
ಗೋದ್ರಾ (ಗುಜರಾತ್) – ಇಲ್ಲಿನ ಸೆಶನ್ಸ್ ನ್ಯಾಯಾಲಯವು ೨೦೨೪ ರ ಗೋಹತ್ಯೆ ಮತ್ತು ಗೋಮಾಂಸ ಸಾಗಾಟ ಪ್ರಕರಣದಲ್ಲಿ ಮೆಹಬೂಬ್ ಅಬ್ದುಲ್ಲಾ ಸಬುರಿಯಾ ಮತ್ತು ಫರ್ಹಾನ್ ಮೆಹಬೂಬ್ ಸಬುರಿಯಾ ಅವರಿಗೆ ೧0 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ೨ ಲಕ್ಷ ರೂಪಾಯಿ ದಂಡ ವಿಧಿಸಿದೆ. ಇವರಿಬ್ಬರೂ ತಂದೆ-ಮಗನಾಗಿದ್ದಾರೆ. ಮೂರನೇ ಆರೋಪಿ ಸಲೀಂ ಸಿದ್ದಿಕ್ ಅವರನ್ನು ಸಂಶಯದ ಲಾಭ ನೀಡಿ ನಿರಪರಾಧಿ ಎಂದು ಖುಲಾಸೆಗೊಳಿಸಲಾಗಿದೆ. ಗುಜರಾತ್ನಲ್ಲಿ ಗೋಹತ್ಯೆ, ಗೋಮಾಂಸ ಸಂಗ್ರಹಣೆ, ಸಾಗಾಟ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧವಿದೆ.
ಜುಲೈ ೯, ೨೦೨೪ ರಂದು ಗೋದ್ರಾ ಬಿ ವಿಭಾಗದ ಪೊಲೀಸ್ ಠಾಣೆಯ ಅಧಿಕಾರಿಗಳು ನಿಯಮಿತ ಗಸ್ತು ತಿರುಗುತ್ತಿದ್ದಾಗ, ಗೋದ್ರಾ-ಹಮೀರಪುರ ರಸ್ತೆಯ ಅಲಿ ಮಸೀದಿ ಪ್ರದೇಶದಲ್ಲಿ ಸಂದೇಹಾಸ್ಪದ ವಾಹನವೊಂದು ಪತ್ತೆಯಾಯಿತು. ವಾಹನವನ್ನು ತಡೆದು ವಿಚಾರಣೆ ನಡೆಸಲು ಪ್ರಯತ್ನಿಸಿದಾಗ ಕೆಲವರು ಅಲ್ಲಿಂದ ಓಡಿಹೋದರು. ಅವರಲ್ಲಿ ಇಬ್ಬರನ್ನು ಹಿಡಿಯಲಾಯಿತು. ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿ ಮಾಂಸ ಮತ್ತು ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ವಿಚಾರಣೆಯ ವೇಳೆ ಅವರು ತಮ್ಮ ಹೆಸರುಗಳನ್ನು ಮೆಹಬೂಬ್ ಅಬ್ದುಲ್ಲಾ ಸಬುರಿಯಾ ಮತ್ತು ಫರ್ಹಾನ್ ಮೆಹಬೂಬ್ ಸಬುರಿಯಾ ಎಂದು ಹೇಳಿದರು. ಸಲೀಂ ಸಿದ್ದಿಕ್ ಮತ್ತು ಫೈಸಲ್ ಮಕ್ಸೂದ್ ಅವರು ತಮ್ಮನ್ನು ಹಮೀರಪುರಕ್ಕೆ ಕರೆಸಿಕೊಂಡು ಮಾಂಸದ ದಾಸ್ತಾನು ತುಂಬಿಸಿಕೊಟ್ಟರು ಮತ್ತು ಮನೆಯಿಂದ ಮಾರಾಟಕ್ಕೆ ಕೊಂಡೊಯ್ಯಲು ಹೇಳಿದ್ದನ್ನು ಅವರು ಪೋಲೀಸರಿಗೆ ಹೇಳಿದ್ದಾರೆ.
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein