|

ಮುಂಬಯಿ – ಜೈನ ಧರ್ಮವು ಮೂಲ ಹಿಂದೂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮೊಘಲರು ಮತ್ತು ಬ್ರಿಟಿಷರ ನಂತರ ಕಾಂಗ್ರೆಸ್ ‘ಒಡೆದು ಆಳುವ’ ಕುತಂತ್ರದ ನೀತಿಯಿಂದ ಹಿಂದೂ ಸಮಾಜವನ್ನು ತುಂಡರಿಸಿತು. ಈಗ ಜೈನ ಸಮಾಜವು ಈ ‘ಅಲ್ಪಸಂಖ್ಯಾತ’ ಎಂಬ ಗುಲಾಮಗಿರಿಯ ಮಾನಸಿಕತೆ ಮತ್ತು ಸ್ಥಾನಮಾನವನ್ನು ತ್ಯಜಿಸಿ ಮೂಲ ಪ್ರವಾಹಕ್ಕೆ ಬರುವ ಸಮಯ ಬಂದಿದೆ ಎಂದು ರಾಜ್ಯದ ಕ್ಯಾಬಿನೆಟ್ ಸಚಿವ ಶ್ರೀ. ಮಂಗಲ ಪ್ರಭಾತ ಲೋಧಾ ಅವರು ಸ್ಪಷ್ಟ ಮಾತುಗಳಲ್ಲಿ ಹಿಂದೂ ಅಸ್ಮಿತೆಯ ದನಿ ಎತ್ತಿದ್ದಾರೆ. ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಅವರು,

೧. ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಶೇ. ೨೨ ರಿಂದ ೨೩ ರಷ್ಟಿದ್ದ ಜೈನ ಸಮಾಜ ಇಂದು ಕೇವಲ ಶೇ. ೩ ಕ್ಕೆ ಬಂದು ನಿಂತಿದೆ. ಇದು ಕೇವಲ ಅಂಕಿ-ಅಂಶಗಳಲ್ಲ, ಇದೊಂದು ದೊಡ್ಡ ರಾಜಕೀಯ ಪಿತೂರಿಯ ಪರಿಣಾಮವಾಗಿದೆ.
೨. ಮುಸಲ್ಮಾನ ಸಮಾಜದಲ್ಲಿ ಅನೇಕ ಜಾತಿಗಳಿದ್ದರೂ ಕಾಂಗ್ರೆಸ್ ಅವರನ್ನು ಸಂಘಟಿತರಾಗಿರಿಸಿತು; ಆದರೆ ಹಿಂದೂ ಸಮಾಜವನ್ನು ಜಾತಿ-ಧರ್ಮದ ಚೌಕಟ್ಟಿನಲ್ಲಿ ಬಂಧಿಸಿ ದುರ್ಬಲಗೊಳಿಸಿತು.
೩. ಸಮಾಜದಲ್ಲಿ ವ್ಯಾಪಕ ಒಮ್ಮತ ಮೂಡಿದರೆ, ಜೈನ ಸಮಾಜವನ್ನು ‘ಅಲ್ಪಸಂಖ್ಯಾತ’ ಸ್ಥಾನಮಾನದಿಂದ ಹೊರತರಲು ಅಗತ್ಯವಾದ ಕಾನೂನು ಪ್ರಕ್ರಿಯೆಯನ್ನು ಜಾರಿಗೊಳಿಸಲಾಗುವುದು. ಶ್ರೀರಾಮ ಜನ್ಮಭೂಮಿ ಹೋರಾಟದಂತೆಯೇ ಈಗ ಮತ್ತೊಮ್ಮೆ ‘ನಾವು ಹಿಂದೂ’ ಎಂಬ ಭಾವನೆಯನ್ನು ಪ್ರಬಲಗೊಳಿಸುವ ಐತಿಹಾಸಿಕ ಅವಶ್ಯಕತೆಯಿದೆ.
೪. ಜಗತ್ತಿಗೆ ಅಹಿಂಸೆ ಮತ್ತು ಮಾನವೀಯತೆಯ ಸಂದೇಶ ನೀಡಿದ ಜೈನ ಸಮಾಜವನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವುದು ಸಾಂಸ್ಕೃತಿಕ ದ್ರೋಹವಾಗಿದೆ.
೫. ರಾಜಕೀಯ ಲಾಭಕ್ಕಾಗಿ ಹೇರಲಾದ ‘ಅಲ್ಪಸಂಖ್ಯಾತ’ ಎಂಬ ಹಣೆಪಟ್ಟಿಯನ್ನು ಅಳಿಸಿಹಾಕುವ ಸಮಯ ಈಗ ಬಂದಿದೆ. ಜೈನ ಧರ್ಮೀಯರ ಪೂಜಾ ಪದ್ಧತಿ ಭಿನ್ನವಾಗಿರಬಹುದು; ಆದರೆ ಸಾಂಸ್ಕೃತಿಕ ಬೇರುಗಳು ಹಿಂದೂ ಧರ್ಮದಲ್ಲೇ ಆಳವಾಗಿ ಬೇರೂರಿವೆ.
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!