ಪ್ರಹಾರ್ ಜನಶಕ್ತಿ ಪಕ್ಷದ ಸಂಸ್ಥಾಪಕ ಬಚ್ಚು ಕಡು ಅವರ ಶಿವಸೇನೆಗೆ ಪ್ರವೇಶ !

ಮುಂಬಯಿ – ಪ್ರಹಾರ್ ಜನಶಕ್ತಿ ಪಕ್ಷದ ಸಂಸ್ಥಾಪಕ ಬಚ್ಚು ಕಡು ಅವರು ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ನೇತೃತ್ವದ ಶಿವಸೇನೆಗೆ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಬಚ್ಚು ಕಡು ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ, ನಾನು ರೈತರು, ಕಾರ್ಮಿಕರು, ದಿವ್ಯಾಂಗರಿಗಾಗಿ ಧನುಸ್ಸು-ಬಾಣವನ್ನು ಕೈಗೆ ತೆಗೆದುಕೊಳ್ಳಲಿದ್ದೇನೆ, ಅಂದರೆ ಶಿವಸೇನೆಗೆ ಪ್ರವೇಶ ಮಾಡಲಿದ್ದೇನೆ. ಅವರ ಪ್ರಹಾರ್ ಸಂಘಟನೆಯು ಹೇಗಿದೆಯೋ ಹಾಗೆಯೇ ಉಳಿಯಲಿದೆ, ಎಂದೂ ಅವರು ಸ್ಪಷ್ಟಪಡಿಸಿದರು.