ನಾಳೆಯಿಂದ ನೋಂದಣಿ ಆರಂಭ

ಶ್ರೀನಗರ (ಜಮ್ಮು-ಕಾಶ್ಮೀರ) – ಈ ವರ್ಷದ ಅಮರನಾಥ ಯಾತ್ರೆಯು ಜುಲೈ 3 ರಿಂದ ಪ್ರಾರಂಭವಾಗಲಿದೆ. ಯಾತ್ರೆಗಾಗಿ ನೋಂದಣಿಯು ಏಪ್ರಿಲ್ 15 ರಿಂದ ಪ್ರಾರಂಭವಾಗಲಿದೆ. ಈ ವರ್ಷ ಈ ಯಾತ್ರೆಯು ಆಗಸ್ಟ್ 28 ರವರೆಗೆ ಇರಲಿದೆ ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಮಾಹಿತಿ ನೀಡಿದ್ದಾರೆ. ಜಮ್ಮುವಿನ ಭಗವತಿನಗರ ಬೇಸ್ ಕ್ಯಾಂಪ್ನಿಂದ ಯಾತ್ರಿಕರ ಮೊದಲ ತಂಡವು ಹೊರಡಲಿದೆ. ಒಟ್ಟು 57 ದಿನಗಳ ಕಾಲ ನಡೆಯುವ ಈ ಯಾತ್ರೆಗಾಗಿ ಅನಂತನಾಗ್ನಿಂದ ಸಾಂಪ್ರದಾಯಿಕ 48 ಕಿ.ಮೀ ಉದ್ದದ ನುನವಾನ್-ಪಹಲ್ಗಾಮ್ ಮಾರ್ಗ, ಹಾಗೆಯೇ ಗಂದರ್ಬಾಲ್ನಿಂದ 14 ಕಿ.ಮೀ ಉದ್ದದ ಬಾಲ್ಟಾಲ್ ಮಾರ್ಗವು ಲಭ್ಯವಿದೆ.
ಈ ರೀತಿಯಾಗಿ ನೋಂದಣಿ ಮಾಡಿಕೊಳ್ಳಬಹುದು!
1. 13 ರಿಂದ 70 ವರ್ಷ ವಯಸ್ಸಿನ ಜನರು ಈ ಯಾತ್ರೆಯನ್ನು ಮಾಡಬಹುದು.
2. ದೇಶಾದ್ಯಂತ ಇರುವ 556 ನಿಗದಿತ ಬ್ಯಾಂಕ್ ಶಾಖೆಗಳ ಮೂಲಕ ಯಾತ್ರೆಗೆ ನೋಂದಣಿ ಮಾಡಿಕೊಳ್ಳಬಹುದು.
3. ಇದರ ಜೊತೆಗೆ ‘ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್’ನ ಅಧಿಕೃತ ಜಾಲತಾಣದ ಮೂಲಕವೂ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
4. ನೋಂದಣಿಗಾಗಿ ‘ಯೆಸ್ ಬ್ಯಾಂಕ್’, ‘ಐಸಿಐಸಿಐ ಬ್ಯಾಂಕ್’, ‘ಪಂಜಾಬ್ ನ್ಯಾಷನಲ್ ಬ್ಯಾಂಕ್’, ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಮತ್ತು ‘ಆಕ್ಸಿಸ್ ಬ್ಯಾಂಕ್’ ಶಾಖೆಗಳಲ್ಲಿ ಯಾತ್ರೆಯ ನೋಂದಣಿ ಅರ್ಜಿಗಳು ಲಭ್ಯವಿರುತ್ತವೆ.
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ