ಭಾರತ ಎಂದಿಗೂ ಆಕ್ರಮಣವನ್ನು ಮರೆಯುವುದಿಲ್ಲ ! : Pahalgam Attack Anniversary

ಪಹಲ್ಗಾಮ್ (ಜಮ್ಮು-ಕಾಶ್ಮೀರ) ಇಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಪೋಸ್ಟ್

ನವದೆಹಲಿ – ಮಾನವೀಯತೆಯ ಮಿತಿಗಳನ್ನು ಮೀರಿದಾಗ, ಪ್ರತ್ಯುತ್ತರವು ನಿರ್ಣಾಯಕವಾಗಿರುತ್ತದೆ. ಭಾರತ ಎಂದಿಗೂ ಆಕ್ರಮಣವನ್ನು ಮರೆಯುವುದಿಲ್ಲ. ಯಾವ ನಿರಪರಾಧಿಗಳ ಬಲಿ ಪಡೆಯಲಾಗಿದೆಯೋ, ಅವರಿಗೆ ನ್ಯಾಯ ಒದಗಿಸಲಾಗಿದೆ. ಭಾರತ ಒಗ್ಗಟ್ಟಾಗಿದೆ, ಎಂಬ ಪೋಸ್ಟ್ ಅನ್ನು ಭಾರತೀಯ ಸೇನೆಯು ‘ಎಕ್ಸ್’ನಲ್ಲಿ ಮಾಡಿದೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಕಳೆದ ವರ್ಷ ಹಿಂದೂಗಳನ್ನು ಜಿಹಾದಿ ಭಯೋತ್ಪಾದಕರು ಧರ್ಮವನ್ನು ಕೇಳಿ ಕೊಂದ ಘಟನೆಗೆ ಒಂದು ವರ್ಷ ತುಂಬಿದ ನಿಮಿತ್ತ ಸೇನೆಯು ಈ ಪೋಸ್ಟ್ ಮಾಡಿದೆ. ಭಾರತೀಯ ಸೇನೆಯು ಈ ಘಟನೆಯ ಪ್ರತೀಕಾರ ತೀರಿಸಿಕೊಳ್ಳಲು ‘ಆಪರೇಷನ್ ಸಿಂದೂರ’ವನ್ನು ಹಮ್ಮಿಕೊಂಡು ಪಾಕಿಸ್ತಾನದ ಜಿಹಾದಿ ಭಯೋತ್ಪಾದಕರ ೯ ನೆಲೆಗಳನ್ನು ನಾಶಪಡಿಸಿತ್ತು, ಹಾಗೆಯೇ ಪಾಕಿಸ್ತಾನದ ವಾಯುಪಡೆ ಮತ್ತು ಸೈನ್ಯದ ನೆಲೆಗಳನ್ನು ಧ್ವಂಸಗೊಳಿಸಿತ್ತು.