|

ಮುಂಬಯಿ – ಇಲ್ಲಿನ ಮಾಲವಣಿ ಪರಿಸರದಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯ ಪೂರ್ವಸಿದ್ಧತೆಗಾಗಿ ರಾಮಭಕ್ತರು ಕೇಸರಿ ಧ್ವಜ ಮತ್ತು ಪತಾಕೆಗಳನ್ನು ಹಚ್ಚುತ್ತಿದ್ದರು. ಮಸೀದಿಯ ಮುಂಭಾಗದ ರಸ್ತೆಗೆ ರಾಮಭಕ್ತರು ಬಂದಾಗ ಅಲ್ಲಿನ ಮುಸ್ಲಿಮರು ಅವರನ್ನು ವಿರೋಧಿಸಿದರು. ಒಬ್ಬ ಮುಸ್ಲಿಂ ಮಹಿಳೆಯು ರಾಮಭಕ್ತರ ಮೇಲೆ ಹಲ್ಲೆ ನಡೆಸಿದಳು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಘಟನೆಯು ಪೂರ್ವನಿಯೋಜಿತವಾಗಿತ್ತು ಎಂದು ಹೇಳಲಾಗುತ್ತಿದೆ; ಏಕೆಂದರೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಮತಾಂದ ಮುಸ್ಲಿಮರು ಅಲ್ಲಿ ಜಮಾಯಿಸಿ ರಾಮಭಕ್ತರಿಗೆ ಬೆದರಿಕೆ ಹಾಕತೊಡಗಿದರು.
‘ಸಕಲ ಹಿಂದೂ ಸಮಾಜ’ವು ಮತಾಂಧರ ವಿರುದ್ಧ ಲಿಖಿತ ದೂರನ್ನು ದಾಖಲಿಸಿದ್ದು, ಮಾರಣಾಂತಿಕ ಹಲ್ಲೆ ಮತ್ತು ದಂಗೆ ಎಬ್ಬಿಸುವ ಸಂಚು ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಶೋಭಾಯಾತ್ರೆಯು ಸವೇರಾ ಚೌಕಕ್ಕೆ ಬಂದಾಗ ಮತಾಂಧರು ಶ್ರೀರಾಮನ ಮೂರ್ತಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಆಗ ಅಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಇಡೀ ಪರಿಸರದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದರು.
ಮಾಲವಣಿ ಪೊಲೀಸ್ ಠಾಣೆಯು ಈ ದಾಳಿ ನಡೆದ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿದೆ. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. (ಪೊಲೀಸ್ ಠಾಣೆ ಹತ್ತಿರದಲ್ಲಿದ್ದರೂ ಸಹ ಮತಾಂಧರು ಇಂತಹ ಉದ್ಧಟತನ ತೋರುತ್ತಾರೆ ಎಂದರೆ, ಇದು ಪೊಲೀಸ್ ಆಡಳಿತದ ವೈಫಲ್ಯವೇ ಸರಿ! – ಸಂಪಾದಕರು).
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ