‘ದ ಕೇರಳ ಸ್ಟೋರಿ ೨’ ಚಲನ ಚಿತ್ರದ ಘಟನೆಗಳು ಪ್ರತ್ಯಕ್ಷವಾಗಿ ನಡೆಯುತ್ತಿವೆ ! – Reality of The Kerala Story 2

‘ಬೋಧ್ ಬೈ ಶರಣ್’ ಯೂಟ್ಯೂಬ್ ವಾಹಿನಿಯಲ್ಲಿ ‘ಲವ್ ಜಿಹಾದ್’ ಪೀಡಿತೆಯರಿಂದ ವ್ಯಥೆ ಮಂಡನೆ

ತಿರುವನಂತಪುರಂ (ಕೇರಳ) – ‘ದ ಕೇರಳ ಸ್ಟೋರಿ ೨’ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಈ ಚಿತ್ರದಲ್ಲಿ ತೋರಿಸಿರುವಂತೆ ಮತಾಂತರದ ಜಾಲದಲ್ಲಿ ಸಿಲುಕಿದ ಕೇರಳದ ಅನೇಕ ಪೀಡಿತ ಯುವತಿಯರು ‘ಲವ್ ಜಿಹಾದ್’ ಬಗ್ಗೆ ಮಾತನಾಡುವ ಧೈರ್ಯ ತೋರಿಸಿದ್ದಾರೆ. ‘ಬೋಧ್ ಬೈ ಶರಣ್’ ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಪೀಡಿತೆಯರು ಸಂದರ್ಶನವೊಂದರ ಮೂಲಕ ‘ಲವ್ ಜಿಹಾದ್’ನ ಸ್ವರೂಪವನ್ನು ಬಯಲು ಮಾಡಿದ್ದಾರೆ.

ಸಂದರ್ಶನದಲ್ಲಿ ಭಾಗವಹಿಸಿದ್ದ ವೈದ್ಯೆಯಾಗಿರುವ ಯುವತಿಯೊಬ್ಬಳು, ‘ಅವಳ ಮುಸಲ್ಮಾನ ಸ್ನೇಹಿತೆಯರು ಹಿಂದೂ ಧರ್ಮದ ಬಗ್ಗೆ ಸುಳ್ಳು ಕುತೂಹಲ ತೋರಿಸುತ್ತಾ ಹಿಂದೂ ಧರ್ಮದ ಪದ್ಧತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹಿಂದೂ ಯುವತಿಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದಾಗ, ಮುಸಲ್ಮಾನ ಹುಡುಗಿಯರು ಅವಳ ಬ್ರೈನ್ ವಾಶ್ ಮಾಡಿ ಅವಳ ಹಿಂದೂ ಧರ್ಮದ ಬಗ್ಗೆ ಗೊಂದಲ ಮೂಡಿಸಿದರು ಮತ್ತು ಅವಳಿಗೆ ಕುರಾನ್‌ನಲ್ಲಿರುವ ಕೇವಲ ಒಳ್ಳೆಯ ವಿಷಯಗಳನ್ನು ತಿಳಿಸಿದರು. ಹಾಗೆಯೇ ಅವಳನ್ನು ಹಂತಹಂತವಾಗಿ ಮಾನಸಿಕವಾಗಿ ಪರಿವರ್ತಿಸಿದರು. ಅಂತಿಮವಾಗಿ ಅವಳನ್ನು ಇಸ್ಲಾಮಿ ಸಂಪ್ರದಾಯಗಳನ್ನು ಪಾಲಿಸಲು ಮತ್ತು ನಮಾಜ್ ಮಾಡಲು ಪ್ರೇರೇಪಿಸಿದರು. ‘ದೇವರಕೋಣೆಯಲ್ಲಿ ತಂದೆಯು ಶ್ರೀಕೃಷ್ಣನ ಪೂಜೆ ಮಾಡುತ್ತಿದ್ದರೆ, ನಾನು ಮೇಲಿನ ಕೋಣೆಯಲ್ಲಿ ನಮಾಜ್ ಮಾಡುತ್ತಿದ್ದೆ. ನಂತರ ಇದು ಪೋಷಕರಿಗೆ ತಿಳಿದಾಗ, ಅವರ ಮಾತನ್ನು ಕೇಳದೆ ಅವರಿಂದ ದೂರವಾಗುವ ಬೆದರಿಕೆಯನ್ನು ನಾನು ಅವರಿಗೆ ನೀಡಿದ್ದೆ.’, ಎಂದು ಹೇಳಿದ್ದಾಳೆ. ಅನೇಕ ಹಿಂದೂ ಪೀಡಿತೆಯರು ತಮ್ಮ ಮೇಲಾದ ದೌರ್ಜನ್ಯಗಳನ್ನು ಧೈರ್ಯದಿಂದ ಮಂಡಿಸುತ್ತಿರುವುದರಿಂದ ‘ಲವ್ ಜಿಹಾದ್’ನ ನೈಜ ಸ್ವರೂಪವು ಬಯಲಾಗುತ್ತಿದೆ.

ಸಂಪಾದಕೀಯ ನಿಲುವು

ಇದನ್ನು ನೋಡಿಯಾದರೂ ಕೇಂದ್ರ ಸರಕಾರವು ದೇಶಾದ್ಯಂತ ಕಠಿಣ ಲವ್ ಜಿಹಾದ್ ವಿರೋಧಿ ಕಾಯಿದೆಯನ್ನು ಜಾರಿಗೆ ತರುತ್ತದೆಯೇ ?