
ಕೋಲಕಾತಾ (ಬಂಗಾಳ) – ಎಲ್ಲಿಯವರೆಗೆ ನನ್ನ ಮೈಯಲ್ಲಿ ರಕ್ತದ ಒಂದು ಹನಿ ಇರುವ ತನಕ ಯಾರೂ ಬಂಗಾಳವನ್ನು ಬಾಂಗ್ಲಾದೇಶವಾಗಿ ಮಾಡಲು ಸಾಧ್ಯವಿಲ್ಲ, ಎಂದು ನಟ ಹಾಗೂ ಭಾಜಪ ನಾಯಕ ಮಿಥುನ ಚಕ್ರವರ್ತಿ ಅವರು ಹೇಳಿದ್ದಾರೆ. ಮತದಾರರ ಪಟ್ಟಿಯ ಆಳವಾದ ಮರುಪರಿಶೀಲನೆಯ ಪ್ರಕ್ರಿಯೆಯ ಕುರಿತಾದ ವಿವಾದದ ಹಿನ್ನೆಲೆಯಲ್ಲಿ ಅವರು ತೃಣಮೂಲ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ನಡೆಸಿದರು. ನುಸುಳುವಿಕೆಯು ಒಂದು ದೊಡ್ಡ ವಿಷಯವಾಗಿದೆ ಎಂದು ಹೇಳಿದ ಮಿಥುನ್ ಚಕ್ರವರ್ತಿಯವರು, ಇದರಿಂದ ಸ್ಥಳೀಯ ಜನರ, ವಿಶೇಷವಾಗಿ ಮುಸಲ್ಮಾನ ಸಮಾಜದ ಉದ್ಯೋಗ ಮತ್ತು ಹಕ್ಕುಗಳಿಗೆ ಧಕ್ಕೆ ಬರುತ್ತಿದೆ, ಎಂದರು.
ಬಂಗಾಳದಲ್ಲಿ ಪ್ರಸ್ತುತ ಎಷ್ಟು ಗಲೀಜು ಇದೆಯೆಂದರೆ, ಅದನ್ನು ಕಸಬರಗಿ ಹಿಡಿದು ಸ್ವಚ್ಛಗೊಳಿಸಬೇಕಿದೆ !
ಮಿಥುನ್ ಚಕ್ರವರ್ತಿಯವರು ಮಾತು ಮುಂದುವರೆಸುತ್ತಾ, ಭಾಜಪವು ಮುಸಲ್ಮಾನರ ವಿರೋಧಿಯಲ್ಲ, ಬದಲಾಗಿ ಭಾರತದಲ್ಲಿ ವಾಸಿಸುತ್ತಾ ಭಾರತಕ್ಕೆ ಹಾನಿ ಮಾಡಲು ಬಯಸುವ ಜನರ ವಿರೋಧಿಯಾಗಿದೆ. ಭಾಜಪದ ಅನೇಕ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮದರಸಾಗಳಿಗೆ ೫ ಸಾವಿರದ ೭೧೩ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಬಂಗಾಳದಲ್ಲಿ ಪ್ರಸ್ತುತ ಎಷ್ಟು ಗಲೀಜು ಹರಡಿದೆಯೆಂದರೆ, ಅದನ್ನು ಕಸಬರಗಿ ಹಿಡಿದು ಸ್ವಚ್ಛಗೊಳಿಸಬೇಕಿದೆ, ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!