ಲವ್ ಜಿಹಾದ್ ವಿರುದ್ಧ ಜಾಗೃತಿ ಮತ್ತು ಪ್ರತಿಜ್ಞೆ

ಬೆಂಗಳೂರು – ಗದಗನ ‘ಕ್ರಾಂತಿ ಸೇನಾ ಗದಗ’ ಮತ್ತು ‘ರಾಜರಾಜೇಶ್ವರಿ ಮಹಿಳಾ ಮಂಡಳಿ’ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ‘ದ ಕೇರಳ ಸ್ಟೋರಿ ೨’ ಚಲನಚಿತ್ರದ ವಿಶೇಷ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಉಪಕ್ರಮದ ಲಾಭವನ್ನು ಗದಗ ಜಿಲ್ಲೆಯ ಸುಮಾರು ೬೫೦ ಹಿಂದೂ ಯುವತಿಯರು ಪಡೆದರು. ಚಲನಚಿತ್ರವನ್ನು ನೋಡಿದ ನಂತರ ಯುವತಿಯರಿಗೆ ಲವ್ ಜಿಹಾದ್ ಸಂಕಟದ ಬಗ್ಗೆ ಎಚ್ಚರದಿಂದಿರಲು ಕರೆ ನೀಡಲಾಯಿತು ಹಾಗೂ ಇತರ ಹುಡುಗಿಯರನ್ನು ರಕ್ಷಿಸಲು ಸಾಮೂಹಿಕ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಕ್ರಾಂತಿ ಸೇನೆಯ ಜಿಲ್ಲಾಧ್ಯಕ್ಷ ಶ್ರೀ. ಬಾಬು ಬಾಕಳೆ ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ರಾಣಿ ರಾ. ಚಂದಾವರಿ ಉಪಸ್ಥಿತರಿದ್ದರು.
ಸಂಸ್ಕಾರದ ಬೀಜ ಅಗತ್ಯ! – ಮಾತೃ-ಭಗಿನಿಯರ ಅಭಿಪ್ರಾಯ

ಚಲನಚಿತ್ರ ವೀಕ್ಷಿಸಲು ಬಂದಿದ್ದ ಪೋಷಕರು ಮತ್ತು ತಾಯಂದಿರು ಪ್ರತಿಕ್ರಿಯಿಸಿ, ಪ್ರಸ್ತುತ ಕಾಲದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಯೋಗ್ಯ ಸಂಸ್ಕಾರಗಳನ್ನು ನೀಡುವುದು ಅಗತ್ಯವಾಗಿದೆ. ನಮ್ಮ ಮಕ್ಕಳಿಗೆ ಹಿಂದೂ ಸಂಸ್ಕೃತಿ ಮತ್ತು ಧರ್ಮದ ಮಹತ್ವವನ್ನು ತಿಳಿಸಿದರೆ ಮಾತ್ರ ಇಂತಹ ಸಂಕಟಗಳನ್ನು ತಡೆಯಲು ಸಾಧ್ಯ ಎಂದರು.
ಯುವತಿಯರಿಂದ ಎಚ್ಚರದಿಂದಿರುವ ನಿರ್ಧಾರ!

ಚಲನಚಿತ್ರ ನೋಡಿದ ನಂತರ ಯುವತಿಯರು ತಮ್ಮ ಭಾವನೆಗಳನ್ನು ಹಂಚಿಕೊಂಡರು. ‘ಕೇವಲ ಸ್ನೇಹದ ನೆಪದಲ್ಲಿ ಹಿಂದೂ ಹುಡುಗಿಯರನ್ನು ಜಾಲಕ್ಕೆ ಎಳೆಯಲಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ನಾವು ಎಚ್ಚರದಿಂದಿರುವುದು ಅಗತ್ಯ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪ್ರದರ್ಶನದಿಂದಾಗಿ ಸಮಾಜದಲ್ಲಿ ಜಾಗೃತಿ ಮೂಡಲು ಹೆಚ್ಚು ಸಹಾಯವಾಯಿತು ಎಂದು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ