
ಇಂದಾಪುರ (ಜಿಲ್ಲೆ ಪುಣೆ) – ಉಜನಿ ಅಣೆಕಟ್ಟು ಜಲಾನಯನ ಪ್ರದೇಶದ ಮಾಳವಾಡಿ ಕ್ರಮಾಂಕ ೨ ರಲ್ಲಿನ ಶಿಂಗಾಡೆವಸ್ತಿ ಪರಿಸರದ ಶ್ರೀನಾಥ ಮ್ಹಸ್ಕೋಬಾ ದೇವಸ್ಥಾನದಲ್ಲಿನ ಬೆಳ್ಳಿಯ ಸ್ವಯಂಭೂ ಮೂರ್ತಿ, ಬೆಳ್ಳಿಯ ಕುದುರೆ, ಜೋಗೇಶ್ವರೀದೇವಿಯ ಕೊರಳಿನ ಚಿನ್ನದ ಮಂಗಳಸೂತ್ರ, ನಗದು ಹಣ ಮತ್ತು ಬಾಳುಮಾಮಾ ದೇವಸ್ಥಾನದ ಒಂದೂವರೆ ಕಿಲೋ ತೂಕದ ಬೆಳ್ಳಿಯ ಪಾದುಕೆಗಳು, ಹೀಗೆ ಎಲ್ಲವೂ ಕಳ್ಳತನವಾಗಿದೆ. ಅರ್ಚಕ ಅಣ್ಣಾ ಶಿಂಗಾಡೆ ಇವರು ಅಜ್ಞಾತ ಕಳ್ಳರ ವಿರುದ್ಧ ಇಂದಾಪುರ ಪೊಲೀಸು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
೧. ಅರ್ಚಕ ಅಣ್ಣಾ ಶಿಂಗಾಡೆ ಶ್ರೀನಾಥ ಮ್ಹಸ್ಕೋಬಾ ದೇವಸ್ಥಾನದ ಪಕ್ಕದಲ್ಲಿಯೇ ವಾಸಿಸುತ್ತಾರೆ. ಅವರು ಎಂದಿನಂತೆ ೧೪ ಮಾರ್ಚ್ ರಂದು ಮುಂಜಾನೆ ದೇವಸ್ಥಾನದ ಹತ್ತಿರ ಬಂದಾಗ ಅವರಿಗೆ ಬಾಗಿಲಿನ ಕೊಂಡಿ ಮತ್ತು ಬೀಗ ಒಡೆದ ಸ್ಥಿತಿಯಲ್ಲಿ ಕಂಡುಬಂದಿತು.
೨. ದೇವಸ್ಥಾನದಲ್ಲಿನ ಅನೇಕ ವಸ್ತುಗಳು ಕಳ್ಳತನವಾಗಿರುವುದು ಅವರ ಗಮನಕ್ಕೆ ಬಂದಿತು. ಅವರು ಕೇರಿಯ ಜನರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು, ಹಾಗೆಯೇ ದೇವಸ್ಥಾನದ ಸುತ್ತಮುತ್ತ ಈ ವಸ್ತುಗಳನ್ನು ಹುಡುಕುವ ಪ್ರಯತ್ನ ಮಾಡಿದರು.
೩. ದೇವಸ್ಥಾನದಲ್ಲಿನ ಬೆಳ್ಳಿಯ ಸಾಮಗ್ರಿಗಳು ಕಳ್ಳತನವಾಗಿರುವುದು ಖಚಿತವಾದ ನಂತರ ಅವರು ಇಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಸಂಪಾದಕೀಯ ನಿಲುವುಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂ ದೇವಸ್ಥಾನಗಳಲ್ಲಿ ಕಳ್ಳತನವಾಗುವುದು, ಸಮಾಜಘಾತಕರಿಗೆ ಪೊಲೀಸರ ಭಯ ಇಲ್ಲದಿರುವುದರ ದ್ಯೋತಕವಾಗಿದೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ