|
(ಗಮನಿಸಿ: ‘ಬಾರವ’ ಎಂದರೆ ಮೆಟ್ಟಿಲುಗಳಿರುವ ಐತಿಹಾಸಿಕ ಬಾವಿ ಅಥವಾ ಕಲ್ಯಾಣಿ ಎಂದರ್ಥ)

ವರದಿ ವಿವರ: ಪುಣೆ ಜಿಲ್ಲೆಯ ಮಂಚರ್ನಲ್ಲಿರುವ ಐತಿಹಾಸಿಕ ಪಾಂಡವರ ಕಾಲದ ಕಲ್ಯಾಣಿ (ಬಾರವ) ಆವರಣದಲ್ಲಿ ಅತಿಕ್ರಮಣ ನಡೆದಿದೆ. ಈ ಸ್ಥಳದಲ್ಲಿ ಪ್ರಾಚೀನ ಶಾಸನಗಳು, ಗೋಮುಖ ಮತ್ತು ಕಲ್ಲಿನ ಕೆತ್ತನೆಗಳಿದ್ದು, ಇದು ಹಿಂದೂ ಸಂಸ್ಕೃತಿಯ ಸ್ಮಾರಕ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳಿವೆ. ಆದರೂ ಇಲ್ಲಿ ಮತಾಂಧರು ಅನಧಿಕೃತ ದರ್ಗಾ ನಿರ್ಮಿಸಿ, ಇಡೀ ಜಾಗವನ್ನು ‘ವಕ್ಫ್’ ಆಸ್ತಿ ಎಂದು ಘೋಷಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕಳೆದ 6 ತಿಂಗಳ ಹಿಂದೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ಜಾಗ ಖಾಲಿ ಇತ್ತು. ಆದರೆ ಈಗ ಅಲ್ಲಿ ಸ್ಮಶಾನದ ಮಾದರಿಯಲ್ಲಿ ನಿರ್ಮಾಣ ಕಾರ್ಯ ನಡೆದಿದೆ. ಅಚ್ಚರಿಯೆಂದರೆ, 2021ರಲ್ಲಿ ನಿಧನರಾದ ವ್ಯಕ್ತಿಯ ಗೋರಿಯನ್ನು ಅಲ್ಲಿ ತೋರಿಸಲಾಗಿದೆ.

“6 ತಿಂಗಳ ಹಿಂದೆ ಅಸ್ತಿತ್ವದಲ್ಲೇ ಇಲ್ಲದ ಜಾಗದಲ್ಲಿ 2021ರ ಗೋರಿ ಇರಲು ಹೇಗೆ ಸಾಧ್ಯ?” ಎಂದು ಸಂಸದರು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. ಈ ನಿರ್ಲಕ್ಷ್ಯವನ್ನು ಖಂಡಿಸಿ ಬಿಜೆಪಿ ಸಂಸದೆ ಪ್ರೊ. ಡಾ. ಮೇಧಾ ಕುಲಕರ್ಣಿ ಅವರು ಸ್ಥಳೀಯ ಹಿಂದೂ ಸಂಘಟನೆಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Pune district (Maharashtra): A Pandava-era stepwell at Manchar encroached upon, with an illegal dargah constructed while claiming the land as Waqf property.
BJP MP Prof. Dr. @Medha_kulkarni led a protest against the encroachment, terming it a case of “land jihad.”
The firm… pic.twitter.com/fWaXfRhxTY
— Sanatan Prabhat (@SanatanPrabhat) March 8, 2026
ಪೊಲೀಸರ ವರ್ತನೆಗೆ ಆಕ್ಷೇಪ: ಪ್ರತಿಭಟನೆಯ ವೇಳೆ ಸಂಸದರು ಹಿಂದೂ ದೇವತೆಯ ಚಿತ್ರವನ್ನು ಇರಿಸಲು ಪ್ರಯತ್ನಿಸಿದಾಗ ಪೊಲೀಸರು ಅದನ್ನು ತಡೆದರು. “ಅಕ್ರಮವಾಗಿ ದರ್ಗಾ ಕಟ್ಟಲು ಮತ್ತು ಹಸಿರು ಬಣ್ಣ ಹಚ್ಚಲು ಯಾರಿಗೂ ಅಡ್ಡಿಪಡಿಸದ ಪೊಲೀಸರು, ನಮಗೆ ‘ಓಂ’ ಬರೆಯಲು ಮತ್ತು ದೇವರ ಚಿತ್ರ ಇಡಲು ಏಕೆ ಬಿಡುತ್ತಿಲ್ಲ?” ಎಂದು ಅವರು ಕಿಡಿಕಾರಿದರು.
ಎಚ್ಚರಿಕೆ: ಮುಂದಿನ 8 ದಿನಗಳ ಒಳಗೆ ಅತಿಕ್ರಮಣ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಲಾಗಿದೆ. ಉಪವಿಭಾಗೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !