ಮುಸ್ಲಿಂ ತಂದೆಯಿಂದಲೇ ತನ್ನ ಮಗನಿಂದ ಮಸೀದಿಯ ಗೋಡೆಯ ಮೇಲೆ ‘ಜೈ ಶ್ರೀರಾಮ್’ ಎಂದು ಬರೆಸಿದ !

ಬಾಗಲಕೋಟೆ ಹಿಂದೂ-ಮುಸ್ಲಿಂ ದಂಗೆ ಎಬ್ಬಿಸಲು ಮುಸ್ಲಿಮರ ಸಂಚು!

ಬಾಗಲಕೋಟೆ – ಇಲ್ಲಿನ ಯಮನೂರಿ ಎಂಬ ಮುಸ್ಲಿಂ ವ್ಯಕ್ತಿಯು ತನ್ನ ಮಗನ ಕೈಯಿಂದ ಮಸೀದಿಯ ಗೋಡೆಯ ಮೇಲೆ ‘ಜೈ ಶ್ರೀರಾಮ್’ ಎಂದು ಬರೆಸಿ, ಅಲ್ಲಿಂದ ಗುಪ್ತವಾಗಿ ಪರಾರಿಯಾಗಿದ್ದಾನೆ. ಮಸೀದಿಯ ಗೋಡೆಯ ಮೇಲೆ ‘ಜೈ ಶ್ರೀರಾಮ್’ ಎಂದು ಬರೆದಿರುವುದು ತಿಳಿಯುತ್ತಿದ್ದಂತೆಯೇ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದ ಘಟನೆ ಹಸಿರಾಗಿರುವಾಗಲೇ, ನಗರದಲ್ಲಿ ಈ ಎರಡನೇ ಘಟನೆ ನಡೆದಿರುವುದು ಇಡೀ ನಗರದಲ್ಲಿ ಉದ್ವಿಗ್ನತೆ ಹರಡಲು ಕಾರಣವಾಗಿದೆ.

ಬಾಗಲಕೋಟೆಯ ಸೆಕ್ಟರ್ 44 ರಲ್ಲಿರುವ ಮಸೀದಿಯ ಗೋಡೆಯ ಮೇಲೆ ಮಗನ ಕೈಯಿಂದ ‘ಜೈ ಶ್ರೀರಾಮ್’ ಎಂದು ಬರೆಸಿದ ನಂತರ, ಮುಸ್ಲಿಂ ತಂದೆ ಮತ್ತು ಮಗ ರಿಕ್ಷಾದಲ್ಲಿ ಅಲ್ಲಿಂದ ಹೊರಟುಹೋಗಿದ್ದಾರೆ. ಈ ಸಂಪೂರ್ಣ ಘಟನೆಯು ‘ಸಿಸಿಟಿವಿ ಕ್ಯಾಮೆರಾ’ದಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವನಗರ ಪೊಲೀಸರು ಯಮನೂರಿ ಎಂಬ ಮುಸ್ಲಿಂ ವ್ಯಕ್ತಿ ಮತ್ತು ಆತನ ಮಗನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಗೋಡೆಯ ಮೇಲಿದ್ದ ‘ಜೈ ಶ್ರೀರಾಮ್’ ಪದಗಳನ್ನು ನೀರಿನಿಂದ ತೊಳೆದು ಅಳಿಸಿಹಾಕಿದ್ದಾರೆ. ಈ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕೃತ್ಯಗಳ ಮೂಲಕ ಮುಸ್ಲಿಮರನ್ನು ಪ್ರಚೋದಿಸಿ, ಹಿಂದೂಗಳನ್ನು ಹತ್ಯೆ ಮಾಡಲು ಮತಾಂಧರು ಹೇಗೆ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ!