ವಣಿ (ಯವತಮಾಳ ಜಿಲ್ಲೆ)ಯಲ್ಲಿ ಗೋಮಾಂಸ ಮಾರಾಟ ಮತ್ತು ಕಳ್ಳಸಾಗಣೆ ಪ್ರಕರಣ: ಮೂವರು ಮತಾಂಧರ ವಿರುದ್ಧ ಪ್ರಕರಣ ದಾಖಲು

  • ಬಜರಂಗ ದಳದ ಮುಂದಾಳತ್ವದಲ್ಲಿ ಪೊಲೀಸ್ ಕಾರ್ಯಾಚರಣೆ

  • ೧೫೦ ಕಿಲೋ ಗೋಮಾಂಸ ಜಪ್ತಿ

AI ಚಿತ್ರ

ವಣಿ (ಯವತಮಾಳ ಜಿಲ್ಲೆ), ಏಪ್ರಿಲ್ ೧೧ (ಸುದ್ದಿ) – ಇಲ್ಲಿನ ಗೋಕುಳನಗರ ಪರಿಸರದಲ್ಲಿ ಚಂದ್ರಪುರದಿಂದ ಗೋಮಾಂಸ ಕಳ್ಳಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಸಲ್ಮಾನ ಶಕೀಲ ಶೇಖ್ (೨೫ ವರ್ಷ), ನಾವೇದ ಶೇಖ್ ರಿಯಾಜ್ (೨೩ ವರ್ಷ), ಅಬ್ದುಲ ಮಜಿದ್ ಅಬ್ದುಲ್ ಸತ್ತಾರ್ (೩೫ ವರ್ಷ) ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಗೌಪ್ಯ ಮಾಹಿತಿ ದೊರೆತ ಮೇಲೆ ಬಜರಂಗ ದಳದ ಶ್ರೀ. ವಿಶಾಲ ದುಧಬಳೆ ಮತ್ತು ಇತರ ಕಾರ್ಯಕರ್ತರು ಮುಂಜಾನೆ ಕಾವಲು ಕಾಯ್ದು ಪೊಲೀಸರಿಗೆ ಸಹಾಯ ಮಾಡಿದರು. (ಇಂತಹ ಜಾಗೃತ ಮತ್ತು ಕ್ರಿಯಾಶೀಲ ಗೋರಕ್ಷಕರು ಎಲ್ಲೆಡೆ ಇರಬೇಕು! – ಸಂಪಾದಕರು) ಈ ಸಮಯದಲ್ಲಿ ೧೫೦ ಕಿಲೋ ಗೋಮಾಂಸವನ್ನು ಜಪ್ತಿ ಮಾಡಲಾಯಿತು. (ಸಕ್ಷಮ ವ್ಯವಸ್ಥೆಯಿದ್ದರೂ ಗೋರಕ್ಷಕರಿಗೆ ದೊರೆಯುವ ಮಾಹಿತಿ ಪೊಲೀಸರಿಗೆ ಏಕೆ ತಿಳಿಯುವುದಿಲ್ಲ? – ಸಂಪಾದಕರು)

ಸಂಪಾದಕೀಯ ನಿಲುವು

ಈ ಮತಾಂಧರ ವಿರುದ್ಧ ಗೋವಂಶ ಹತ್ಯೆ ನಿಷೇಧ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಗೋಪ್ರೇಮಿಗಳ ಅಪೇಕ್ಷೆಯಾಗಿದೆ!