
೧. ೨೨ ಜನವರಿ ೨೦೨೪ – ದೇಶದ ಇತಿಹಾಸಕ್ಕೆ ತಿರುವು ನೀಡಿದ ದಿನ !
ಪುಷ್ಯ ಶುಕ್ಲ ದ್ವಾದಶಿ, ಅಂದರೆ ೨೨ ಜನವರಿ ೨೦೨೪ ರಂದು, ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿದ ಭವ್ಯ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆ ನೆರವೇರಿತು. ದೇಶದ ಇತಿಹಾಸಕ್ಕೆ ತಿರುವು ನೀಡಿದ ಈ ಸಮಾರಂಭವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನರು ವೀಕ್ಷಿಸಿದರು. ‘ಆನ್ಲೈನ್ ವೀಕ್ಷಣೆಯ ಎಲ್ಲ ವಿಶ್ವ ದಾಖಲೆಗಳು ಮುರಿಯಲ್ಪಟ್ಟವು ! ಆಸೇತುಹಿಮಾಚಲದ ವರೆಗೆ, ಭಾರತದ ಎಲ್ಲ ನಗರಗಳಲ್ಲಿ ಮತ್ತು ೬ ಲಕ್ಷಕ್ಕಿಂತಲೂ ಹೆಚ್ಚು ಗ್ರಾಮಗಳಲ್ಲಿ ಈ ದಿನವನ್ನು ಯಾವುದೇ ಉತ್ಸವಕ್ಕಿಂತಲೂ ಹೆಚ್ಚು ಉತ್ಸಾಹದಿಂದ ಆಚರಿಸಲಾಯಿತು. ಇದೆಲ್ಲವೂ ಅದ್ಭುತ ಮತ್ತು ಅಭೂತಪೂರ್ವವಾಗಿದೆ. ಇದು ಕಲ್ಪನಾತೀತವಾಗಿದೆ. ‘ಭಾರತದ ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ಸಮಗ್ರ ದೇಶವು ಒಮ್ಮನಸ್ಸಿನಿಂದ, ಒಕ್ಕೊರಳಿನಿಂದ ಸಂಭ್ರಮಿಸುವಂತಹದ್ದು’ ಈ ಮೊದಲು ಎಂದಿಗೂ ಸಂಭವಿಸಿರಲಿಲ್ಲ. ಆದುದರಿಂದಲೇ ಇದು ಐತಿಹಾಸಿಕವಾಗಿದೆ.

೨. …ಮತ್ತು ವಿಭಜಕ ಮನಸ್ಥಿತಿಯಲ್ಲಿ ಸಿಲುಕಿದ್ದ ಭಾರತವು ಇದ್ದಕ್ಕಿದ್ದಂತೆ ಬದಲಾಯಿತು !
ಶ್ರೀರಾಮಮಂದಿರದ ನಿಮಿತ್ತದಿಂದ ಇಡೀ ದೇಶವು ಒಂದೇ ಭಾವನೆಯಿಂದ ಮಾತನಾಡಲು ಪ್ರಾರಂಭಿಸಿತು, ಇದು ಮುಖ್ಯ. ಜಾತಿ-ಪಂಥಗಳ ಅಡೆತಡೆಗಳನ್ನು ಮೀರಿ, ಉತ್ತರ-ದಕ್ಷಿಣದಂತಹ ಭೌಗೋಳಿಕ ಭೇದಗಳನ್ನು ಬದಿಗಿರಿಸಿ ಭಾರತವು ಒಗ್ಗಟ್ಟಿನ ದರ್ಶನ ನೀಡಿತು. ವಿಭಜಕ ಮನಸ್ಥಿತಿಯಲ್ಲಿ ಸಿಲುಕಿದ್ದ ಈ ದೇಶವು ಇದ್ದಕ್ಕಿದ್ದಂತೆ ಹೇಗೆ ಬದಲಾಯಿತು ಎಂಬುದು ಜಗತ್ತಿಗೆ ಒಂದು ಒಗಟಾಯಿತು. ಇದರ ಹಿಂದೆ ಶ್ರೀರಾಮ ಮಂದಿರಕ್ಕಾಗಿ ಮಾಡಿದ ೫೫೦ ವರ್ಷಗಳ ರಕ್ತಸಿಕ್ತ ಹೋರಾಟದ ಇತಿಹಾಸವಿದೆ.
೩.‘ಸ್ವ’ದ ಜಾಗೃತಿ ಆಯಿತು, ಈಗ ಆಚರಣೆಯಲ್ಲಿ ತನ್ನಿ !
ರಾಮರಾಜ್ಯದ ನಾಗರಿಕರು ಪ್ರಾಮಾಣಿಕ, ಮುಗ್ಧ, ಸರಳ, ನೇರ ಕಷ್ಟಪಟ್ಟು ದುಡಿಯುವವರಾಗಿದ್ದರು. ಯಾವ ರಾಮರಾಜ್ಯಕ್ಕಾಗಿ ಶ್ರೀರಾಮಮಂದಿರದ ಹೋರಾಟ ಮಾಡಲಾಯಿತೋ, ಆ ರಾಮರಾಜ್ಯವನ್ನು ನಿಜವಾಗಿ ತರುವುದು ಈಗ ನಾಗರಿಕರ ಕರ್ತವ್ಯವಾಗಿದೆ, ಕೇವಲ ಆಡಳಿತಗಾರರದ್ದಲ್ಲ; ಆದುದರಿಂದಲೇ ರಾಮರಾಜ್ಯದ ಕಡೆಗೆ ಸಾಗುವ ಶ್ರೀರಾಮಮಂದಿರದ ಹಂತವು ಪೂರ್ಣಗೊಂಡಿದೆ. ಕೋಟ್ಯಂತರ ಭಾರತೀಯರ ‘ಸ್ವ’ ಜಾಗೃತ ಗೊಂಡಿದೆ. ಈ ‘ಸ್ವ’ವನ್ನು ವಾಸ್ತವದಲ್ಲಿ ತರುವುದು ಮುಂದಿನ ಹಂತವಾಗಿದೆ. ಸ್ವಭಾಷೆ, ಸ್ವಭಾಷೆಯ ಮೂಲಕ ಶಿಕ್ಷಣ, ಪರಂಪರೆ, ಸ್ವಧರ್ಮ ಮತ್ತು ಸ್ವಭಾಷೆಯಲ್ಲಿ ಸಹಿ ಮಾಡುವುದಕ್ಕೆ ಆಗ್ರಹವಿರಬೇಕು. ಇದನ್ನು ಮಾಡಲು ನಮಗೆ ಸಾಧ್ಯವಾದರೆ ಭಾರತವು ವೈಭವಸಂಪನ್ನವಾಗುವುದು ಮಾತ್ರವಲ್ಲ; ಸಮಾಜ ದಲ್ಲಿಯೂ ರಾಮರಾಜ್ಯ ನಿರ್ಮಾಣವಾಗುತ್ತದೆ.
– ಶ್ರೀ. ಪ್ರಶಾಂತ ಪೋಳ (ಪೂರ್ವ ಪ್ರಕಟಣೆ, ‘ಸೇವಾ ವರ್ಧಿನಿ’ ವಾರ್ಷಿಕ ವರದಿ, ೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !