‘ನೀವು ನಿಮ್ಮ ಮಗಳ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದೀರಿ!’

ಕೋಲಕಾತಾ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ಹಾಗೂ ಬಿಜೆಪಿ ಅಭ್ಯರ್ಥಿ ರತ್ನಾ ದೆಬನಾಥ್ ಅವರಿಗೆ ತೃಣಮೂಲ ಕಾಂಗ್ರೆಸ್ ಗುಂಡಾಗಳಿಂದ ನಿಂದನೆ

ಕೋಲಕಾತಾ (ಬಂಗಾಳ) – ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನವು ಏಪ್ರಿಲ್ 29 ರಂದು ಹಿಂಸಾಚಾರದ ನಡುವೆ ನಡೆಯಿತು. ಶೇ. 91.66% ರಷ್ಟು ನಾಗರಿಕರು ಮತದಾನ ಮಾಡಿದ್ದರೂ, ಹಲವೆಡೆ ಹಲ್ಲೆ ಪ್ರಕರಣಗಳು ನಡೆದಿವೆ. ರಾಜ್ಯದ ಪಾಣಿಹಾಟಿಯಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾ ದೆಬನಾಥ್ ಅವರಿಗೆ ತೃಣಮೂಲ ಕಾಂಗ್ರೆಸ್ ಗುಂಡಾಗಳು ಮಾನಸಿಕ ಕಿರುಕುಳ ನೀಡಿದ್ದಾರೆ. ದೆಬನಾಥ್ ಅವರನ್ನು ವಿರೋಧಿಸಿ ಅವರ ವಿರುದ್ಧ ‘ವಾಪಸ್ ಹೋಗಿ’ (ಗೋ ಬ್ಯಾಕ್) ಎಂದು ಘೋಷಣೆ ಕೂಗಲಾಯಿತು. ತೃಣಮೂಲ ಬೆಂಬಲಿಗರು ತಮ್ಮ ಮೇಲೆ ದಾಳಿ ನಡೆಸಿದ್ದಾರೆಂದು ದೆಬನಾಥ್ ಹೇಳಿದ್ದಾರೆ. ಅಲ್ಲದೆ, “ನಾನು ನನ್ನ ಮಗಳ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ತೃಣಮೂಲ ಕಾಂಗ್ರೆಸ್ ಗುಂಡಾಗಳು ನನ್ನನ್ನು ನಿಂದಿಸಿದ್ದಾರೆ” ಎಂದು ದೆಬನಾಥ್ ಆರೋಪಿಸಿದ್ದಾರೆ.

ರತ್ನಾ ದೆಬನಾಥ್ ಅವರ ಮಗಳ ಮೇಲೆ 21 ತಿಂಗಳ ಹಿಂದೆ, ಅಂದರೆ ಆಗಸ್ಟ್ 9, 2024 ರಂದು ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯ ಬಗ್ಗೆ ಭಾರತಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಹಲವೆಡೆ ವೈದ್ಯರು ಈ ಘಟನೆಯ ವಿರುದ್ಧ ಪ್ರತಿಭಟನೆ ಮತ್ತು ಮೆರವಣಿಗೆಗಳನ್ನು ನಡೆಸಿದ್ದರು. ತಮ್ಮ ಮಗಳಿಗೆ ನ್ಯಾಯ ಸಿಗಬೇಕೆಂಬ ಬೇಡಿಕೆಯೊಂದಿಗೆ ದೆಬನಾಥ್ ಚುನಾವಣಾ ಕಣಕ್ಕಿಳಿದಿದ್ದು, ಈ ಹೋರಾಟವನ್ನು ತಮ್ಮ ‘ವೈಯಕ್ತಿಕ ಹೋರಾಟ’ ಎಂದು ಅವರು ಕರೆದಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಅಸಂವೇದನಾಶೀಲ ಕಾರ್ಯಕರ್ತರಿಂದ ಕೂಡಿರುವ ತೃಣಮೂಲ ಕಾಂಗ್ರೆಸ್ ಅನ್ನು ನಿಷೇಧಿಸಲು ಈಗ ಬಂಗಾಳ ಸೇರಿದಂತೆ ಭಾರತದಾದ್ಯಂತ ಹಿಂದೂಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು!