ವಿಶ್ವಕಪ್ ಅನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋದರೆ ಅದರಲ್ಲಿ ತಪ್ಪೇನಿದೆ ? ಮಸೀದಿಯಲ್ಲಿ ಇದಕ್ಕೆ ಅನುಮತಿಯಿಲ್ಲ! – Maulana Sajid Rashidi on World Cup

  •  ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಅವರ ಹೇಳಿಕೆ

  • ವಿಶ್ವಕಪ್ ಅನ್ನು ದೇವಸ್ಥಾನಕ್ಕೆ ಕೊಂಡೊಯ್ದಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಟೀಕಿಸಿದ್ದರು

ಮೌಲಾನಾ ಸಾಜಿದ್ ರಶೀದಿ

ನವದೆಹಲಿ – “ಯಾರಾದರೂ ಟ್ರೋಫಿಯನ್ನು ಮಸೀದಿಗೂ ತರಬೇಕು ಎಂದು ಹೇಳಿದರೆ ನೀವೇನು ಮಾಡುತ್ತೀರಿ? ಕಪ್ ಅನ್ನು ಮಸೀದಿಗೆ ತೆಗೆದುಕೊಂಡು ಹೋಗುತ್ತೀರಾ? ಮಸೀದಿಯಲ್ಲಿ ಇಂತಹ ವಸ್ತುಗಳನ್ನು ತರಲು ಅವಕಾಶವಿಲ್ಲ. ಮಸೀದಿಗೆ ಟ್ರೋಫಿ ತರಲು ಅನುಮತಿಯಿಲ್ಲ. ಒಂದು ವೇಳೆ ಅವರು ಟ್ರೋಫಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ, ಅದರಲ್ಲಿ ತಪ್ಪೇನಿದೆ?” ಎಂದು ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡವು ಕರ್ಣಾವತಿಯಲ್ಲಿ ನಡೆದ ‘ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ’ಯನ್ನು ಗೆದ್ದ ನಂತರ, ಲಭಿಸಿದ ಟ್ರೋಫಿಯನ್ನು ನಗರದ ಪ್ರಸಿದ್ಧ ಹನುಮಾನ್ ದೇವಸ್ಥಾನಕ್ಕೆ ಕೊಂಡೊಯ್ದು ದೇವರ ಚರಣಗಳಿಗೆ ಅರ್ಪಿಸಿತ್ತು. ಈ ಘಟನೆಯನ್ನು ಟೀಕಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್, “ಟ್ರೋಫಿಯನ್ನು ಚರ್ಚ್ ಮತ್ತು ಮಸೀದಿಗಳಿಗೂ ಕೊಂಡೊಯ್ಯಬೇಕು, ಭಾರತವು ಜಾತ್ಯತೀತ ದೇಶ” ಎಂದು ಹೇಳಿದ್ದರು. ಅದಕ್ಕೆ ರಶೀದಿ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಆಗಿದ್ದರೂ ಕೇವಲ ರಾಜಕೀಯ ಲಾಭಕ್ಕಾಗಿ ವಿರೋಧಿಸುವವರನ್ನು ಹಿಂದೂಗಳು ಕಾನೂನುಬದ್ಧ ಮಾರ್ಗಗಳ ಮೂಲಕ ಪ್ರಶ್ನಿಸಬೇಕು!