಟಿಸಲು ಯತ್ನ

ಪುಣೆ – ಇಲ್ಲಿನ ಮುಸಲ್ಮಾನ ಬಾಹುಳ್ಯದ ಪ್ರದೇಶವಾದ ಕೊಂಡ್ವಾದ ‘ಈಶಾ ಬೆಲಾ ಸೊಸೈಟಿ’ಯಲ್ಲಿನ ಸಣ್ಣ ಮಕ್ಕಳ ಜಗಳದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮತಾಂಧ ಮುಸಲ್ಮಾನ ಗುಂಪು ರಸ್ತೆಗಿಳಿದು ಹಿಂದೂ ಯುವಕನೊಬ್ಬನ ‘ಮಾಬ್ ಲಿಂಚಿಂಗ್’ ಮಾಡಲು ಯತ್ನಿಸಿದೆ. ಗುಂಪು ರಸ್ತೆ ತಡೆದು ಸಂಚಾರ ಅಸ್ತವ್ಯಸ್ತಗೊಳಿಸಲು ಯತ್ನಿಸಿದೆ. ರಸ್ತೆಗಿಳಿದು ಘೋಷಣೆಗಳನ್ನು ಕೂಗುತ್ತಾ ಪರಿಸರದಲ್ಲಿ ಆತಂಕ ಸೃಷ್ಟಿಸಿದೆ. ಈ ಗುಂಪು ಕೊಂಡ್ವಾ ಪೊಲೀಸ್ ಠಾಣೆ ಆವರಣಕ್ಕೆ ತೆರಳಿದ ಬಳಿಕ ಗುಂಪು ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಪರಿಣಾಮವಾಗಿ ಪೊಲೀಸರು ಗಲಭೆಕೋರರ ಮೇಲೆ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೇ ೧೮ ರ ಮಧ್ಯರಾತ್ರಿ ಈ ಘಟನೆ ನಡೆದಿದೆ.
Kondhwa, Pune: Attempted 'Mob Lynching' of Hindu Youth by fanatic mob, over a dispute between children in a Muslim-majority locality.
Slogans of “Nara-e-Takbir, Allahu Akbar” were raised to create fear and intimidation on the streets.
Is Pune in India or heading towards the… pic.twitter.com/dJKl22LTlC
— Sanatan Prabhat (@SanatanPrabhat) May 20, 2026
೧. ಕೊಂಡ್ವಾದ ‘ಈಶಾ ಬೆಲಾ ಸೊಸೈಟಿ’ಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಚಿಕ್ಕಮಕ್ಕಳು ಬಂದಿದ್ದರು. ಅವರ ನಡುವೆ ಜಗಳವಾಗಿ ಅವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಜಗಳದಲ್ಲಿ ದೊಡ್ಡವರು ಮಧ್ಯಪ್ರವೇಶಿಸಿ ಇದಕ್ಕೆ ಧಾರ್ಮಿಕ ಬಣ್ಣ ಬಳಿಯಲು ಯತ್ನಿಸಿದರು.
೨. ಗುಂಪು ರಸ್ತೆಗೆ ಬಂದಿದ್ದರಿಂದ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಆ ವೇಳೆ ರಸ್ತೆಯಲ್ಲಿದ್ದ ಕೆಲವರ ಮೇಲೂ ಹಲ್ಲೆ ನಡೆಸಲಾಗಿದೆ. ‘ಅಲ್ಲಾಹು ಅಕ್ಬರ್’, ‘ಲಾ ಇಲಾಹ ಇಲ್ಲಲ್ಲಾಹ’ (ಅಲ್ಲಾನ ಹೊರತು ಬೇರೆ ಯಾರೂ ಪೂಜನೀಯರಲ್ಲ) ಎಂಬ ಘೋಷಣೆಗಳನ್ನು ಕೂಗಿ ರಸ್ತೆ ತಡೆದು ಆತಂಕ ಸೃಷ್ಟಿಸಲು ಯತ್ನಿಸಿದರು.
೩. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಖುದ್ದು ಸ್ಥಳಕ್ಕಾಗಮಿಸಿದ್ದರು.
೪. ಪ್ರಸ್ತುತ ಕೊಂಡ್ವಾ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇರುವುದರಿಂದ ವಾತಾವರಣ ಶಾಂತವಾಗಿದ್ದು ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !