ಕೇಸರಿ ಧ್ವಜ ಕಟ್ಟುತ್ತಿದ್ದ ಹಿಂದೂಗಳ ಮೇಲೆ ಮುಸ್ಲಿಂ ಮಹಿಳೆಯಿಂದ ಹಲ್ಲೆ; ಶ್ರೀರಾಮನ ಮೂರ್ತಿಯ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ!

  • ಮುಂಬಯಿ: ಶ್ರೀರಾಮನವಮಿ ಶೋಭಾಯಾತ್ರೆಯಲ್ಲಿ ಅಹಿತಕರ ಘಟನೆ!

  • ಮತಾಂದ ಮುಸ್ಲಿಮರಿಂದ ಹಿಂದೂಗಳಿಗೆ ಬೆದರಿಕೆ!

ಮುಂಬಯಿ – ಇಲ್ಲಿನ ಮಾಲವಣಿ ಪರಿಸರದಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯ ಪೂರ್ವಸಿದ್ಧತೆಗಾಗಿ ರಾಮಭಕ್ತರು ಕೇಸರಿ ಧ್ವಜ ಮತ್ತು ಪತಾಕೆಗಳನ್ನು ಹಚ್ಚುತ್ತಿದ್ದರು. ಮಸೀದಿಯ ಮುಂಭಾಗದ ರಸ್ತೆಗೆ ರಾಮಭಕ್ತರು ಬಂದಾಗ ಅಲ್ಲಿನ ಮುಸ್ಲಿಮರು ಅವರನ್ನು ವಿರೋಧಿಸಿದರು. ಒಬ್ಬ ಮುಸ್ಲಿಂ ಮಹಿಳೆಯು ರಾಮಭಕ್ತರ ಮೇಲೆ ಹಲ್ಲೆ ನಡೆಸಿದಳು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಘಟನೆಯು ಪೂರ್ವನಿಯೋಜಿತವಾಗಿತ್ತು ಎಂದು ಹೇಳಲಾಗುತ್ತಿದೆ; ಏಕೆಂದರೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಮತಾಂದ ಮುಸ್ಲಿಮರು ಅಲ್ಲಿ ಜಮಾಯಿಸಿ ರಾಮಭಕ್ತರಿಗೆ ಬೆದರಿಕೆ ಹಾಕತೊಡಗಿದರು.

‘ಸಕಲ ಹಿಂದೂ ಸಮಾಜ’ವು ಮತಾಂಧರ ವಿರುದ್ಧ ಲಿಖಿತ ದೂರನ್ನು ದಾಖಲಿಸಿದ್ದು, ಮಾರಣಾಂತಿಕ ಹಲ್ಲೆ ಮತ್ತು ದಂಗೆ ಎಬ್ಬಿಸುವ ಸಂಚು ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಶೋಭಾಯಾತ್ರೆಯು ಸವೇರಾ ಚೌಕಕ್ಕೆ ಬಂದಾಗ ಮತಾಂಧರು ಶ್ರೀರಾಮನ ಮೂರ್ತಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಆಗ ಅಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಇಡೀ ಪರಿಸರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು.

ಮಾಲವಣಿ ಪೊಲೀಸ್ ಠಾಣೆಯು ಈ ದಾಳಿ ನಡೆದ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿದೆ. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. (ಪೊಲೀಸ್ ಠಾಣೆ ಹತ್ತಿರದಲ್ಲಿದ್ದರೂ ಸಹ ಮತಾಂಧರು ಇಂತಹ ಉದ್ಧಟತನ ತೋರುತ್ತಾರೆ ಎಂದರೆ, ಇದು ಪೊಲೀಸ್ ಆಡಳಿತದ ವೈಫಲ್ಯವೇ ಸರಿ! – ಸಂಪಾದಕರು).

  • ಶ್ರೀರಾಮನವಮಿಯ ಶೋಭಾಯಾತ್ರೆಯಲ್ಲಿ ಇಂತಹ ಘಟನೆಗಳು ನಡೆಯಲು ಇದು ಭಾರತವೇ ಅಥವಾ ಪಾಕಿಸ್ತಾನವೇ?
  • ಹಿಂದೂಗಳು ಅತೀ ಸಹಿಷ್ಣುಗಳಾಗಿರುವುದರಿಂದಲೇ ಮತಾಂಧರು ಅವರ ಮೇಲೆ ದರ್ಪ ತೋರುತ್ತಾರೆ ಮತ್ತು ಕಾನೂನು-ಸುವ್ಯವಸ್ಥೆಯನ್ನು ಉಲ್ಲಂಘಿಸುತ್ತಾರೆ. ಹಬ್ಬ-ಹರಿದಿನಗಳಿಗೆ ಪದೇ-ಪದೇ ಇಂತಹ ಕಂಟಕಗಳು ಎದುರಾಗಬಾರದು ಎಂದರೆ, ಹಿಂದೂಗಳು ಈಗ ತಮ್ಮ ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಬೇಕಿದೆ!
  • ಹಿಂದೂ ರಾಷ್ಟ್ರದಲ್ಲಿ ಮಾತ್ರ ಎಲ್ಲಾ ಹಬ್ಬಗಳನ್ನು ಆನಂದದಿಂದ ಮತ್ತು ಸುರಕ್ಷಿತವಾಗಿ ಆಚರಿಸಲು ಸಾಧ್ಯವಿರುವುದರಿಂದ, ಆದಷ್ಟು ಬೇಗ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ!