‘ಸನಾತನವು ಜನರನ್ನು ವಿಭಜಿಸುವ ಕೆಲಸ ಮಾಡಿದ್ದರಿಂದ ಅದನ್ನು ನಾಶಪಡಿಸಬೇಕು (ಅಂತೆ) !’

ಜನರು ಅಧಿಕಾರದಿಂದ ಕೆಳಗಿಳಿಸಿದ ನಂತರವೂ ತಮಿಳುನಾಡಿನ ದ್ರಮುಕದ ನಾಯಕ ಉದಯನಿಧಿ ಸ್ಟಾಲಿನರಿಂದ ಪುನಃ ಸನಾತನ ವಿರೋಧಿ ಹೇಳಿಕೆ

ದ್ರಮುಕದ ನಾಯಕ ಉದಯನಿಧಿ ಸ್ಟಾಲಿನ್

ಚೆನ್ನೈ (ತಮಿಳುನಾಡು) – ಜನರನ್ನು ವಿಭಜಿಸುವ ಕೆಲಸ ಮಾಡಿರುವ ಸನಾತನವನ್ನು ನಾಶಪಡಿಸಬೇಕು ಎಂದು ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ದ್ರಮುಕದ ಶಾಸಕರಾದ ಉದಯನಿಧಿ ಸ್ಟಾಲಿನರವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮೊದಲು ರಾಷ್ಟ್ರಗೀತೆ ‘ಜನ ಗಣ ಮನ’, ನಂತರ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಮತ್ತು ಅದರ ನಂತರ ತಮಿಳುನಾಡಿನ ರಾಜ್ಯಗೀತೆಯನ್ನು ಹಾಕುತ್ತಿರುವುದರ ಕುರಿತು ವಿವಾದ ಉಂಟಾಗಿದೆ. ರಾಜ್ಯದ ನಿಯಮಾನುಸಾರ ಮೊದಲು ರಾಜ್ಯಗೀತೆಯನ್ನು ನುಡಿಸುವುದು ಅವಶ್ಯಕ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಅದರ ಬಗ್ಗೆ ಮಾತನಾಡುವಾಗ ಉದಯನಿಧಿ ಅವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಸಂಪಾದಕೀಯ ನಿಲುವು

  • ದೇಶದಲ್ಲಿರುವ ಜಿಹಾದಿ ಭಯೋತ್ಪಾದನೆ, ನಕ್ಸಲವಾದ, ಭ್ರಷ್ಟಾಚಾರ, ಜಾತಿಭೇದವಲ್ಲ, ಬದಲಾಗಿ ಸನಾತನವು ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಹೇಳುವ ಉದಯನಿಧಿಯವರ ಬುದ್ಧಿಮಟ್ಟವು ಇದರಿಂದ ಸ್ಪಷ್ಟವಾಗುತ್ತದೆ !
  • ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದಿದ್ದಕ್ಕಾಗಿ ಜನರು ಉದಯನಿಧಿಯವರ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿದರೂ ಅವರಿಗೆ ಬುದ್ಧಿ ಬಂದಿಲ್ಲ. ಈಗ ಜನರು ಅವರ ಪಕ್ಷದ ರಾಜಕೀಯ ಅಂತ್ಯ ಮಾಡುವುದು ಆವಶ್ಯಕವಾಗಿದೆ !