
ಜಮ್ಮು – ‘ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ‘ಐ.ಎ.ಎಸ್.’ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಸಚಿನ ಕುಮಾರ್ ವೈಶ್ಯ ಅವರ ವಿಡಿಯೋವೊಂದು ಪ್ರಸಾರವಾಗಿದೆ. ಶ್ರೀ ವೈಷ್ಣೋದೇವಿಗೆ ಸಂಬಂಧಿಸಿದ ಕಟ್ರಾದ ಸಂಸ್ಥೆಯೊಂದರ ಉದ್ಘಾಟನೆಗೆ ಅವರು ತೆರಳಿದ್ದರು. ಆ ಸಮಯದಲ್ಲಿ ಅರ್ಚಕರು ಮಂತ್ರೋಚ್ಚಾರಣೆ ಮಾಡುತ್ತಿದ್ದರು. ಪಾದರಕ್ಷೆಗಳನ್ನು ತೆಗೆದು ಉದ್ಘಾಟನೆ ಮಾಡುವಂತೆ ಅರ್ಚಕರು ಹೇಳಿದಾಗ ಅವರು ಅಸಮಾಧಾನಗೊಂಡು ಕೋಪಗೊಂಡರು. “ಅದಕ್ಕಾಗಿಯೇ ನಾನು ಇಂತಹ ಸ್ಥಳಗಳಿಗೆ ಬರುವುದಿಲ್ಲ” ಎಂದು ಅವರು ಹೇಳಿದ್ದು ಕಂಡುಬಂದಿದೆ. ಇದರಿಂದ ನೆರೆದಿದ್ದ ಜನರಿಗೆ ಅಸಮಾಧಾನವಾಯಿತು; ಆದರೆ ಯಾರೂ ಅವರನ್ನು ವಿರೋಧಿಸಲಿಲ್ಲ.
Outrage at Shri Mata Vaishno Devi Shrine Board CEO’s conduct!
The CEO got enraged when asked to remove shoes during mantra chanting
Says "That’s why I do not come for performing rituals."
Removing footwear is a basic rule in Hindu Dharma during puja or mantras. How can an IAS… pic.twitter.com/F676wB9mdl
— Sanatan Prabhat (@SanatanPrabhat) April 9, 2026
೧. ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ತಕ್ಷಣವೇ ತೆಗೆದುಹಾಕುವಂತೆ ಅನೇಕರು ಒತ್ತಾಯಿಸಿದ್ದಾರೆ. ಕೆಲವರು ಅವರ ವರ್ತನೆಯನ್ನು ‘ಅಹಂಕಾರ’ ಎಂದು ಕರೆದಿದ್ದಾರೆ.
೨. “ಶ್ರೀ ವೈಷ್ಣೋದೇವಿ ಆಡಳಿತದ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಗೆ ಅಲ್ಲಿನ ಮೂಲಭೂತ ಧಾರ್ಮಿಕ ಸಂಪ್ರದಾಯಗಳೇ ಸ್ವೀಕಾರಾರ್ಹವಲ್ಲ ಎಂಬುದು ವಿಪರ್ಯಾಸ. ಶ್ರದ್ಧೆಗಿಂತ ಹುದ್ದೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ” ಎಂಬ ಟೀಕೆಯೂ ವ್ಯಕ್ತವಾಗಿದೆ.
೩. ಇಂತಹ ಮನಸ್ಥಿತಿ ಹೊಂದಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಭಾಜಪ ಯುವ ಮೋರ್ಚಾ ನಾಯಕ ತಾಂಡವ್ ಸಿಂಗ್ ಹೇಳಿದ್ದಾರೆ. ಆ ಸ್ಥಳದಲ್ಲಿ ಶ್ರದ್ಧೆ ಮತ್ತು ಸಂಪ್ರದಾಯಗಳನ್ನು ಗೌರವಿಸುವ ವ್ಯಕ್ತಿಯನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು