‘ನಮ್ಮ ಸರಕಾರವು ಜಾತ್ಯತೀತ ರೀತಿಯಲ್ಲಿ ಕೆಲಸ ಮಾಡಲಿದೆ!’(ಅಂತೆ): TN CM Joseph Vijay

ಬಹುಮತದ ಪರೀಕ್ಷೆಯಲ್ಲಿ ಗೆಲ್ಲುತ್ತಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ ಹೇಳಿಕೆ

ಜೋಸೆಫ್ ವಿಜಯ್

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಜೋಸೆಫ್ ವಿಜಯ ಸರಕಾರವು ವಿಧಾನಸಭೆಯಲ್ಲಿ ಬಹುಮತದ ಪರೀಕ್ಷೆಯನ್ನು ಗೆದ್ದಿದೆ. ಸರಕಾರದ ಪರವಾಗಿ 144 ಮತಗಳು ಬಂದಿವೆ, ಆದರೆ ವಿರೋಧವಾಗಿ ಕೇವಲ 22 ಮತಗಳು ಮಾತ್ರ ಲಭಿಸಿವೆ. ಇದು ವಿಜಯ ಅವರ ಮೊದಲ ದೊಡ್ಡ ಯಶಸ್ಸಾಗಿದೆ. ಈ ವಿಜಯದ ನಂತರ ಮಾತನಾಡಿದ ಮುಖ್ಯಮಂತ್ರಿ ಜೋಸೆಫ್ ವಿಜಯ ಅವರು, “ನಮ್ಮ ಸರಕಾರವು ಜಾತ್ಯತೀತ ತತ್ವದಡಿ ಕೆಲಸ ಮಾಡಲಿದೆ” ಎಂದು ಹೇಳಿದರು.

ತಮಿಳುನಾಡು ವಿಧಾನಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 234 ಆಗಿದೆ. ಯಾವುದೇ ಸರಕಾರಕ್ಕೆ ಬಹುಮತ ಸಾಬೀತುಪಡಿಸಲು 118 ಶಾಸಕರ ಬೆಂಬಲದ ಅಗತ್ಯವಿರುತ್ತದೆ. ಜೋಸೆಫ್ ವಿಜಯ ಅವರ ಸರಕಾರಕ್ಕೆ 144 ಮತಗಳು ದೊರೆತಿವೆ. ಎಐಎಡಿಎಂಕೆ (AIADMK) ಶಾಸಕರು ಕೂಡ ಅವರ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ‘ಜಾತ್ಯತೀತ ಸರಕಾರ’ ಎಂದರೆ ಹಿಂದೂಗಳನ್ನು ಹೊರತುಪಡಿಸಿ ಉಳಿದ ಧರ್ಮದವರಿಗೆ, ವಿಶೇಷವಾಗಿ ಮುಸ್ಲಿಮರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವುದು ಮತ್ತು ಅವರನ್ನು ಅತೀ ಹೆಚ್ಚು ಮುತುವರ್ಜಿಯಿಂದ ಪೋಷಿಸುವುದು! ಆದ್ದರಿಂದ ಹಿಂದೂ ವಿರೋಧಿ ಡಿಎಂಕೆ ಪಕ್ಷವನ್ನು ಬದಿಗೊತ್ತಿ ಜೋಸೆಫ್ ವಿಜಯ ಅವರ ಟಿವಿಕೆ (TVK) ಪಕ್ಷವನ್ನು ಆಯ್ಕೆ ಮಾಡಿದ ಅಲ್ಲಿನ ಹಿಂದೂಗಳ ಸ್ಥಿತಿ ಬಿಸಿ ತುಪ್ಪದಂತೆ ಆದರೆ ಆದಲ್ಲಿ ಅಚ್ಚರಿಪಡಬೇಕಿಲ್ಲ!