ನಾಸಿಕ್‌ನಲ್ಲಿ ಆಟೋ ಚಾಲಕರಿಂದ ಆಟೋಗಳಲ್ಲಿದ್ದ ನಿಂಬೆ-ಮೆಣಸಿನಕಾಯಿ ಮತ್ತು ಕಪ್ಪು ಬೊಂಬೆಗಳ ತೆರವು!

  • ಅಂಧಶ್ರದ್ಧೆ ನಿರ್ಮೂಲನೆಯ ಹೆಸರಿನಲ್ಲಿ ಹಿಂದೂಗಳ ಸಂಪ್ರದಾಯಗಳ ಮೇಲೆ ‘ಅಂನಿಸ್’ ಆಘಾತ!

  • ಅಂನಿಸ್‌ನ ‘ಬುವಾಬಾಜಿ (ಮೌಢ್ಯ) ವಿರೋಧಿ’ ಸಮ್ಮೇಳನದ ನಂತರ ನಡೆದ ಘಟನೆ!

ನಾಸಿಕ್ – ಇಲ್ಲಿನ ಚಾಂಡಕ್ ವೃತ್ತದ ಬಳಿಯ ಆಟೋ ಚಾಲಕರು ತಮ್ಮ ವಾಹನಗಳಲ್ಲಿದ್ದ ನಿಂಬೆ-ಮೆಣಸಿನಕಾಯಿ ಮತ್ತು ಕಪ್ಪು ಬೊಂಬೆಗಳನ್ನು ತೆಗೆದುಹಾಕಿದ್ದಾರೆ. ನಗರದ ಸಿಟು ಭವನದಲ್ಲಿ ಇತ್ತೀಚೆಗೆ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ (ಅಂನಿಸ್) ವತಿಯಿಂದ ಆಯೋಜಿಸಲಾಗಿದ್ದ ‘ಬುವಾಬಾಜಿ ವಿರೋಧಿ’ ಸಮ್ಮೇಳನದಲ್ಲಿ ‘ನಿಂಬೆ-ಮೆಣಸಿನಕಾಯಿ ಕಳಚಿ, ವಿವೇಕದೊಂದಿಗೆ ಸಂಬಂಧ ಬೆಳೆಸಿ’ ಎಂಬ ಘೋಷಣೆಗಳನ್ನು ಕೂಗಲಾಯಿತು. ಈ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆಯಿದೆ. ‘ನಿಂಬೆ-ಮೆಣಸಿನಕಾಯಿ ಕೇವಲ ತಿನ್ನುವ ಪದಾರ್ಥಗಳು, ಅವುಗಳಿಗೆ ಶುಭ-ಅಶುಭಗಳೊಂದಿಗೆ ಯಾವುದೇ ಸಂಬಂಧವಿಲ್ಲ’ ಎಂದು ಆಟೋ ಚಾಲಕರು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಟೋ ಚಾಲಕರಾದ ಶರದ್ ಭಾಮ್ರೆ, ದಿಲೀಪ್ ದೇವರೆ, ಗಣಪತ್ ಸೋನಾವಣೆ ಅವರೊಂದಿಗೆ ‘ಅಂನಿಸ್’ ಕಾರ್ಯಕರ್ತರು ಉಪಸ್ಥಿತರಿದ್ದರು. (ಇಂದು ಆಟೋಗಳಿಗೆ ಕಟ್ಟಿದ್ದ ನಿಂಬೆ-ಮೆಣಸಿನಕಾಯಿಯನ್ನು ತೆಗೆದುಹಾಕಿದ್ದಾರೆ, ನಾಳೆ ಇವರೇ ಮನೆಯಲ್ಲಿರುವ ದೇವರುಗಳ ಚಿತ್ರಗಳನ್ನೂ ತೆಗೆಯಲು ಹೇಳಬಹುದು ಅಥವಾ ಕುಲಧರ್ಮ-ಕುಲಾಚಾರಗಳನ್ನೂ ‘ಅಂಧಶ್ರದ್ಧೆ’ ಎಂದು ಕೈಬಿಡಲು ಹೇಳಬಹುದು. ಆಟೋ ಚಾಲಕರ ಈ ಕೃತ್ಯವನ್ನು ಹಿಂದೂ ಧರ್ಮದ ಮೇಲಾದ ಒಂದು ರೀತಿಯ ಸಾಂಸ್ಕೃತಿಕ ಆಕ್ರಮಣ ಎಂದೇ ಹೇಳಬೇಕಾಗುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

  • ನಿಂಬೆ ಮತ್ತು ಮೆಣಸಿನಕಾಯಿಯಲ್ಲಿ ಕೆಟ್ಟ ಶಕ್ತಿಗಳನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ. ಆದ್ದರಿಂದ ಈ ವಸ್ತುಗಳನ್ನು ವಾಹನಗಳು ಅಥವಾ ಮನೆಯ ಮುಂಭಾಗದಲ್ಲಿ ಕಟ್ಟಲಾಗುತ್ತದೆ. ಹಿಂದೂಗಳು ಧಾರ್ಮಿಕ ಆಚರಣೆಗಳ ಹಿಂದಿನ ‘ವಿಜ್ಞಾನ’ ಮತ್ತು ‘ಶಾಸ್ತ್ರ’ವನ್ನು ಅರ್ಥಮಾಡಿಕೊಳ್ಳುವವರೆಗೆ, ಅಂನಿಸ್‌ನಂತಹವರ ಮಾತುಗಳಿಗೆ ಮರುಳಾಗಿ ಅವರ ವೈಚಾರಿಕ ಮತಾಂತರ ನಡೆಯುತ್ತಲೇ ಇರುತ್ತದೆ!
  • ‘ವಿವೇಕದೊಂದಿಗೆ ಸಂಬಂಧ ಬೆಳೆಸಿ’ ಎಂದು ಹೇಳುವ ಅಂನಿಸ್ (ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ), ಎಂದಾದರೂ ಇತರ ಧರ್ಮೀಯರ ಅವಿವೇಕದ ಆಚರಣೆಗಳ ವಿರುದ್ಧ ಸಮ್ಮೇಳನಗಳನ್ನು ನಡೆಸಿದ್ದನ್ನು ನಾವು ಕೇಳಿಲ್ಲ! ಕೇವಲ ಮೃದು ಸ್ವಭಾವದ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅವರ ಮನಸ್ಸಿನಲ್ಲಿರುವ ಶ್ರದ್ಧೆಯ ಬೀಜವನ್ನು ಕಿತ್ತೊಗೆಯುವುದು ಅಂನಿಸ್‌ನ ಗುಪ್ತ ಅಜೆಂಡಾವಾಗಿದೆ. ನಾಸಿಕ್‌ನಂತಹ ಕುಂಭನಗರಿಯಲ್ಲಿ ಆಟೋ ಚಾಲಕರು ನಾಸ್ತಿಕವಾದಿಗಳ ಪ್ರಭಾವಕ್ಕೆ ಒಳಗಾಗುತ್ತಿರುವುದು ದುರದೃಷ್ಟಕರ!