ಚಂಡೀಗಢದ ಭಾಜಪ ಕಚೇರಿಯ ಮೇಲೆ ಗ್ರೆನೇಡ್ ಎಸೆದ ಪ್ರಕರಣ: ಇಬ್ಬರ ಬಂಧನ

ಗ್ರೆನೇಡ್ ಪಾಕಿಸ್ತಾನದಿಂದ ಕಳುಹಿಸಿರುವ ಶಂಕೆ

ಚಂಡೀಗಢ – ಇಲ್ಲಿನ ಭಾಜಪದ ಕಚೇರಿಯ ಮೇಲೆ ಗ್ರೆನೇಡ್ ಎಸೆದ ಪ್ರಕರಣದಲ್ಲಿ ಪಂಜಾಬ್ ಪೊಲೀಸರ ಅಪರಾಧ ತನಿಖಾ ದಳವು ರೂಪನಗರದ ಮೊರಿಂದಾ ಪ್ರದೇಶದಿಂದ ಅಮನ್ ಸಿಂಗ್ ಅಲಿಯಾಸ್ ಭೋಲು ಮತ್ತು ಗುರುತೇಜ್ ಸಿಂಗ್ ಎಂಬುವವರನ್ನು ಬಂಧಿಸಿದೆ. ಇವರು ರತ್ನಗಢ ಗ್ರಾಮದ ನಿವಾಸಿಗಳಾಗಿದ್ದಾರೆ. ಈ ಆರೋಪಿಗಳಿಗೆ ಹಣಕಾಸಿನ ನೆರವು ಮತ್ತು ಸೂಚನೆಗಳು ಎಲ್ಲಿಂದ ಬಂದವು, ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದಾಳಿಯ ಹೊಣೆಯನ್ನು ಖಲಿಸ್ತಾನಿ ಭಯೋತ್ಪಾದನಾ ಸಂಘಟನೆ ‘ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್’ನ ಸುಖಜಿಂದರ್ ಸಿಂಗ್ ಬಬ್ಬರ್ ಎಂಬಾತ ವಹಿಸಿಕೊಂಡಿದ್ದಾನೆ. ಗ್ರೆನೇಡ್ ಸ್ಫೋಟದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಎಸೆಯಲಾದ ಗ್ರೆನೇಡ್ ಅನ್ನು ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ.