ಕಣ್ಣೂರು (ಕೇರಳಮ್): 15 ವರ್ಷಗಳ ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ವಾಹನದ ಮೇಲೆ ಬಾಂಬ್ ಎಸೆದ ಪ್ರಕರಣ

ಕಣ್ಣೂರು (ಕೇರಳಮ್) – 15 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಭಾರತೀಯ ಜನತಾ ಪಕ್ಷದ (BJP) ಕಾರ್ಯಕರ್ತರ ಮೇಲೆ ನಡೆದ ಬಾಂಬ್ ದಾಳಿ ಪ್ರಕರಣದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ (CPM) 10 ಕಾರ್ಯಕರ್ತರನ್ನು ದೋಷಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷೆ ವಿಧಿಸಿದ್ದು, ಒಟ್ಟಾರೆ 25 ವರ್ಷಗಳವರೆಗೆ ಶಿಕ್ಷೆ ನೀಡಲಾಗಿದೆ.
🚨 Kerala Bomb Attack Case: Verdict After 15 Years!
In the Kannur case of a bomb attack on a vehicle carrying RSS & BJP workers, 10 CPI(M) workers have been sentenced to 25 years in prison. ⚖️
RS MP @SadanandanMash once displayed his prosthetic limbs in Parliament, exposing the… https://t.co/hoT8rvjurv pic.twitter.com/eWY6mdq7PR
— Sanatan Prabhat (@SanatanPrabhat) April 19, 2026
ಸರಕಾರಿ ವಕೀಲರಾದ ಯು. ರಮೇಶನ್ ಅವರ ಪ್ರಕಾರ, ಮುಖ್ಯ ಆರೋಪಿ ಟಿ.ವಿ. ಬೀನು ಸತತ 25 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ; ಏಕೆಂದರೆ ಆತನೇ ವಾಹನದ ಮೇಲೆ ಬಾಂಬ್ ಎಸೆದಿದ್ದನು. ಎಂ.ಕೆ. ಪ್ರದೀಪ್ ಕುಮಾರ್, ಪಿ.ಪಿ. ಸತ್ಯನ್, ಪಿ.ವಿ. ಬಾಬುರಾಜ್ (ಸಿಪಿಎಂ ಪಂಚಾಯತ್ ಸದಸ್ಯ), ಇ.ವಿ. ವಿನೋದ್ ಕುಮಾರ್, ವಿಜಯನ್, ಕೆ.ಪಿ. ಸುರೇಶ್, ಟೋಬಿ, ಜನಾರ್ದನನ್ ಕೆ.ವಿ. ಮತ್ತು ಶಿವಪ್ರಕಾಶ್ ಉಳಿದ ಪ್ರಮುಖ ಆರೋಪಿಗಳಾಗಿದ್ದಾರೆ. ನ್ಯಾಯಾಲಯವು ಎಲ್ಲಾ ದೋಷಿಗಳಿಗೆ 2 ಲಕ್ಷದ 60 ಸಾವಿರ ರೂಪಾಯಿ ದಂಡವನ್ನೂ ಸಹ ವಿಧಿಸಿದೆ.
ಘಟನೆ ನಡೆದದ್ದು ಯಾವಾಗ?
ಈ ಘಟನೆಯು 27 ನವೆಂಬರ್ 2011 ರಂದು ನಡೆದಿತ್ತು. ಕಣ್ಣೂರಿನ ತಿಮಿರಿ ಕಾಲೇಜು ಬಳಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಬಾಂಬ್ ಎಸೆಯಲಾಗಿತ್ತು. ಸಂಘದ ಶಾಖೆಯನ್ನು ಪ್ರಾರಂಭಿಸುವ ವಿಷಯದಲ್ಲಿ ಎರಡೂ ಗುಂಪುಗಳ ನಡುವೆ ತೀವ್ರ ವಿವಾದ ಉಂಟಾಗಿತ್ತು ಮತ್ತು ಒಂದು ದಿನದ ಹಿಂದೆ ಸಂಘರ್ಷವೂ ನಡೆದಿತ್ತು. ಘಟನೆಯ ಸಮಯದಲ್ಲಿ ವಾಹನದಲ್ಲಿ 30 ಕಾರ್ಯಕರ್ತರು ಪ್ರಯಾಣಿಸುತ್ತಿದ್ದರು, 9 ಜನರು ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ