ತಲೋಜಾ (ರಾಯಗಡ ಜಿಲ್ಲೆ) ಇಲ್ಲಿ ಇರಾನ್‌ನ ಸರ್ವೋಚ್ಚ ಧರ್ಮಗುರು ಖಮೇನಿ ಅವರ ಭಿತ್ತಿಪತ್ರವನ್ನು ಪೊಲೀಸರು ತೆರವುಗೊಳಿಸಿದ್ದಾರೆ! – Taloja Khamenei’s Poster

ಇರಾನ್‌ನ ಖಮೇನಿ ಅವರ ಅನಧಿಕೃತ ಭಿತ್ತಿಪತ್ರವನ್ನು ತೆಗೆಯುತ್ತಿರುವಾಗ ತೆಗೆದ ಛಾಯಾಚಿತ್ರ

ತಲೋಜಾ (ರಾಯಗಡ ಜಿಲ್ಲೆ) – ಇಲ್ಲಿನ ಫೇಸ್ 2 ಭಾಗಕ್ಕೆ ಹೋಗುವ ‘ಪೆಂಧರ್’ ಮೆಟ್ರೋ ನಿಲ್ದಾಣದ ಕೆಳಗಿನ ಕಂಬವೊಂದಕ್ಕೆ ಇಬ್ಬರು ಮುಸ್ಲಿಮರು ತಮ್ಮ ಸ್ವಂತ ಛಾಯಾಚಿತ್ರಗಳೊಂದಿಗೆ ಇರಾನ್‌ನ ಸರ್ವೋಚ್ಚ ಧರ್ಮಗುರು ಅಲಿ ಖಮೇನಿ ಅವರ ಭಿತ್ತಿಪತ್ರವನ್ನು ಅಂಟಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿದರು. ನಂತರ ಪೊಲೀಸರು ಆ ಭಿತ್ತಿಪತ್ರವನ್ನು ಕೆಳಗಿಳಿಸಿದರು. (ಅನಧಿಕೃತ ಭಿತ್ತಿಪತ್ರವನ್ನು ತೆಗೆದಿದ್ದರೂ ಸಹ, ಈ ಮೂಲಕ ವಾತಾವರಣವನ್ನು ಕಲುಷಿತಗೊಳಿಸುವವರನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು! – ಸಂಪಾದಕರು)

ಭಿತ್ತಿಪತ್ರ ತೆಗೆದ ನಂತರದ ಕಂಬ

‘ಸಿಡ್ಕೋ ಗೃಹನಿರ್ಮಾಣ ವಸತಿ ಸಮುಚ್ಚಯಗಳ ಕಡೆಗೆ ಹೋಗುವ ರಸ್ತೆಯಲ್ಲಿ ಇಂತಹ ಭಿತ್ತಿಪತ್ರಗಳನ್ನು ಹಚ್ಚಿ ಸ್ಥಳೀಯ ಹಿಂದೂಗಳ ಮನಸ್ಸಿನಲ್ಲಿ ಭಯ ಹುಟ್ಟಿಸುವ ಪ್ರಯತ್ನವನ್ನು ಮುಸ್ಲಿಮರು ಮಾಡುತ್ತಿದ್ದಾರೆಯೇ? ‘ತಲೋಜಾ ಫೇಸ್ 2’ ನಲ್ಲಿ ಸಿಡ್ಕೋ ಹೊಸ ನಗರವನ್ನೇ ನಿರ್ಮಿಸಿದೆ; ಆದರೆ ಇಲ್ಲಿಯವರೆಗೆ ಒಂದೂ ದೊಡ್ಡ ಪೊಲೀಸ್ ಠಾಣೆಯನ್ನು ಏಕೆ ನಿರ್ಮಿಸಿಲ್ಲ?’, ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

ದೀಪಾವಳಿಯಲ್ಲಿ ದೀಪ ಹಚ್ಚಲು ಮತಾಂಧರಿಂದ ವಿರೋಧ ವ್ಯಕ್ತವಾಗಿತ್ತು!

ತಲೋಜಾದಲ್ಲಿ ಮತಾಂಧರ ಅಟ್ಟಹಾಸ ಹೆಚ್ಚುತ್ತಿದೆ. 2025ರ ದೀಪಾವಳಿಯ ಸಮಯದಲ್ಲಿ ಕಟ್ಟಡದಲ್ಲಿ ‘ದೀಪ’ಗಳನ್ನು ಹಚ್ಚಲು ಬಿಡುವುದಿಲ್ಲ ಎಂದು ಕೆಲವು ಮತಾಂಧರು ಗಲಾಟೆ ಮಾಡಿದ್ದರು. (ಸಿಡ್ಕೋ ಮನೆಗಳಲ್ಲಿ ವಾಸಿಸುವ 90 ಪ್ರತಿಶತ ಜನರು ಹಿಂದೂಗಳೇ ಇದ್ದಾರೆ; ಹಾಗಾದರೆ ಅವರ ಸುರಕ್ಷತೆಗಾಗಿ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ? – ಸಂಪಾದಕರು)

ಸಂಪಾದಕೀಯ ನಿಲುವು

  • ಹಮಾಸ್ ಮತ್ತು ಹಿಜ್ಬುಲ್ಲಾಗೆ ಬಹಿರಂಗ ಬೆಂಬಲ ನೀಡುವ ಹಾಗೂ ಭಾರತ ವಿರೋಧಿ ಹೇಳಿಕೆ ನೀಡುವ ಖಮೇನಿ ಅವರ ಬಗ್ಗೆ ಭಾರತದ ಮುಸ್ಲಿಮರಿಗೆ ಅಷ್ಟೊಂದು ಅನುಕಂಪವಿದ್ದರೆ, ಅವರಿಗೆ ಶಿಕ್ಷೆ ನೀಡಿ ನಂತರ ಇರಾನ್‌ಗೆ ಅಟ್ಟಬೇಕು!
  • ಭಯೋತ್ಪಾದಕರನ್ನು ಬೆಂಬಲಿಸುವ ಮತ್ತು ಜನರ ಮೇಲೆ ದೌರ್ಜನ್ಯ ಎಸಗುವ ಖಮೇನಿ ಅವರನ್ನು ಹತ್ಯೆಗೈದಾಗ ಇರಾನ್ ಜನರು ಸಂಭ್ರಮಿಸಿದರು, ಆದರೆ ಭಾರತದ ಮುಸ್ಲಿಮರು ಅವರ ಹೆಸರಿನಲ್ಲಿ ಗೋಳಾಡುತ್ತಾರೆ! ಈ ಪರಿಸ್ಥಿತಿಯು ಭಾರತದ ಸುರಕ್ಷತೆಗೆ ಅಪಾಯಕಾರಿ!
  • ದೀಪಾವಳಿ ಆಚರಣೆಗೆ ವಿರೋಧ ವ್ಯಕ್ತಪಡಿಸಲು ಭಾರತವೇನು ಇಸ್ಲಾಮಿಕ್ ರಾಷ್ಟ್ರವೇ?