ಪನವೇಲ್: ಪೊಲೀಸರ ಮೇಲೆ ಹಲ್ಲೆ ನಡೆಸಿದವನ ವಿರುದ್ಧ ಮೊಕದ್ದಮೆ ದಾಖಲು

ಸಂಚಾರಿ ಪೊಲೀಸರ ಮೇಲೆ ವಾಹನ ಹಾಯಿಸಲು ಯತ್ನ; ಪೊಲೀಸ್ ಠಾಣೆಗೂ ಹಾನಿ

ಪನವೇಲ್ – ಸಂಚಾರಿ ವಿಭಾಗದ ಪೊಲೀಸ್ ಹವಾಲ್ದಾರ ಸಂಜಯ ಜಾಧವ ಅವರು ಕಾರೊಂದನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರು; ಆದರೆ ವಾಹನ ಚಾಲಕ ಶೇರ್ ಬಹದ್ದೂರ್ ಎಂಬವನು ವಾಹನವನ್ನು ಅವರ ಮೈಮೇಲೆ ಹಾಯಿಸಲು ಪ್ರಯತ್ನಿಸಿದನು. ಪೊಲೀಸರು ಶೇರ್ ಬಹದ್ದೂರ್ ನನ್ನ ವಶಕ್ಕೆ ಪಡೆದು ಪೊಲೀಸ್ ಠಾಣೆಯ ಆವರಣಕ್ಕೆ ಕರೆತಂದರು; ಆದರೆ ಅವನು ಠಾಣೆಯ ಮುಂದಿದ್ದ ಗಿಡದ ಕುಂಡಗಳು, ಪ್ಲಾಸ್ಟಿಕ್ ಕುರ್ಚಿಗಳು ಮತ್ತು ಠಾಣೆಯ ಗಾಜಿನ ಬಾಗಿಲನ್ನು ಒಡೆದು ಹಾನಿ ಮಾಡಿದನು. ಅಲ್ಲದೇ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದನು. (ಪೊಲೀಸರ ಮೇಲೆ ಕೈ ಮಾಡುವ ಧೈರ್ಯ ಬರುವುದಾದರೂ ಹೇಗೆ? ಇದು ಪೊಲೀಸರ ಭಯ ಕಡಿಮೆಯಾಗುತ್ತಿರುವುದರ ಲಕ್ಷಣವೇ ಆಗಿದೆ! – ಸಂಪಾದಕರು) ಈ ಪ್ರಕರಣದಲ್ಲಿ ಶೇರ್ ಬಹದ್ದೂರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಕಾನೂನು ಮತ್ತು ಸುವ್ಯವಸ್ಥೆಯ ಭಯವಿಲ್ಲದ ಕಾರಣಕ್ಕಾಗಿಯೇ ಪೊಲೀಸರ ವಿರುದ್ಧ ಇಂತಹ ಘಟನೆಗಳು ಪದೇ-ಪದೇ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಪೊಲೀಸ್ ಆಡಳಿತವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು!