ಮಮತಾ ಬ್ಯಾನರ್ಜಿ ಅವರ ನಿವಾಸದ ಮೇಲೆ ಭಾರತೀಯ ಸೇನೆಯಿಂದ ದಾಳಿ: ಪಾಕಿಸ್ತಾನದ ಅಪಪ್ರಚಾರ

ನವದೆಹಲಿ – ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸೈನಿಕರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂಬ ಅಪಪ್ರಚಾರವನ್ನು ಪಾಕಿಸ್ತಾನವು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿದೆ. ಈ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ನಕಲಿ ಆಗಿವೆ. ಕೋಲಕಾತಾ ನಗರಕ್ಕೆ ಸೇನೆ ನುಗ್ಗಿರುವ ಅಥವಾ ಮುಖ್ಯಮಂತ್ರಿಗಳ ಮೇಲೆ ದಾಳಿ ನಡೆದಿರುವ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಪತ್ರ ಮಾಹಿತಿ ಕಾರ್ಯಾಲಯ (PIB) ಮತ್ತು ಕೋಲಕಾತಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದೆಲ್ಲವೂ ವ್ಯವಸ್ಥಿತವಾಗಿ ರೂಪಿಸಿದ ಪಿತೂರಿಯ ಭಾಗವಾಗಿ ಹಬ್ಬಿಸಲಾದ ಅಪಪ್ರಚಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ದಿಕ್ಕು ತಪ್ಪಿಸುವ ಮಾಹಿತಿಯನ್ನು ಹರಡುವವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರು ಇಂತಹ ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಲಾಗಿದೆ.

ಮಾಡಲಾದ ದಾವೆ ಏನು?

ಸಾಮಾಜಿಕ ಜಾಲತಾಣದ ‘ಅನುಷಿ ತಿವಾರಿ’ ಎಂಬ ಹೆಸರಿನ ಖಾತೆಯಿಂದ, ಬಹಳ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೇನೆಯು ಕೋಲಕಾತಾ ಪ್ರವೇಶಿಸುತ್ತಿದೆ. ಸಾರ್ವಜನಿಕರು ಸೇನೆಯ ಹಾದಿಯನ್ನು ತಡೆದಿದ್ದಾರೆ. ಈ ಸಮಯದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಸೈನಿಕರು ಮಮತಾ ಬ್ಯಾನರ್ಜಿ ಅವರ ಮನೆಯ ಮೇಲೆ ದಾಳಿ ಮಾಡಿದ್ದು, ಅವರು ಗಾಯಗೊಂಡಿದ್ದಾರೆ. ಕೇಂದ್ರ ಸರಕಾರವು ವಿದೇಶಿ ರಾಯಭಾರ ಕಚೇರಿಗಳನ್ನು ಮುಚ್ಚಲು ಆದೇಶಿಸಿದೆ’, ಎಂದು ಹೇಳಲಾಗಿತ್ತು.

ಪಾಕಿಸ್ತಾನದ ಪಿತೂರಿ!

ಈ ಎಲ್ಲಾ ದಾವೆಗಳು ಸುಳ್ಳು ಎಂದು ಪತ್ರ ಮಾಹಿತಿ ಕಾರ್ಯಾಲಯ ತಿಳಿಸಿದೆ. ಇದು ಪಾಕಿಸ್ತಾನಿ ವ್ಯವಸ್ಥೆಯಿಂದ ನಡೆಸಲ್ಪಡುತ್ತಿರುವ ಅಪಪ್ರಚಾರ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಯಲ್ಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹಳೆಯ ಮತ್ತು ಈ ಘಟನೆಗೆ ಸಂಬಂಧವಿಲ್ಲದ ವೀಡಿಯೊಗಳನ್ನು ತಪ್ಪಾದ ರೀತಿಯಲ್ಲಿ ಜೋಡಿಸಿ ಶಾಂತಿ ಭಂಗಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನವು ಕುತಂತ್ರಗಳಲ್ಲಿ ಎಷ್ಟು ಚತುರವಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ! ಇಂತಹ ಪಾಕಿಸ್ತಾನಕ್ಕೆ ಅದಕ್ಕೆ ಅರ್ಥವಾಗುವ ಭಾಷೆಯಲ್ಲೇ ಪ್ರತ್ಯುತ್ತರ ನೀಡುವುದು ಅಗತ್ಯ!