ಉತ್ತರಪ್ರದೇಶ: ಸೋನಪಥರಿ ದೇವಸ್ಥಾನದ ಬಳಿ ಮುಸ್ಲಿಮರಿಂದ ಮಾಂಸಾಹಾರ ಸೇವನೆ; ತ್ಯಾಜ್ಯ ಕೆರೆಗೆ ಎಸೆತ

ಕೆರೆಯ ನೀರು ದೇವಸ್ಥಾನಕ್ಕಾಗಿ ಬಳಸುತ್ತಿರುವುದರಿಂದ ಹಿಂದೂಗಳ ವಿರೋಧ ಕೆಲವು ಮುಸ್ಲಿಮರ ಬಂಧನ

ಶ್ರಾವಸ್ತಿ (ಉತ್ತರಪ್ರದೇಶ) – ಇಲ್ಲಿನ ಭಾರತ-ನೇಪಾಳ ಗಡಿಯ ಸಮೀಪವಿರುವ ಸೋನಪಥರಿ ದೇವಸ್ಥಾನ ಮತ್ತು ಬಾಬಾ ಸೋನಪಥರಿ ಆಶ್ರಮದ ಆವರಣದಲ್ಲಿ, ಮುಸ್ಲಿಮರು ಸಂಜೆ ರಂಜಾನ್ ಉಪವಾಸದ ನಂತರ ಮಾಂಸಾಹಾರ ಪದಾರ್ಥಗಳನ್ನು ಸೇವಿಸಿ (ಇಫ್ತಾರ್), ಅದರ ತ್ಯಾಜ್ಯವನ್ನು ಪಕ್ಕದ ಕೆರೆಗೆ ಎಸೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ಬಂಧಿಸಿದ್ದಾರೆ. ಸ್ಥಳೀಯರ ಪ್ರಕಾರ, ಇದೇ ಕೆರೆಯ ನೀರನ್ನು ದೇವಸ್ಥಾನದ ಕಾರ್ಯಗಳಿಗೆ ಬಳಸಲಾಗುತ್ತದೆ.

೧. ವಿಡಿಯೋ ಹೊರಬಂದ ನಂತರ ಅನೇಕ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯ ಹಿಂದೂಗಳು ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸ್ಥಳವು ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿದ್ದು, ಬಹಳಷ್ಟು ಸಂಖ್ಯೆಯಲ್ಲಿ ಭಕ್ತರು ಪೂಜೆ ಮತ್ತು ಪುಣ್ಯಸ್ನಾನಕ್ಕಾಗಿ ಇಲ್ಲಿಗೆ ಬರುತ್ತಾರೆ.

೨. ಭಿನ್ಗಾ ವಲಯದ ಪೊಲೀಸ್ ಅಧಿಕಾರಿ ಸತೀಶ್ ಕುಮಾರ್ ಅವರು ಈ ಬಗ್ಗೆ ಮಾತನಾಡಿ, “ದೇವಸ್ಥಾನದ ಮಹಂತ ಶರಣಾನಂದ ಮಹಾರಾಜರ ದೂರಿನ ಮೇರೆಗೆ ಕೆಲವು ಶಂಕಿತರನ್ನು ಬಂಧಿಸಲಾಗಿದೆ. ಕೇಸು ದಾಖಲಿಸಲಾಗಿದ್ದು, ಉಳಿದವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಾರ್ವಜನಿಕರು ಶಾಂತಿ ಕಾಪಾಡಬೇಕು ಮತ್ತು ವದಂತಿಗಳಿಗೆ ಕಿವಿಗೊಡಬಾರದು” ಎಂದು ಮನವಿ ಮಾಡಿದ್ದಾರೆ.

೩. ಸಾಮಾಜಿಕ ಜಾಲತಾಣಗಳಲ್ಲಿನ ವಿಡಿಯೋದಲ್ಲಿ ಸುಮಾರು ೧೮ ಜನರು ಇಫ್ತಾರ್ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲಿ ಮಾಂಸಾಹಾರ ಸೇವನೆ ಮಾಡಲಾಗಿದೆ ಮತ್ತು ಉಳಿದ ಪದಾರ್ಥಗಳನ್ನು ಅಲ್ಲಿನ ಸಮೀಪದ ಕೆರೆಗೆ ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.