‘ಅಲ್ ಖಲಿಫಾ ಟೂರ್ಸ್ ಆಂಡ್ ಟ್ರಾವೆಲ್ಸ್’ನ ಸಂಚಾಲಕ ಅಮೀರ್ ಶೇಖ್ ಕುಟುಂಬ ಸಮೇತ ಪರಾರಿ!

ಪುಣೆ – ಇಲ್ಲಿನ ಕೊಂಡವಾ ಪರಿಸರದಲ್ಲಿ ಹಜ್ ಯಾತ್ರೆಗೆ ಹೋಗುವ ಭಕ್ತರಿಗೆ ‘ಅಲ್ ಖಲಿಫಾ ಟೂರ್ಸ್ ಆಂಡ್ ಟ್ರಾವೆಲ್ಸ್’ ಸಂಸ್ಥೆಯು ದೊಡ್ಡ ಆರ್ಥಿಕ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ‘khabar_nama_punecity’ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈ ಸಂಸ್ಥೆಯ ಸಂಚಾಲಕನಾದ ಅಮೀರ್ ಶೇಖ್, ಮುಸ್ಲಿಮ್ ಭಕ್ತರಿಂದ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ಹಣದೊಂದಿಗೆ ತನ್ನ ಕುಟುಂಬ ಸಮೇತ ಪರಾರಿಯಾಗಿದ್ದಾನೆ. ಮೇ 17 ರಂದು ಈ ಯಾತ್ರಾರ್ಥಿಗಳ ಪ್ರಯಾಣ ನಿಗದಿಯಾಗಿತ್ತು; ಆದರೆ ಪ್ರಯಾಣದ ದಿನಾಂಕ ಹತ್ತಿರ ಬಂದಾಗ ಟ್ರಾವೆಲ್ಸ್ ಕಚೇರಿ ಮುಚ್ಚಿರುವುದು ಕಂಡುಬಂದಿದೆ ಮತ್ತು ಶೇಖ್ ಜೊತೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಈ ಘಟನೆಯಿಂದ ವಂಚನೆಗೊಳಗಾದ ಭಕ್ತರು ಕೊಂಡವಾ ಪೊಲೀಸ್ ಠಾಣೆಗೆ ಧಾವಿಸಿದರು. ಸದ್ಯ ಅಮೀರ್ ಶೇಖ್ ವಿರುದ್ಧ ಸರಕಾರಿ ನಿಯಮಾನುಸಾರ ಮೊಕದ್ದಮೆ ದಾಖಲಿಸಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ