ಮೆರವಣಿಗೆಯ ಮಾರ್ಗದಲ್ಲಿರುವ 92 ಮಸೀದಿಗಳನ್ನು ತಾರ್ಪಾಲಿನಿಂದ ಮುಚ್ಚಲಾಗಿದೆ!

  • ಶಹಜಹಾನ್‌ಪುರ (ಉತ್ತರಪ್ರದೇಶ)ದಲ್ಲಿ ಹೋಳಿ ಪ್ರಯುಕ್ತ ‘ಲಾಟ್ ಸಾಹೇಬ್’ ಮೆರವಣಿಗೆ

  • ಅತ್ಯಾಚಾರಿ ಆಡಳಿತಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಈ ಮೆರವಣಿಗೆ ನಡೆಸಲಾಗುತ್ತದೆ.

(ಲಾಟ್ ಸಾಹೇಬ್ ಎಂದರೆ ಹಿಂದಿನ ಕಾಲದ ಅತ್ಯಾಚಾರಿ ನವಾಬ ಅಥವಾ ಆಡಳಿತಗಾರ)

ಶಹಜಹಾನ್‌ಪುರ (ಉತ್ತರ ಪ್ರದೇಶ) – ಇಲ್ಲಿನ ಲಾಟ್ ಸಾಹೇಬ್ ಮೆರವಣಿಗೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಸಿದ್ಧತೆಗಳು ವೇಗವಾಗಿ ನಡೆಯುತ್ತಿವೆ. ಜಿಲ್ಲಾಡಳಿತವು ನಗರದಾದ್ಯಂತ ಇರುವ 92 ಮಸೀದಿಗಳನ್ನು ತಾರ್ಪಾಲಿನಿಂದ ಮುಚ್ಚಿದೆ. ಹೋಳಿ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಗಳ ಮೇಲೆ ಬಣ್ಣ ಬೀಳಬಾರದು ಎಂಬ ಮುನ್ನೆಚ್ಚರಿಕೆಯಿಂದ ಆಡಳಿತ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ.

1. ಶಹಜಹಾನ್‌ಪುರ ಜಿಲ್ಲೆಯಲ್ಲಿ ಲಾಟ್ ಸಾಹೇಬ್ ಮೆರವಣಿಗೆಯನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲಿ ‘ದೊಡ್ಡ ಲಾಟ್ ಸಾಹೇಬ್’ ಮತ್ತು ‘ಸಣ್ಣ ಲಾಟ್ ಸಾಹೇಬ್’ ಎಂಬ ಎರಡು ಮೆರವಣಿಗೆಗಳನ್ನು ಹೊರತೆಗೆಯಲಾಗುತ್ತದೆ.

2. ಈ ಮೆರವಣಿಗೆಯು ಸಾಂಪ್ರದಾಯಿಕ ಮತ್ತು ವಿಶಿಷ್ಟವೆಂದು ಪರಿಗಣಿಸಲ್ಪಟ್ಟಿದೆ. ಲಾಟ್ ಸಾಹೇಬನನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ನಗರದಾದ್ಯಂತ ಮೆರವಣಿಗೆ ಮಾಡಲಾಗುತ್ತದೆ. ಎತ್ತಿನ ಗಾಡಿಯಲ್ಲಿ ಕೂರಿಸಿದ ನಂತರ ಅವನಿಗೆ ಶಿರಸ್ತ್ರಾಣ (ಹೆಲ್ಮೆಟ್) ಧರಿಸಲಾಗುತ್ತದೆ. ತದನಂತರ ಅವನ ಮೇಲೆ ಪೊರಕೆ, ಬೂಟು ಮತ್ತು ಚಪ್ಪಲಿಗಳಿಂದ ಹೊಡೆಯುವ ಮೂಲಕ ಹಳೆಯ ಅತ್ಯಾಚಾರಿ ಆಡಳಿತಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತದೆ.

3. ಪೊಲೀಸ್ ಮತ್ತು ಆಡಳಿತ ಮಂಡಳಿಯು ಎರಡೂ ಮೆರವಣಿಗೆಗಳ ಮಾರ್ಗಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಶಹಜಹಾನ್‌ಪುರದಲ್ಲಿ ವಿಭಿನ್ನ ಶೈಲಿಯ ಹೋಳಿ ಆಚರಣೆ

ಹೋಳಿಗೂ ಸುಮಾರು 15 ದಿನಗಳ ಮೊದಲು ಲಾಟ್ ಸಾಹೇಬ್ ಆಗುವ ವ್ಯಕ್ತಿಯನ್ನು ಕರೆಸಿ ಅವನಿಗೆ ಉತ್ತಮ ಆತಿಥ್ಯ ನೀಡಲಾಗುತ್ತದೆ. ನಂತರ ಅವನನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಬಣ್ಣಗಳಲ್ಲಿ ಮಿಂದು ಉತ್ಸಾಹದಲ್ಲಿರುವ ಜನರು ಘೋಷಣೆಗಳನ್ನು ಕೂಗುತ್ತಾ ಲಾಟ್ ಸಾಹೇಬನ ಮೇಲೆ ಚಪ್ಪಲಿ ಮತ್ತು ಬೂಟುಗಳ ಸುರಿಮಳೆಗೈಯುತ್ತಾರೆ.