ಕಾಶ್ಮೀರದ ಬಗ್ಗೆ ಪಾಕಿಸ್ತಾನ ಹೇಳಿದ್ದ ಕೆಟ್ಟ ಪರಿಸ್ಥಿತಿ ಅಲ್ಲಿ ಇಲ್ಲದಿರುವುದನ್ನು ಕಂಡು ಭಯೋತ್ಪಾದಕನು ವಿಧ್ವಂಸಕ ಕೃತ್ಯವನ್ನು ಬಿಟ್ಟು ಕೂದಲಿಗೆ ಚಿಕಿತ್ಸೆ ಪಡೆದುಕೊಂಡ ! : Terrorist Hair Transplant

ತನಿಖಾ ಸಂಸ್ಥೆಗಳು ಬಂಧಿಸಿದ ನಂತರ ನಡೆಸಿದ ವಿಚಾರಣೆಯಲ್ಲಿ ಭಯೋತ್ಪಾದಕ ನೀಡಿದ ಮಾಹಿತಿ

ಭಯೋತ್ಪಾದಕ ಮೊಹಮ್ಮದ್ ಉಸ್ಮಾನ್ ಜಾಟ್

ಶ್ರೀನಗರ (ಜಮ್ಮು-ಕಾಶ್ಮೀರ) – ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ‘ಲಷ್ಕರ್-ಎ-ತೊಯ್ಬಾ’ದ ಭಯೋತ್ಪಾದಕ ಮೊಹಮ್ಮದ್ ಉಸ್ಮಾನ್ ಜಟ್ ಅಲಿಯಾಸ್ ಚೀನಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಕಾಶ್ಮೀರದ ಮೂಲಕ ಭಾರತದೊಳಗೆ ನುಗ್ಗಿದ್ದನು. ಅವನು ಇಲ್ಲಿ ‘ಸ್ಲೀಪರ್ ಸೆಲ್’ (ಭಯೋತ್ಪಾದಕರಿಗೆ ರಹಸ್ಯವಾಗಿ ಸಹಾಯ ಮಾಡುವ ಮತಾಂಧ ಮುಸ್ಲಿಮರ ಸ್ಥಳೀಯ ಗುಂಪುಗಳು) ಸಿದ್ಧಪಡಿಸುತ್ತಿದ್ದನು; ಆದರೆ ಅವನು ಕಥಿತವಾಗಿ ತನ್ನ ‘ಕಾರ್ಯ’ವನ್ನು ನಿಲ್ಲಿಸಿ ಶ್ರೀನಗರದಲ್ಲಿ ಹೇರ್ ಟ್ರಾನ್ಸ್‌ಪ್ಲಾಂಟ್ (ಕೂದಲು ಕಸಿ) ಮಾಡಿಸಿಕೊಂಡನು. ಕಾಶ್ಮೀರದ ಬಗ್ಗೆ ಅವನಿಗೆ ಏನೆಲ್ಲಾ ಕೆಟ್ಟದ್ದನ್ನು ಹೇಳಲಾಗಿತ್ತೋ, ಅಂತಹದ್ದೇನೂ ಕಾಶ್ಮೀರದಲ್ಲಿ ಅವನಿಗೆ ಕಾಣಿಸಲಿಲ್ಲ. ನಂತರ ಕೂದಲು ಉದುರುತ್ತಿರುವುದರಿಂದ ಚಿಕಿತ್ಸೆ ಪಡೆಯುವ ಅಗತ್ಯವನ್ನು ಅರಿತುಕೊಂಡು ಆತ ‘ಹೇರ್ ಟ್ರಾನ್ಸ್‌ಪ್ಲಾಂಟ್’ ಮಾಡಿಸಿಕೊಂಡನು.

ಉಸ್ಮಾನ್ ಲಾಹೋರ್ ನಿವಾಸಿಯಾಗಿದ್ದಾನೆ. ರಾಷ್ಟ್ರೀಯ ತನಿಖಾ ದಳವು ಆತನನ್ನು ಬಂಧಿಸಿದ್ದು, ಈ ಪ್ರಕರಣದ ತನಿಖೆ ನಡೆಯುತ್ತಿದೆ. ವಿಚಾರಣೆ ವೇಳೆ ಆತ ಮೇಲಿನ ಮಾಹಿತಿ ನೀಡಿದ್ದಾನೆ.

ಸಂಪಾದಕೀಯ ನಿಲುವು

ಭಯೋತ್ಪಾದಕಯ ಈ ದಾವೆಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಮುಂದಿನ ತನಿಖೆಯಿಂದ ಹೊರಬರಲಿದೆ, ಆದರೆ ಇಸ್ಲಾಮಿಕ್ ಜಿಹಾದ್ ಹೆಸರಿನಲ್ಲಿ ಇವರನ್ನು 'ಬ್ರೈನ್ ವಾಶ್' ಮಾಡುವ ರೀತಿ, ಅಲ್ಲಾನ ರಾಜ್ಯವನ್ನು ('ದಾರುಲ್ ಇಸ್ಲಾಂ' ರಾಜ್ಯ) ತರಲು ಅವರಿಗೆ ತರಬೇತಿ ನೀಡುವ ರೀತಿ ನೋಡಿದರೆ, ಈ ಭಯೋತ್ಪಾದಕ ಸುಳ್ಳು ಹೇಳುತ್ತಿದ್ದಾನೆ ಎಂದು ಯಾವುದೇ ಕಾಫಿರ್ ಇಸ್ಲಾಮಿಕ್ ವಿದ್ವಾಂಸನಿಗೆ ಅನಿಸಿದರೆ ಅದರಲ್ಲಿ ತಪ್ಪೇನಿದೆ ?