ನೋಯ್ಡಾ (ಉತ್ತರ ಪ್ರದೇಶ) ದಲ್ಲಿ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರಿಂದ ಹಿಂಸಾಚಾರ

ಕಲ್ಲುತೂರಾಟ ಮತ್ತು ಬೆಂಕಿ ಹಚ್ಚುವಿಕೆ

ನೋಯ್ಡಾ (ಉತ್ತರ ಪ್ರದೇಶ) – ದೆಹಲಿಯ ಗಡಿಯ ಸಮೀಪವಿರುವ ನೋಯ್ಡಾದಲ್ಲಿ ವೇತನ ಹೆಚ್ಚಳದ ಬೇಡಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಇಲ್ಲಿನ ಕಾರ್ಖಾನೆಗಳ ನೌಕರರ ಪ್ರತಿಭಟನೆಯು ಏಪ್ರಿಲ್ 13 ರಂದು ಹಿಂಸಾಚಾರಕ್ಕೆ ತಿರುಗಿತು. ನೌಕರರು ಕಲ್ಲು ತೂರಾಟ ನಡೆಸಿದ್ದಲ್ಲದೆ, ಹಲವಾರು ವಾಹನಗಳು ಮತ್ತು ಬಸ್‌ಗಳಿಗೆ ಬೆಂಕಿ ಹಚ್ಚಿದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಪ್ರತಿಭಟನಾಕಾರರು ಪೊಲೀಸರ ವಾಹನವನ್ನು ಪಲ್ಟಿ ಮಾಡಿದರು. ಅವರು ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಪೊಲೀಸರು ಅವರ ಮೇಲೆ ಅಶ್ರುವಾಯುಗಳನ್ನು ಪ್ರಯೋಗಿಸಿದರು. ಈ ಘಟನೆಯು ನೋಯ್ಡಾ ಫೇಸ್-2 ರಲ್ಲಿ ನಡೆದಿದೆ. ಈ ಪ್ರದೇಶವು ಕೈಗಾರಿಕಾ ವಲಯವಾಗಿದೆ. ಇಲ್ಲಿ ಮದರ್ಸನ್, ಋಚಾ ಗ್ಲೋಬಲ್, ರೈನ್ಬೋ, ಪ್ಯಾರಾಮೌಂಟ್, ಎಸ್.ಎನ್.ಡಿ ಮುಂತಾದ ಸಂಸ್ಥೆಗಳ 500 ಕ್ಕೂ ಹೆಚ್ಚು ಕಾರ್ಮಿಕರು ಕಳೆದ 3 ದಿನಗಳಿಂದ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಸಾರ್ವಜನಿಕರ ಬೇಡಿಕೆಗಳು ಈಡೇರದಿದ್ದಾಗ ಜನರಲ್ಲಿ ಆಕ್ರೋಶ ಉಂಟಾಗುತ್ತದೆ ಮತ್ತು ಅವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬ ಅನುಭವ ನಮಗೆ ಯಾವಾಗಲೂ ಆಗುತ್ತಿರುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ಇಂತಹ ಪ್ರತಿಭಟನೆಗಳ ಮೂಲಕ ಜನರನ್ನು ಸಂಕಷ್ಟಕ್ಕೆ ಕೂಡ ಒಳಪಡಿಸಲಾಗುತ್ತದೆ!