ದೆಹಲಿ ಪೊಲೀಸರಿಂದ ಎನ್‌ಕೌಂಟರ್; ಬಳಿಕ ೬ ಬಾಂಗ್ಲಾದೇಶಿ ದರೋಡೆಕೋರರ ಬಂಧನ

​ನವ ದೆಹಲಿ – ಪೊಲೀಸರ ಅಪರಾಧ ವಿಭಾಗವು ಸರಿತಾ ವಿಹಾರ್ ಪ್ರದೇಶದಲ್ಲಿ ಏಪ್ರಿಲ್ ೧೫ ರ ರಾತ್ರಿ ಎನ್‌ಕೌಂಟರ್ ನಂತರ ೬ ಬಾಂಗ್ಲಾದೇಶಿ ದರೋಡೆಕೋರರನ್ನು ಬಂಧಿಸಿದೆ. ಈ ಪ್ರದೇಶದಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ವಾಸಿಸುತ್ತಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಸುಳಿವಿನ ಆಧಾರದ ಮೇಲೆ ಸುಲಿಗೆ ವಿರೋಧಿ ಮತ್ತು ಅಪಹರಣ ವಿರೋಧಿ ದಳವು ಸ್ಥಳಕ್ಕೆ ತಲುಪಿ ಆರೋಪಿಗಳನ್ನು ಸುತ್ತುವರಿಯಲು ಪ್ರಯತ್ನಿಸಿತು; ಆದರೆ ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಲು ಆರಂಭಿಸಿದರು.

​೧. ಮಾಧ್ಯಮಗಳ ವರದಿ ಪ್ರಕಾರ, ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದಾಗ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದರು. ಈ ಎನ್‌ಕೌಂಟರ್‌ನಲ್ಲಿ ಯಾರೂ ಗಾಯಗೊಂಡಿಲ್ಲ.

​೨. ಪೊಲೀಸರು ಸ್ಥಳದಲ್ಲಿಯೇ ಎಲ್ಲಾ ೬ ಆರೋಪಿಗಳನ್ನು ವಶಕ್ಕೆ ಪಡೆದರು. ಆರೋಪಿಗಳಿಂದ ಎರಡು ದೇಶಿ ಪಿಸ್ತೂಲ್‌ಗಳು, ಒಂದು ದೇಶಿ ಬಂದೂಕು, ೫ ಕಾರ್ಟ್ರಿಜ್‌ಗಳು ಮತ್ತು ಒಂದು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.

​೩. ಬಾಂಗ್ಲಾದೇಶಿ ದರೋಡೆಕೋರರ ವಿಚಾರಣೆ ನಡೆಯುತ್ತಿದ್ದು, ದೆಹಲಿಯಲ್ಲಿ ಎಂದಿನಿಂದ ವಾಸಿಸುತ್ತಿದ್ದರು, ಯಾವೆಲ್ಲಾ ಅಪರಾಧಗಳಲ್ಲಿ ಭಾಗಿಯಾಗಿದ್ದರು ಮತ್ತು ಅವರಿಗೆ ಯಾವುದೇ ದೊಡ್ಡ ಗ್ಯಾಂಗ್ ಅಥವಾ ಸ್ಥಳೀಯ ಜಾಲದೊಂದಿಗೆ ಸಂಬಂಧವಿದೆಯೇ, ಎಂಬುದರ ತನಿಖೆ ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶಿ ನುಸುಳುಕೋರರು ಭಾರತದಲ್ಲಿ ಸಮಾಜ ವಿರೋಧಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಅನೇಕ ಪುರಾವೆಗಳಿದ್ದರೂ, ಈ ನುಸುಳುಕೋರರನ್ನು ದೇಶದಿಂದ ಹೊರಹಾಕುವ ಅಭಿಯಾನವನ್ನು ಸರಕಾರವು ಯುದ್ಧೋಪಾದಿಯಲ್ಲಿ ಯಾವಾಗ ಜಾರಿಗೊಳಿಸುತ್ತದೆ? ರಾಷ್ಟ್ರಪ್ರೇಮಿ ಜನತೆಯು ಈ ಕುರಿತು ಸರಕಾರದ ಮೇಲೆ ಒತ್ತಡ ಹೇರಬೇಕು!