
ಗೋದ್ರಾ (ಗುಜರಾತ್) – ಇಲ್ಲಿನ ಸೆಶನ್ಸ್ ನ್ಯಾಯಾಲಯವು ೨೦೨೪ ರ ಗೋಹತ್ಯೆ ಮತ್ತು ಗೋಮಾಂಸ ಸಾಗಾಟ ಪ್ರಕರಣದಲ್ಲಿ ಮೆಹಬೂಬ್ ಅಬ್ದುಲ್ಲಾ ಸಬುರಿಯಾ ಮತ್ತು ಫರ್ಹಾನ್ ಮೆಹಬೂಬ್ ಸಬುರಿಯಾ ಅವರಿಗೆ ೧0 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ೨ ಲಕ್ಷ ರೂಪಾಯಿ ದಂಡ ವಿಧಿಸಿದೆ. ಇವರಿಬ್ಬರೂ ತಂದೆ-ಮಗನಾಗಿದ್ದಾರೆ. ಮೂರನೇ ಆರೋಪಿ ಸಲೀಂ ಸಿದ್ದಿಕ್ ಅವರನ್ನು ಸಂಶಯದ ಲಾಭ ನೀಡಿ ನಿರಪರಾಧಿ ಎಂದು ಖುಲಾಸೆಗೊಳಿಸಲಾಗಿದೆ. ಗುಜರಾತ್ನಲ್ಲಿ ಗೋಹತ್ಯೆ, ಗೋಮಾಂಸ ಸಂಗ್ರಹಣೆ, ಸಾಗಾಟ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧವಿದೆ.
ಜುಲೈ ೯, ೨೦೨೪ ರಂದು ಗೋದ್ರಾ ಬಿ ವಿಭಾಗದ ಪೊಲೀಸ್ ಠಾಣೆಯ ಅಧಿಕಾರಿಗಳು ನಿಯಮಿತ ಗಸ್ತು ತಿರುಗುತ್ತಿದ್ದಾಗ, ಗೋದ್ರಾ-ಹಮೀರಪುರ ರಸ್ತೆಯ ಅಲಿ ಮಸೀದಿ ಪ್ರದೇಶದಲ್ಲಿ ಸಂದೇಹಾಸ್ಪದ ವಾಹನವೊಂದು ಪತ್ತೆಯಾಯಿತು. ವಾಹನವನ್ನು ತಡೆದು ವಿಚಾರಣೆ ನಡೆಸಲು ಪ್ರಯತ್ನಿಸಿದಾಗ ಕೆಲವರು ಅಲ್ಲಿಂದ ಓಡಿಹೋದರು. ಅವರಲ್ಲಿ ಇಬ್ಬರನ್ನು ಹಿಡಿಯಲಾಯಿತು. ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿ ಮಾಂಸ ಮತ್ತು ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ವಿಚಾರಣೆಯ ವೇಳೆ ಅವರು ತಮ್ಮ ಹೆಸರುಗಳನ್ನು ಮೆಹಬೂಬ್ ಅಬ್ದುಲ್ಲಾ ಸಬುರಿಯಾ ಮತ್ತು ಫರ್ಹಾನ್ ಮೆಹಬೂಬ್ ಸಬುರಿಯಾ ಎಂದು ಹೇಳಿದರು. ಸಲೀಂ ಸಿದ್ದಿಕ್ ಮತ್ತು ಫೈಸಲ್ ಮಕ್ಸೂದ್ ಅವರು ತಮ್ಮನ್ನು ಹಮೀರಪುರಕ್ಕೆ ಕರೆಸಿಕೊಂಡು ಮಾಂಸದ ದಾಸ್ತಾನು ತುಂಬಿಸಿಕೊಟ್ಟರು ಮತ್ತು ಮನೆಯಿಂದ ಮಾರಾಟಕ್ಕೆ ಕೊಂಡೊಯ್ಯಲು ಹೇಳಿದ್ದನ್ನು ಅವರು ಪೋಲೀಸರಿಗೆ ಹೇಳಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ