ಪೀಡಿತ ಹಿಂದೂ ಯುವಕನಿಗೆ ಶಿರ್‌ಕುರ್ಮಾ ತಿನ್ನಲು ನೀಡಿದರು; ಬಲವಂತವಾಗಿ ನಮಾಜ್ ಮಾಡಿಸಿದರು!

ನಾಶಿಕ್‌ನ ಟಿ.ಸಿ.ಎಸ್. ಸಂಸ್ಥೆಯಲ್ಲಿ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ

ನಾಶಿಕ್ – ಇಲ್ಲಿ ಟಿ.ಸಿ.ಎಸ್. ಸಂಸ್ಥೆಯ ಧರ್ಮಾಂತರ ಪ್ರಕರಣದಲ್ಲಿ ಪೀಡಿತ ಹಿಂದೂ ಯುವಕನಿಗೆ ಈದ್ ದಿನ ಶಿರ್‌ಕುರ್ಮಾ ತಿನ್ನಲು ನೀಡಿ, ಅದರಲ್ಲಿ ಗುಂಗುಮಾಡುವ ಔಷಧ ಮಿಶ್ರಣ ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ. ಇದರಿಂದ ಯುವಕನ ಧರ್ಮಾಂತರದ ಸಂಚು ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಯುವಕನು ಶುದ್ಧಿಯಲ್ಲಿರದಿದ್ದರೂ ಅವನ ತಲೆಯ ಮೇಲೆ ಟೋಪಿ ಇಟ್ಟು, ಬಲವಂತವಾಗಿ ನಮಾಜ್ ಪಠಣ ಮಾಡಿಸಿದರು ಎಂದು ಪೀಡಿತನು ಹೇಳಿದ್ದಾನೆ. ಶಿರ್‌ಕುರ್ಮಾದಲ್ಲಿ ನಿಜವಾಗಿಯೂ ಗುಂಗುಮಾಡುವ ಔಷಧವಿತ್ತೇ ಅಥವಾ ಅಮಲಿ ಪದಾರ್ಥವಿತ್ತೇ ಎಂಬುದರ ತನಿಖೆ ನಡೆಯುತ್ತಿದೆ.

ನಮಾಜ್ ಪಠಣ ಮಾಡುವಾಗ ಪೀಡಿತ ಯುವಕನ ಚಿತ್ರಗಳನ್ನು ಕಚೇರಿಯ ಗುಂಪಿನಲ್ಲಿ ಹಂಚಿ, ಅವನ ಮನೋಬಲ ಕುಗ್ಗಿಸುವ ಉದ್ದೇಶ ಹೊಂದಿದ್ದರು. ಸಂಶಯಿತರವರು ಪೀಡಿತನಿಗೆ ‘ಬ್ಲ್ಯಾಕ್ ಮ್ಯಾಜಿಕ್’ (ಕಾಳಿ ಜಾದು) ಆಗಿದೆ ಎಂದು ಹೇಳಿ ಭಯ ಹುಟ್ಟಿಸಿದರು. ‘ನಿನ್ನ ಮೇಲೆ ಸಂಕಟ ಇದೆ’ ಎಂದು ಭಾವನೆ ಮೂಡಿಸಿ ಧರ್ಮಾಂತರ ಮಾಡಲು ಯತ್ನಿಸಿದರು. ಈ ಪ್ರಕರಣದಲ್ಲಿ ಬಳಸಿದ ೨ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಶಯಿತ ದಾನಿಶ್ ಶೇಖ್ ೨೦೧೭ರಲ್ಲಿ ಹಿರಿಯ ಅಧಿಕಾರಿಯ ಶಿಫಾರಸಿನಿಂದ ಸಂಸ್ಥೆಯಲ್ಲಿ ಕೆಲಸ ಪಡೆದಿದ್ದಾನೆ ಎಂಬುದು ಬಹಿರಂಗವಾಗಿದೆ.

ಸಂಶಯಿತನ ಮೊಬೈಲ್‌ನಲ್ಲಿ ಪತ್ತೆಯಾದ ಆಘಾತಕಾರಿ ಸಂಭಾಷಣೆಗಳು

ದಾನಿಶ್ ಶೇಖ್‌ನ ‘Face ID’ ಬಳಸಿ ಫಾರೆನ್ಸಿಕ್ ಲ್ಯಾಬ್‌ನಲ್ಲಿ ಅವನ ಮೊಬೈಲ್ ಅನ್ಲಾಕ್ ಮಾಡಲಾಯಿತು. ಅದರಲ್ಲಿ ಅನೇಕ ಆಘಾತಕಾರಿ ಸಂಭಾಷಣೆಗಳು, ಆರ್ಥಿಕ ವ್ಯವಹಾರಗಳು, ವಿದೇಶಿ ಹಣಕಾಸು ವ್ಯವಹಾರಗಳು ಹಾಗೂ ಒಬ್ಬ ಪೀಡಿತ ಯುವತಿಯನ್ನು ಮಲೇಶಿಯಾಗೆ ಕಳುಹಿಸುವ ಸಂದೇಶಗಳು ಪತ್ತೆಯಾಗಿವೆ.

ಸಂಪಾದಕೀಯ ನಿಲುವು

ನಾಸಿಕ್ ಪ್ರಕರಣದ ಪ್ರತಿಯೊಂದು ಆಘಾತಕಾರಿ ಘಟನೆಯ ಮೂಲಕ ಧಾರ್ಮಿಕ ಮತಾಂಧರ ಹಿಂದೂ ವಿರೋಧಿ ಪಿತೂರಿ ಬಹಿರಂಗಗೊಳ್ಳುತ್ತಿದೆ. ಧಾರ್ಮಿಕ ಮತಾಂಧರ ವಾಸ್ತವಕ್ಕೆ ಹಿಂದೂಗಳು ಈಗಲೇ ಎಚ್ಚರಗೊಳ್ಳಬೇಕು!