ನಗರದ ಗಡಿಯಲ್ಲಿ 118 ಹೆಕ್ಟೇರ್ ಜಾಗದಲ್ಲಿ ವಾಹನ ನಿಲುಗಡೆಗೆ ಯೋಜನೆ!

ನಾಶಿಕ – 2027 ರಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಪರ್ವದ ನಿಮಿತ್ತ ದೇಶಾದ್ಯಂತ ಬರುವ ಭಕ್ತರು ಮತ್ತು ಸಾಧು-ಮಹಂತರ ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಸರ್ಕಾರವು 2015 ಕ್ಕೆ ಹೋಲಿಸಿದರೆ ಈ ಬಾರಿ ಸಾಧು ಗ್ರಾಮದ ವಿಸ್ತೀರ್ಣವನ್ನು ಮೂರು ಪಟ್ಟು ಹೆಚ್ಚಿಸಿದೆ. 1,000 ಎಕರೆ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಸಾಧು ಗ್ರಾಮವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ 9 ಪ್ರಮುಖ ರಸ್ತೆಗಳ ಮೂಲಕ ನಾಶಿಕ ನಗರಕ್ಕೆ ಬರುವ ವಾಹನಗಳಿಗಾಗಿ ನಗರದ ಗಡಿಯಲ್ಲಿ 118 ಹೆಕ್ಟೇರ್ ಜಾಗದಲ್ಲಿ ವಾಹನ ನಿಲುಗಡೆ ತಾಣವನ್ನು ನಿರ್ಮಿಸಲಾಗುವುದು. ಇಲ್ಲಿಂದ ರಾಮಕುಂಡ, ತಪೋವನ, ಲಕ್ಷ್ಮೀನಾರಾಯಣ ಘಾಟ್, ರಾಮ ಸಂಗಮ ಮತ್ತು ದಶರಥ ಘಾಟ್ ಗೆ ಹೋಗಲು ಭಕ್ತರಿಗೆ ಅನುಕೂಲವಾಗಲಿದೆ.
1. ನಾಶಿಕದ ಕುಂಭಪರ್ವಕ್ಕೆ ಸರಕಾರದಿಂದ ದೊಡ್ಡ ಪ್ರಮಾಣದಲ್ಲಿ ‘ಬ್ರ್ಯಾಂಡಿಂಗ್’ (ಗುರುತು ಮೂಡಿಸುವ ಪ್ರಕ್ರಿಯೆ) ನಡೆಯುತ್ತಿರುವುದರಿಂದ 5 ಕೋಟಿಗೂ ಅಧಿಕ ಭಕ್ತರು ಬರುವ ಸಾಧ್ಯತೆಯಿದೆ.
2. ಸಾಧು ಗ್ರಾಮದಲ್ಲಿ ಆಂತರಿಕ ರಸ್ತೆಗಳು, ಒಳಚರಂಡಿ, ಜಲಮಾರ್ಗ ಮತ್ತು ವಿದ್ಯುದ್ದೀಕರಣದ ಬೃಹತ್ ಜಾಲವನ್ನು ನಿರ್ಮಿಸಲಾಗುವುದು. ಭಕ್ತರಿಗಾಗಿ ಆಶ್ರಯ ತಾಣಗಳು, ವಾಣಿಜ್ಯ ಸಂಕೀರ್ಣ, ಪೊಲೀಸ್ ಚೌಕಿ, ಆಸ್ಪತ್ರೆಗಳು, ಅಗ್ನಿಶಾಮಕ ದಳದ ಶೆಡ್ ಮತ್ತು ಸೆಕ್ಟರ್ ಕಚೇರಿಗಳನ್ನು ನಿರ್ಮಿಸಲಾಗುವುದು. ಸಾಧು ಗ್ರಾಮ ಪರಿಸರಕ್ಕೆ ವಿಶೇಷ ಅಲಂಕಾರವನ್ನೂ ಮಾಡಲಾಗುವುದು.
3. ಸಾಧು ಗ್ರಾಮಕ್ಕಾಗಿ ತಪೋವನ, ನಾಂದೂರ ಮತ್ತು ಆಗರಟಾಕಳಿಯಲ್ಲಿ 784 ಎಕರೆಯಿಂದ 1,000 ಎಕರೆ ಖಾಸಗಿ ಭೂಮಿಯನ್ನು ಸಂಪಾದಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಬೇಕಿದೆ; ಆದರೆ ಭೂಮಾಲೀಕರು ಶಾಶ್ವತ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆಯು ರೈತರಿಗೆ ಶೇ. 50% ರಷ್ಟು ಟಿ.ಡಿ.ಆರ್. (ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು) ಮತ್ತು ಶೇ. 50% ರಷ್ಟು ನಗದು ಪರಿಹಾರ ನೀಡುವ ಪ್ರಸ್ತಾಪವನ್ನು ಭೂಮಾಲೀಕರು ತಿರಸ್ಕರಿಸಿದ್ದಾರೆ. ‘ಪ್ರಸ್ತುತ ಮಾರುಕಟ್ಟೆ ದರದಂತೆ ಶೇ. 100% ರಷ್ಟು ನಗದು ಪರಿಹಾರ ದೊರೆಯಬೇಕು’ ಎಂಬುದು ಭೂಮಾಲೀಕರ ಬೇಡಿಕೆಯಾಗಿದೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ