ಗರ್ಭಗುಡಿಯಲ್ಲಿ ತುಂಬಿದ ಮರಳನ್ನು ತೆಗೆದ ನಂತರ ವರ್ಷದೊಳಗೆ ಪ್ರವೇಶ ಸಿಗಲಿದೆ

ಭುವನೇಶ್ವರ (ಒಡಿಶಾ) – ಇಲ್ಲಿನ ಪ್ರಾಚೀನ ಕೊನಾರ್ಕ್ ಮಂದಿರದ ಗರ್ಭಗುಡಿಗೆ ಒಂದು ವರ್ಷದ ನಂತರ ಭಕ್ತರಿಗೆ ಪ್ರವೇಶಿಸಲು ಅವಕಾಶ ಸಿಗಲಿದೆ. ಪ್ರಸ್ತುತ ಗರ್ಭಗುಡಿಯಲ್ಲಿ ಮರಳು ತುಂಬಿದ್ದು, ಅದನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಮಂದಿರದ ಹಿಂದೆ ೧೫ ಅಡಿ ಎತ್ತರದ ಗೋಡೆಯಿದೆ. ಅದು ಕುಸಿಯಬಾರದೆಂದು ಬ್ರಿಟಿಷರು ೧೯೦೩-೦೪ ರ ಅವಧಿಯಲ್ಲಿ ಮಂದಿರದ ಗರ್ಭಗುಡಿಯಲ್ಲಿ ಸಾವಿರಾರು ಟನ್ ಮರಳನ್ನು ತುಂಬಿದ್ದರು. ಅಂದಿನಿಂದ ಗರ್ಭಗುಡಿ ಮುಚ್ಚಲ್ಪಟ್ಟಿದೆ. ಈಗ ಭಾರತೀಯ ಪುರಾತತ್ವ ಇಲಾಖೆ ಮತ್ತು ‘ಐಐಟಿ ಮದ್ರಾಸ್’ ತಜ್ಞರ ೩೦ ಜನರ ತಂಡಕ್ಕೆ ಈ ಮರಳನ್ನು ತೆಗೆಯುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಸಂಪೂರ್ಣವಾಗಿ ಮರಳನ್ನು ತೆಗೆಯಲು ೩ ತಿಂಗಳುಗಳು ಬೇಕಾಗುತ್ತವೆ. ಒಂದು ವರ್ಷದ ನಂತರ ಭಕ್ತರಿಗೆ ಮೊದಲ ಬಾರಿಗೆ ಈ ಐತಿಹಾಸಿಕ ಮಂದಿರದ ಗರ್ಭಗುಡಿ ಒಳಗೆ ಪ್ರವೇಶಿಸಲು ಅವಕಾಶ ಸಿಗಲಿದೆ. ಈ ಮಂದಿರಕ್ಕೆ ಪ್ರತಿ ವರ್ಷ ೩೫ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ದೇಶದ ಪುರಾತತ್ವ ಸ್ಮಾರಕಗಳಲ್ಲಿ ತಾಜ್ ಮಹಲ್ ನಂತರ ಈ ಮಂದಿರವು ಎರಡನೇ ಸ್ಥಾನದಲ್ಲಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ