|

ಬೆಂಗಳೂರು – ರಾಜ್ಯದ ಎಲ್ಲಾ ಜಿಲ್ಲೆಗಳ ಜೈಲುಗಳಲ್ಲಿ ಕೈದಿಗಳ ವೈದ್ಯಕೀಯ ತಪಾಸಣೆಯನ್ನು ಮಾಡಲಾಗುತ್ತಿದೆ. ಇದರಲ್ಲಿ ಅನೇಕ ಕೈದಿಗಳು ಮಾದಕ ವಸ್ತುಗಳನ್ನು ಸೇವಿಸಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ವಿಶೇಷವಾಗಿ ಮಹಿಳಾ ಕೈದಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿರುವುದು ದೃಢಪಟ್ಟಿದೆ.
ಪ್ರಸ್ತುತ ಯಾವ ಕೈದಿಗಳು ಮಾದಕ ವಸ್ತು ಸೇವಿಸಿರುವುದು ಕಂಡುಬಂದಿದೆಯೋ, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಅವರ ಮೇಲೆ ಚಿಕಿತ್ಸೆ ಮಾಡಲಾಗುತ್ತಿದೆ. ‘ವ್ಯಸನದ ಮಟ್ಟ ನಿಖರವಾಗಿ ಎಷ್ಟಿದೆ ?’, ಎಂಬುದನ್ನು ತಿಳಿಯಲು ಕೈದಿಗಳ ವಿವಿಧ ಘಟಕಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಪ್ರಾಪ್ತವಾದ ನಂತರ ವ್ಯಸನದ ತೀವ್ರತೆಗೆ ಅನುಗುಣವಾಗಿ ಮುಂದಿನ ಚಿಕಿತ್ಸೆ ಮಾಡಲಾಗುವುದು.
Shocking state of Karnataka’s prisons
A disturbing report reveals inmates are openly consuming drugs behind bars, with a high number of female prisoners involved.
The big questions:
– Are the prison authorities sleeping on the job or complicit?– If this is the state of highly… pic.twitter.com/MIZo9JJfID
— Sanatan Prabhat (@SanatanPrabhat) March 20, 2026
ವಿಚಾರಣಾಧೀನ ಕೈದಿಗಳಲ್ಲಿ ಮಾದಕ ವಸ್ತುಗಳ ವ್ಯಸನ ಅಧಿಕ ಪ್ರಮಾಣದಲ್ಲಿ
ಮೂತ್ರದ ಪರೀಕ್ಷೆಯಿಂದ ಶಿಕ್ಷೆಗೊಳಗಾದ ಕೈದಿಗಳಿಗಿಂತ ವಿಚಾರಣಾಧೀನ (ಇನ್ನೂ ಮೊಕದ್ದಮೆಗಳು ಆರಂಭವಾಗದ) ಕೈದಿಗಳು ಮಾದಕ ವಸ್ತುಗಳನ್ನು ಸೇವಿಸಿದವರ ಸಂಖ್ಯೆ ಹೆಚ್ಚಿರುವುದು ಬಹಿರಂಗವಾಗಿದೆ. ಮಹಿಳಾ ಕೈದಿಗಳು ಚಾಲಾಕಿತನ ಮಾಡಿರುವುದೂ ಬೆಳಕಿಗೆ ಬಂದಿದೆ. ಮೂತ್ರದಲ್ಲಿ ನೀರನ್ನು ಬೆರೆಸಿ ಕೊಟ್ಟಿರುವ ಪ್ರಕಾರಗಳು (ಪ್ರಕರಣಗಳು) ಬಯಲಾಗಿದ್ದು, ಪ್ರಸ್ತುತ ವೈದ್ಯರು ಅತ್ಯಂತ ಜಾಗರೂಕತೆಯಿಂದ ಮಾದರಿಗಳನ್ನು ತೆಗೆದುಕೊಂಡು ತಪಾಸಣೆ ಮಾಡುತ್ತಿದ್ದಾರೆ. ಮಾದಕ ವಸ್ತುಗಳನ್ನು ಸೇವಿಸುವವರ ನಿಖರ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಕೇವಲ ಶೇ. 10 ರಷ್ಟು ಕೈದಿಗಳ ತಪಾಸಣೆ ಮಾತ್ರ ಆಗಿದೆ. ಉಳಿದವರ ತಪಾಸಣೆ ನಡೆಯುತ್ತಿದೆ.
ಸಂಪಾಕೀಯ ನಿಲುವು
|
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !