ಯುವಕರನ್ನು ‘ಜಿರಳೆ’ ಮತ್ತು ‘ಪರಾವಲಂಬಿ’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿಗಳ ಸ್ಪಷ್ಟೀಕರಣ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಯುವಕರನ್ನು ‘ಜಿರಳೆ’ ಮತ್ತು ‘ಪರಾವಲಂಬಿ’ ಎಂದು ಕರೆದಿದ್ದಾರೆಂಬ ಕಾರಣಕ್ಕೆ ಅವರ ಮೇಲೆ ಟೀಕೆಗಳು ವ್ಯಕ್ತವಾಗತೊಡಗಿದ್ದರಿಂದ, ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಿಚಾರಣೆಯೊಂದರಲ್ಲಿ ನಾನು ಮಾತನಾಡಿದ್ದನ್ನು ತಪ್ಪು ರೀತಿಯಲ್ಲಿ ಜನರ ಮುಂದೆ ತರಲಾಗಿದೆ. ಇದರಿಂದ ನನಗೆ ತೀವ್ರ ಆಘಾತ ಮತ್ತು ನೋವುಂಟಾಗಿದೆ. ಭಾರತೀಯ ಯುವಕರನ್ನು ಅವಮಾನಿಸುವ ಯಾವುದೇ ಉದ್ದೇಶ ನನಗಿರಲಿಲ್ಲ. ವಿಚಾರಣೆಯ ಸಮಯದಲ್ಲಿ ಕೆಲವರು ಸುಳ್ಳು ಮತ್ತು ನಕಲಿ ಪದವಿಗಳನ್ನು ಪಡೆದು ವಕೀಲಿ ವೃತ್ತಿಯಂತಹ ಗಂಭೀರ ಕ್ಷೇತ್ರಕ್ಕೆ ಬರುತ್ತಾರೆ. ಅಂತಹ ನಕಲಿ ದಂಧೆ ಮಾಡುವವರನ್ನು ನಾನು ‘ಪರಾವಲಂಬಿಗಳಿಗೆ’ ಹೋಲಿಸಿದ್ದೆನೇ ಹೊರತು, ಯಾವುದೇ ಕಾರಣಕ್ಕೂ ಭಾರತೀಯ ಯುವಕರನ್ನು ಉದ್ದೇಶಿಸಿ ಮಾತನಾಡಿಲ್ಲ. ಭಾರತದ ಪ್ರತಿಯೊಬ್ಬ ಯುವಕನೂ ನನಗೆ ಕೆಲಸ ಮಾಡಲು ಪ್ರೇರಣೆ ನೀಡುತ್ತಾನೆ. ನನಗೆ ಭಾರತೀಯ ಯುವಕರ ಬಗ್ಗೆ ಯಾವಾಗಲೂ ಅಪಾರ ಗೌರವವಿದೆ. ಇಂದಿನ ಯುವಕರೇ ದೇಶದ ಭವಿಷ್ಯ ಮತ್ತು ವಿಕಸಿತ ಭಾರತದ ಭದ್ರ ಸ್ತಂಭಗಳಾಗಿದ್ದಾರೆ ಎಂದು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ