ಧರ್ಮದ ಕಾಲಂನಲ್ಲಿ ‘ಇಸ್ಲಾಂ’ ಮತ್ತು ಮಾತೃಭಾಷೆಯಾಗಿ ಹಿಂದಿ ಬರೆಯುವ ಬದಲು ‘ಉರ್ದು’ ಎಂದು ಬರೆಯಿರಿ!

ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಲಿ ಅವರ ಕರೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಜನಗಣತಿಯ ಅರ್ಜಿಯನ್ನು ನೀಡುವಾಗ ಧರ್ಮದ ಜಾಗದಲ್ಲಿ ಕೇವಲ ‘ಇಸ್ಲಾಂ’ ಎಂದೇ ಬರೆಯಬೇಕು. ಹಾಗೆಯೇ ಮಾತೃಭಾಷೆಯ ಕಾಲಂನಲ್ಲಿ ಹಿಂದಿ ಬದಲಾಗಿ ‘ಉರ್ದು’ ಎಂದು ಬರೆಯಬೇಕೆಂದು ಇಲ್ಲಿನ ಪ್ರಸಿದ್ಧ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಲಿ ಮುಸ್ಲಿಮರಿಗೆ ಕರೆ ನೀಡಿದ್ದಾರೆ.

ಮೌಲಾನಾ ಮಹಲಿ ಅವರ ಪ್ರಕಾರ, ಹಲವು ಬಾರಿ ಜನರು ಸಾಮಾನ್ಯವಾಗಿ ಹಿಂದಿ ಎಂದು ಬರೆಯುತ್ತಾರೆ; ಆದರೆ ತಮ್ಮ ನಿಖರವಾದ ಗುರುತನ್ನು ದಾಖಲಿಸುವುದು ಅತ್ಯಗತ್ಯವಾಗಿದೆ. ಸರಕಾರವು ಸರಕಾರಿ ಯೋಜನೆಗಳನ್ನು ಸಿದ್ಧಪಡಿಸುವಾಗ ಇದೇ ಮಾಹಿತಿಯನ್ನು ಆಧಾರವಾಗಿಟ್ಟುಕೊಳ್ಳುತ್ತದೆ, ಆದ್ದರಿಂದ ಸ್ಪಷ್ಟ ಮಾಹಿತಿ ಇದ್ದರೆ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಸುಲಭವಾಗುತ್ತದೆ.

ಇದಕ್ಕಾಗಿ ಜನಗಣತಿಯ ಅರ್ಜಿಯಲ್ಲಿ ಎಲ್ಲಾ ಹಿಂದೂಗಳು ‘ಸಂಸ್ಕೃತ’ ಎಂದು ಉಲ್ಲೇಖಿಸಬೇಕು!

ಪ್ರತಿಯೊಬ್ಬರ ಮಾತೃಭಾಷೆ ಬೇರೆ ಬೇರೆಯಾಗಿದ್ದರೂ, ಭಾರತದ ಮೂಲ ಭಾಷೆ ದೇವಭಾಷೆಯಾದ ಸಂಸ್ಕೃತವಾಗಿದೆ. ಹಿಂದೂಗಳು ಪ್ರತಿದಿನದ ಪ್ರಾರ್ಥನೆ, ಮಂತ್ರ, ಶ್ಲೋಕ ಹಾಗೂ ಪೂಜಾ ವಿಧಿ-ವಿಧಾನಗಳಲ್ಲಿ ಸಂಸ್ಕೃತವನ್ನೇ ಬಳಸುತ್ತಾರೆ. ಸಂಸ್ಕೃತವು ಎಲ್ಲಾ ಭಾಷೆಗಳ ಜನನಿಯಾಗಿದೆ. ಈ ಭಾಷೆಯನ್ನು ಜೀವಂತವಾಗಿಡುವುದು ಎಲ್ಲರ ಜವಾಬ್ದಾರಿಯಾಗಿದೆ. ೨೦೧೧ ರ ಜನಗಣತಿಯ ಪ್ರಕಾರ ಇಡೀ ದೇಶದಲ್ಲಿ ಸಂಸ್ಕೃತ ಭಾಷಿಕರ ಸಂಖ್ಯೆ ಕೇವಲ ೨ ಲಕ್ಷವಾಗಿತ್ತು, ಆದರೆ ಅರೇಬಿಕ್, ಪರ್ಶಿಯನ್ ಅಥವಾ ಉರ್ದುವಿನಂತಹ ಪರಕೀಯ ಮತ್ತು ಭಾರತದೊಂದಿಗೆ ದೂರದ ಸಂಬಂಧವೂ ಇಲ್ಲದ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿತ್ತು ಮತ್ತು ವಿದೇಶಿ ಭಾಷೆ ಮಾತನಾಡುವವರಿಗೆ ಸರಕಾರಿ ಅನುದಾನ ಹಾಗೂ ಬೆಂಬಲವೂ ಸಿಗುತ್ತಿತ್ತು.

ಸಂಪಾದಕೀಯ ನಿಲುವು

ಒಂದು ವೇಳೆ ‘ಹಿಂದೂಗಳು ತಮ್ಮ ಧರ್ಮ ‘ಹಿಂದೂ’ ಮತ್ತು ಮಾತೃಭಾಷೆಯಾಗಿ ‘ಸಂಸ್ಕೃತ’ ಉಲ್ಲೇಖಿಸಬೇಕು’ ಎಂದು ಯಾರಾದರೂ ಕರೆ ನೀಡಿದರೆ, ಅದೂ ಕೂಡ ತಪ್ಪಾಗಲಾರದು!