ಕ್ರಮ ಕೈಗೊಳ್ಳುವುದಾಗಿ ಗೃಹರಾಜ್ಯ ಸಚಿವರ ಭರವಸೆ!

ಮುಂಬಯಿ – ಜಿಯೋ ಹಾಟ್ಸ್ಟಾರ್ ಓಟಿಟಿ (ಓವರ್ ದಿ ಟಾಪ್) ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗುತ್ತಿರುವ ‘ಎಂಗೇಜ್ಡ್ 2 ರೋಕಾ ಯಾ ಧೋಕಾ’ ಎಂಬ ‘ರಿಯಾಲಿಟಿ ಶೋ’ನಲ್ಲಿ (ಯಾವುದೇ ಸ್ಕ್ರಿಪ್ಟ್ ಇಲ್ಲದೆ ತಯಾರಿಸಲಾದ ಕಾರ್ಯಕ್ರಮ) ತೋರಿಸಲಾಗುತ್ತಿರುವ ಅಶ್ಲೀಲತೆ ಮತ್ತು ಮಹಿಳೆಯರ ವಿಡಂಬನೆಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಮುಖ್ಯಮಂತ್ರಿ ಮತ್ತು ಗೃಹರಾಜ್ಯ ಸಚಿವರಿಗೆ ಮನವಿ ಸಲ್ಲಿಸಿದೆ. ರಿಯಾಲಿಟಿ ಶೋ ಮೇಲೆ ತಕ್ಷಣ ನಿಷೇಧ ಹೇರಬೇಕು ಮತ್ತು ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವಾಗ, ಇಂತಹ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಅಶ್ಲೀಲವಾಗಿ ಪ್ರಸ್ತುತಪಡಿಸುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಇದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮಹಿಳೆಯರನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅವಮಾನವನ್ನಾದರೂ ಮಾಡಬೇಡಿ ಎಂದು ರಿಯಾಲಿಟಿ ಶೋ ಆಯೋಜಕರಿಗೆ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಕು. ಪ್ರಿಯಾಂಕಾ ಲೋಣೆ ಎಚ್ಚರಿಸಿದ್ದಾರೆ. ಸಮಿತಿಯ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹರಾಜ್ಯ ಸಚಿವ ಯೋಗೇಶ್ ಕದಂ ಅವರು, “ಈ ಪ್ರಕರಣದಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು, ಹಾಗೆಯೇ ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಂಸ್ಕೃತಿಕ ಇಲಾಖೆಗೂ ತಿಳಿಸಲಾಗುವುದು” ಎಂದು ಭರವಸೆ ನೀಡಿದರು. ಡಿಜಿಟಲ್ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ರಾಜ್ಯ ಸರಕಾರವು ‘ಸಾಂಸ್ಕೃತಿಕ ಮೇಲ್ವಿಚಾರಣಾ ಸಮಿತಿ’ಯನ್ನು ರಚಿಸಬೇಕು. ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಸ್ತ್ರೀ-ಗೌರವದ ಪರಂಪರೆಯನ್ನು ಕಾಪಾಡಲು ಇಂತಹ ವಿಕೃತ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಮಿತಿಯು ಎಚ್ಚರಿಸಿದೆ. ’24 ಗಂಟೆಗಳ ಒಳಗೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿಯು ಗೃಹರಾಜ್ಯ ಸಚಿವರ ಬಳಿ ಆಗ್ರಹಿಸಿದೆ.
ಮನವಿಯಲ್ಲಿ…
1. ‘ರಿಯಾಲಿಟಿ ಶೋ’ನಲ್ಲಿ ‘ಲ್ಯಾಪ್ ಡ್ಯಾನ್ಸ್’ (ತೊಡೆಯ ಮೇಲೆ ಕುಳಿತು ನೃತ್ಯ ಮಾಡುವುದು), ‘ಮಡ್ ಟಾಸ್ಕ್’ (ಕೆಸರು ಹಚ್ಚುವುದು) ಮತ್ತು ‘ಐಸ್ ಕ್ಯೂಬ್ ಟಾಸ್ಕ್’ (ಮಂಜುಗಡ್ಡೆಯ ತುಂಡುಗಳೊಂದಿಗೆ ಆಟವಾಡುವುದು) ನಂತಹ ಅತ್ಯಂತ ಕೆಳಮಟ್ಟದ ಕೃತ್ಯಗಳ ಮೂಲಕ ಮಹಿಳೆಯರನ್ನು ವಸ್ತುವಿನಂತೆ ಬಳಸಲಾಗುತ್ತಿದೆ.
2. ಬಾಯಿಂದ ಮಹಿಳೆಯರ ಬಟ್ಟೆಯನ್ನು ತೆಗೆಯುವುದು, ಸಾರ್ವಜನಿಕವಾಗಿ ಮಹಿಳೆಯರನ್ನು ಕೈಯಿಂದ ಮುಟ್ಟಿ ಸ್ನಾನ ಮಾಡಿಸುವುದು, ಮೈಗೆ ಕೆಸರು ಹಚ್ಚುವುದು ಮುಂತಾದ ಕೃತ್ಯಗಳು ಕಾನೂನಿನ ಬಹಿರಂಗ ಉಲ್ಲಂಘನೆಯಾಗಿವೆ. ಇಂತಹ ಕೃತ್ಯಗಳಿಂದ ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ಸ್ವೈರಚಾರವನ್ನು ತಡೆಯುವುದು ಕಾಲದ ಅವಶ್ಯಕತೆಯಾಗಿದೆ.
ಅಶ್ಲೀಲ ಸಾಹಿತ್ಯದ ಮೇಲೆ ಕಾಯಂ ನಿರ್ಬಂಧ ಹೇರಲು ಪ್ರಯತ್ನಿಸುವುದಾಗಿ ಜನಪ್ರತಿನಿಧಿಗಳ ಭರವಸೆ
ವಿಷಯದ ಗಂಭೀರತೆಯನ್ನು ಅರಿತು ಭಾಜಪದ ಶಾಸಕಿ ಸೌ. ಚಿತ್ರಾ ವಾಘ್ ಮತ್ತು ಶಿವಸೇನೆಯ ಶಾಸಕಿ ಡಾ. ಮನೀಷಾ ಕಾಯಂದೆ ಅವರೂ ಈ ಪ್ರಕರಣದ ಬಗ್ಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ವಿಧಾನಮಂಡಲದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ‘ಇಂತಹ ಅಶ್ಲೀಲ ಸಾಹಿತ್ಯದ ಮೇಲೆ ಕಾಯಂ ನಿರ್ಬಂಧ ಹೇರಲು ಪ್ರಯತ್ನಿಸಲಾಗುವುದು’ ಎಂದು ಜನಪ್ರತಿನಿಧಿಗಳು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!