ಹಿಂದೂ ಪೊಲೀಸ್ ಪೇದೆಯನ್ನು ಪ್ರೇಮಪಾಶದಲ್ಲಿ ಸಿಲುಕಿಸಿದ ಮುಸ್ಲಿಂ ಮಹಿಳೆ : ಬೆದರಿಸಿ ಮತಾಂತರ

  • ಸಂತ್ರಸ್ತ ವ್ಯಕ್ತಿಯಿಂದ 17 ಲಕ್ಷ ರೂಪಾಯಿ ಸುಲಿಗೆ

  • ಆರೋಪಿ ಮಹಿಳೆಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್

ಪ್ರತೀಕಾತ್ಮಕ ಛಾಯಾಚಿತ್ರ

ಬಾಗಪತ್ (ಉತ್ತರ ಪ್ರದೇಶ) – ದೆಹಲಿಯ 30 ವರ್ಷದ ಹಿನಾ ಅಲಿಯಾಸ್ ಮುಬ್ಬಾಸರೀನ್ ಎಂಬ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಪೊಲೀಸ್ ಕಾನ್‌ಸ್ಟೇಬಲ್ ಅನ್ನು ಪ್ರೇಮಪಾಶದಲ್ಲಿ ಸಿಲುಕಿಸಿದ್ದಾಳೆ. ಬಳಿಕ ಆರೋಪಿ ಮಹಿಳೆಯು ಸಂತ್ರಸ್ತ ಹಿಂದೂ ಪುರುಷನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿ, ಆತನಿಗೆ ಬೆದರಿಕೆ ಹಾಕಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮಾಡಿದ್ದಾಳೆ. ಅಲ್ಲದೆ, ಸಂತ್ರಸ್ತ ಹಿಂದೂ ಪುರುಷನಿಂದ 17 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾಳೆ. ಉತ್ತರ ಪ್ರದೇಶದ ಬಾಗಪತ್ ಪೊಲೀಸರು ದೆಹಲಿಯಲ್ಲಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

1. ಬಾಗಪತ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 35 ವರ್ಷದ ಪೊಲೀಸ್ ಕಾನ್‌ಸ್ಟೇಬಲ್ ಶ್ರೀಕಾಂತ್ ಅವರು ತಮ್ಮ ದೂರಿನಲ್ಲಿ, ತಾವು ಗಾಜಿಯಾಬಾದ್‌ಗೆ ವರ್ಗಾವಣೆಯಾದಾಗ ದೆಹಲಿಯ ಹಿನಾ ಪರಿಚಯವಾಗಿತ್ತು ಎಂದು ತಿಳಿಸಿದ್ದಾರೆ. ಶ್ರೀಕಾಂತ್ ಅವರ ಪತ್ನಿ ತೀರಿಕೊಂಡಿರುವುದರ ಲಾಭ ಪಡೆದ ಹಿನಾ, ಅವರನ್ನು ತನ್ನ ಪ್ರೇಮಪಾಶದಲ್ಲಿ ಸಿಲುಕಿಸಿದ್ದಳು.

2. ಮುಂದೆ, ಶ್ರೀಕಾಂತ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ವಿಚಾರವಾಗಿ ಇಬ್ಬರ ನಡುವೆ ಜಗಳವಾಯಿತು. ಆ ನಂತರ ಹಿನಾ ದೆಹಲಿಯಲ್ಲಿ ಶ್ರೀಕಾಂತ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದಳು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಬಿಡುಗಡೆಯಾದ ಬಳಿಕ ಶ್ರೀಕಾಂತ್ ಹಿನಾಳನ್ನು ಸಂಪರ್ಕಿಸಿದರು. ಆಗ ಅವಳು, ಇಸ್ಲಾಂ ಧರ್ಮ ಸ್ವೀಕರಿಸಿದರೆ ಆತನ ಪರವಾಗಿ ಸಾಕ್ಷಿ ಹೇಳುವುದಾಗಿ ಮತ್ತು ತನ್ನ ಗಂಡನನ್ನು ಬಿಟ್ಟು ಅವನನ್ನು ಮದುವೆಯಾಗುವುದಾಗಿ ಹೇಳಿದಳು.

3. ಮಹಿಳೆಯ ಮಾತಿನಂತೆ ಪೊಲೀಸ್ ಕಾನ್‌ಸ್ಟೇಬಲ್ ಮತಾಂತರಗೊಂಡರು; ಆದರೆ ಆರೋಪಿ ಮಹಿಳೆ ಮತ್ತು ಆಕೆಯ ಸಹಚರರು ವಿವಿಧ ಕಾರಣಗಳನ್ನು ನೀಡಿ ಅವರನ್ನು ವಂಚಿಸಲು ಪ್ರಾರಂಭಿಸಿದರು. ಆರೋಪಿ ಮಹಿಳೆ ಪ್ರಕರಣವನ್ನು ಹಿಂಪಡೆಯಲಿಲ್ಲ ಮತ್ತು ಶ್ರೀಕಾಂತ್‌ಗೆ ಬೆದರಿಕೆ ಹಾಕಿ ಅವರಿಂದ 17 ಲಕ್ಷ ರೂಪಾಯಿ ಸುಲಿಗೆ ಮಾಡಿದಳು.

4. ಕೊನೆಗೆ ಶ್ರೀಕಾಂತ್ ಅವರು ಬಾಗಪತ್‌ನಲ್ಲಿ ಮಹಿಳೆಯ ವಿರುದ್ಧ ದೂರು ದಾಖಲಿಸಿದರು. ಬಾಗಪತ್ ಪೊಲೀಸರು ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂ ಪೊಲೀಸರೇ ಮುಸ್ಲಿಂ ಮಹಿಳೆಯರ ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದರೆ, ಸಮಾಜದಲ್ಲಿನ ಲವ್ ಜಿಹಾದ್ ಅನ್ನು ಅವರು ಹೇಗೆ ತಡೆಯುತ್ತಾರೆ ?
  • ಮುಸ್ಲಿಂ ಪುರುಷರು ಮಾತ್ರವಲ್ಲ, ಮಹಿಳೆಯರೂ ಲವ್ ಜಿಹಾದ್ ಮಾಡುತ್ತಾರೆ ಮತ್ತು ನೇರವಾಗಿ ಹಿಂದೂ ಪೊಲೀಸರನ್ನೇ ಬಲೆಗೆ ಬೀಳಿಸುವ ಮಟ್ಟಕ್ಕೆ ಹೋಗುತ್ತಾರೆ. ಇದರಿಂದ ಅವರಿಗೆ ಯಾವುದರ ಭಯವೂ ಉಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ !