ಬಂಗಾಳದ ಭಾಜಪ ಸರಕಾರದ ಮಹತ್ತರ ನಿರ್ಧಾರ !

ಕೊಲಕಾತಾ (ಬಂಗಾಳ) – ಶುಭೆಂದು ಅಧಿಕಾರಿ ಸರಕಾರವು ಬಂಗಾಳದಲ್ಲಿ ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ‘ಚಿಕನ್ ನೆಕ್’ (ಸಿಲಿಗುಡಿ ಕಾರಿಡಾರ್) ಪ್ರದೇಶದ ೧೨೦ ಎಕರೆ ಭೂಮಿ ಮತ್ತು ‘ರಾಷ್ಟ್ರೀಯ ಹೆದ್ದಾರಿ ೭’ ಅನ್ನು ಕೇಂದ್ರಕ್ಕೆ ಹಸ್ತಾಂತರಿಸುವ ಮಹತ್ತರ ನಿರ್ಧಾರವನ್ನು ಕೈಗೊಂಡಿದೆ. ಈ ಕ್ರಮವನ್ನು ಈಶಾನ್ಯ ಭಾರತದ ಭದ್ರತೆಯನ್ನು ಬಲಪಡಿಸಲು ಕೈಗೊಳ್ಳಲಾಗಿದೆ.
ಏನಿದ ‘ಚಿಕನ್ ನೆಕ್’ ?
ಬಂಗಾಳದಲ್ಲಿ ಸಿಲಿಗುಡಿ ನಗರದ ಹತ್ತಿರ ಒಂದು ಕಿರಿದಾದ ಭೂಭಾಗದ ಪಟ್ಟಿಯಿದೆ. ಈ ಪ್ರದೇಶವು ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶ ದೇಶಗಳ ಗಡಿಗಳಿಂದ ಆವೃತವಾಗಿದೆ. ಇಲ್ಲಿಂದ ಚೀನಾದ ಗಡಿಯೂ ಹತ್ತಿರದಲ್ಲಿದೆ. ಈ ಪಟ್ಟಿಯು ಅತ್ಯಂತ ಕಿರಿದಾಗಿದ್ದು, ಕೆಲವು ಕಡೆಗಳಲ್ಲಿ ಇದರ ಅಗಲ ಕೇವಲ ೨೦ ರಿಂದ ೨೨ ಕಿಲೋಮೀಟರ್ ಮಾತ್ರ ಇದೆ. ಈ ಏಕೈಕ ಭೂಭಾಗವು ಭಾರತದ ಉಳಿದ ಭಾಗವನ್ನು ಈಶಾನ್ಯದ ೮ ರಾಜ್ಯಗಳೊಂದಿಗೆ (ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಮೇಘಾಲಯ) ಸಂಪರ್ಕಿಸುತ್ತದೆ. ಭಾರತದ ನಕ್ಷೆಯಲ್ಲಿ ಈ ಭಾಗವು ಒಂದು ‘ಕೋಳಿಯ ಕುತ್ತಿಗೆಯಂತೆ’ (ಚಿಕನ್ ನೆಕ್) ಕಾಣುತ್ತದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ