ವಿವಾಹಿತ ಮುಸ್ಲಿಂನೊಂದಿಗೆ ಓಡಿಹೋಗಿದ್ದ ಹಿಂದೂ ಯುವತಿ ಈಗ ನಾಪತ್ತೆ!

ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲಿಸಲು ಪೊಲೀಸರ ನಕಾರ

ಧಾರವಾಡ – ನಗರದ ಕೆಲಗೇರಿಯಲ್ಲಿ ವಾಸಿಸುತ್ತಿದ್ದ 22 ವರ್ಷದ ತಂಗಮ್ಮ ಎಂಬ ವಿವಾಹಿತ ಯುವತಿ ಮೂರು ವರ್ಷಗಳ ಹಿಂದೆ ಮನೆಯ ಮುಂಭಾಗದ ಬಂಗಲೆಯಲ್ಲಿ ಕಾರು ಚಾಲಕನಾಗಿದ್ದ ಮುನ್ನಾ ಎಂಬ ಮುಸ್ಲಿಂ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು. ಈ ಬಗ್ಗೆ ತಂಗಮ್ಮಳ ತಾಯಿ ಮಂಜುಳಾ ಅವರು ಧಾರವಾಡದ ಉಪನಗರ (ಸಬ್-ಅರ್ಬನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು; ಆದರೆ ಆಗ ಪೊಲೀಸರು ಮುನ್ನಾ ವಿರುದ್ಧ ದೂರು ದಾಖಲಿಸಿಕೊಳ್ಳದೆ, ತಂಗಮ್ಮ ನಾಪತ್ತೆಯಾಗಿರುವ ಬಗ್ಗೆ ಮಾತ್ರ ದೂರು ದಾಖಲಿಸಿಕೊಂಡರು. ‘ಇಂದಿನವರೆಗೂ ಮುನ್ನಾ ಮತ್ತು ನನ್ನ ಮಗಳು ತಂಗಮ್ಮ ನಿಖರವಾಗಿ ಎಲ್ಲಿದ್ದಾರೆ?’ ಎಂಬುದರ ಕುರಿತು ಪೊಲೀಸರು ಯಾವುದೇ ಹುಡುಕಾಟ ನಡೆಸಿಲ್ಲ ಎಂದು ಮಂಜುಳಾ ಅವರು ಗಂಭೀರ ಆರೋಪ ಮಾಡಿದ್ದಾರೆ.

ಮಂಜುಳಾ ಅವರು,

1. ನನ್ನ ಮಗಳ ವಿವಾಹವು ಪರಿಚಯಸ್ಥ ಯುವಕನೊಂದಿಗೆ ನಡೆದಿತ್ತು; ಆದರೆ ಮಗಳು ನಮ್ಮೊಂದಿಗೇ (ತವರು ಮನೆಯಲ್ಲಿ) ವಾಸಿಸುತ್ತಿದ್ದಳು ಮತ್ತು ಆಕೆಯ ಪತಿ ಆಗಾಗ್ಗೆ ಅವಳನ್ನು ಭೇಟಿಯಾಗಲು ಬರುತ್ತಿದ್ದನು.

2. ನಾವು ಧಾರವಾಡದ ಕೆಲಗೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾಗ ನಮಗೆ ಓರ್ವ ವಕೀಲರ ಪರಿಚಯವಾಗಿತ್ತು. ಅಲ್ಲಿ ಮುನ್ನಾ ಎಂಬ ಮುಸ್ಲಿಂ ವ್ಯಕ್ತಿ ಕಾರು ಓಡಿಸುವ ಕೆಲಸ ಮಾಡುತ್ತಿದ್ದನು.

3. ನಾವು ಸ್ವಂತ ಮನೆ ಖರೀದಿಸಬೇಕಿತ್ತು. ಹಾಗಾಗಿ, ‘ಮನೆ ಹುಡುಕಿಕೊಡಿ’ ಎಂದು ಹೇಳಿ ನಾವು ಮುನ್ನಾ ಮತ್ತು ಆ ವಕೀಲರಿಗೆ 10 ಲಕ್ಷ ರೂಪಾಯಿ ನೀಡಿದ್ದೆವು.

4. 2023 ರಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮುನ್ನಾ ನನ್ನ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋದನು. ಈಗ ನನ್ನ ಬಳಿ ಹಣವೂ ಇಲ್ಲ, ಮಗಳೂ ಇಲ್ಲ.

ಸಂಪಾದಕೀಯ ನಿಲುವು

ಇದು 'ಲವ್ ಜಿಹಾದ್' ಪ್ರಕರಣವಾಗಿದ್ದು, ಈ ಮೂರು ವರ್ಷಗಳಲ್ಲಿ ಆ ಯುವತಿಗೆ ಏನಾಗಿರಬಹುದು ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ಪೊಲೀಸರು ಇಂತಹವರನ್ನು ಬೆಂಬಲಿಸುತ್ತಿರುವುದರಿಂದಲೇ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ! ಇಂತಹ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ!