ಸಂತ್ರಸ್ತೆಯ ಗರ್ಭಪಾತ ಮಾಡಿಸಿದ
ಮತಾಂತರಗೊಳ್ಳಲು ಒತ್ತಡ
ಬುರ್ಖಾ ಧರಿಸಲು ಮತ್ತು ಕಲ್ಮಾ (ಅಲ್ಲಾನನ್ನು ಸ್ತುತಿಸುವ ವಾಕ್ಯಗಳು) ಪಠಿಸಲು ಬಲವಂತ

ಇಂದೂರ (ಮಧ್ಯಪ್ರದೇಶ) – ಮಧ್ಯಪ್ರದೇಶದ ಇಂದೂರನಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ೧೯ ವರ್ಷದ ಸಂತ್ರಸ್ತ ಹಿಂದೂ ವಿದ್ಯಾರ್ಥಿನಿಯು ಅಬ್ದುಲ್ ಅಜೀಜ್ ಪಠಾಣ್ ಎಂಬಾತನ ಮೇಲೆ ಬಲಾತ್ಕಾರ, ಬ್ಲ್ಯಾಕ್ಮೇಲಿಂಗ್, ಮತಾಂತರಕ್ಕಾಗಿ ಒತ್ತಡ ಹೇರಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಅಬ್ದುಲ್ ಅಜೀಜ್ ಪಠಾಣ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
೧. ಸಂತ್ರಸ್ತೆಯ ಹೇಳಿಕೆಯಂತೆ, ೧ ವರ್ಷದ ಹಿಂದೆ ಆಕೆಗೆ ಆರೋಪಿಯ ಪರಿಚಯವಾಗಿತ್ತು. ಆತ ತನ್ನ ಸುಳ್ಳು ಗುರುತನ್ನು ಹೇಳಿಕೊಂಡು ತನ್ನ ಹೆಸರು ರಾಹುಲ್ ಎಂದು ತಿಳಿಸಿದ್ದನು. ಸಂವಹನ ಹೆಚ್ಚಾದ ನಂತರ ಆರೋಪಿಯು ವಿಶ್ವಾಸವನ್ನು ಗಳಿಸಿ ಮದುವೆಯ ಪ್ರಸ್ತಾಪ ಇಟ್ಟಿದ್ದನು. ಒಂದು ದಿನ ಆತ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದನು. ಅಲ್ಲಿ ಮನೆಯವರ ಅನುಪಸ್ಥಿತಿಯ ಲಾಭ ಪಡೆದು ಮದುವೆಯ ಆಮಿಷ ತೋರಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದನು.
೨. ಸಂತ್ರಸ್ತ ಹಿಂದೂ ಯುವತಿಯು ಮದುವೆಯ ಬಗ್ಗೆ ಮಾತನಾಡಿದಾಗ, ಆರೋಪಿಯು ತನ್ನ ನಿಜವಾದ ಗುರುತು ಅಬ್ದುಲ್ ಅಜೀಜ್ ಪಠಾಣ್ ಎಂದು ಹೇಳಿದನು ಮತ್ತು ಮದುವೆಗಾಗಿ ಮತಾಂತರವಾಗಬೇಕೆಂದು ಶರತ್ತು ವಿಧಿಸಿದನು. ಅಂದಿನಿಂದ ಆತ ಆಕೆಯ ಮೇಲೆ ಮತಾಂತರಕ್ಕಾಗಿ ನಿರಂತರವಾಗಿ ಒತ್ತಡ ಹೇರಲಾರಂಭಿಸಿದನು.
೩. ಸಂತ್ರಸ್ತೆಯು ವಿರೋಧಿಸಿದಾಗ, ಆರೋಪಿಯು ಆಕೆಯ ಅಶ್ಲೀಲ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದನು ಮತ್ತು ಅದೇ ಆಧಾರದ ಮೇಲೆ ಹಲವಾರು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದನು. ಆರೋಪಿಯು ಆಕೆಗೆ ಅಮಲು ಪದಾರ್ಥಗಳನ್ನು ತಿನ್ನಿಸಿದನು. ಬುರ್ಖಾ ಧರಿಸುವಂತೆ ಒತ್ತಾಯ ಮಾಡಿದನು ಹಾಗೂ ಕಲ್ಮಾ (ಅಲ್ಲಾನನ್ನು ಸ್ತುತಿಸುವ ವಾಕ್ಯಗಳು) ಬಲವಂತವಾಗಿ ಓದಿಸಿದನು.
೪. ಆರೋಪಿಯು ಸಂತ್ರಸ್ತ ಯುವತಿಯ ಮೇಲೆ ಒತ್ತಡ ಹೇರಿ ಗರ್ಭಪಾತ ಮಾಡಿಸಿದ.
೫. ಸಂತ್ರಸ್ತ ವಿದ್ಯಾರ್ಥಿನಿಯು ಬೇಸತ್ತು ಇಂದೂರ ತೊರೆದು ತನ್ನ ಊರಾದ ಛಿಂದವಾಡಾಗೆ ತೆರಳಿ ಕುಟುಂಬದವರಿಗೆ ಸಂಪೂರ್ಣ ಘಟನೆಯನ್ನು ತಿಳಿಸಿದಳು. ತದನಂತರ ಸಂತ್ರಸ್ತ ವಿದ್ಯಾರ್ಥಿನಿಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ