
ಗೋದ್ರಾ (ಗುಜರಾತ್) – ಇಲ್ಲಿನ ಸೆಶನ್ಸ್ ನ್ಯಾಯಾಲಯವು ೨೦೨೪ ರ ಗೋಹತ್ಯೆ ಮತ್ತು ಗೋಮಾಂಸ ಸಾಗಾಟ ಪ್ರಕರಣದಲ್ಲಿ ಮೆಹಬೂಬ್ ಅಬ್ದುಲ್ಲಾ ಸಬುರಿಯಾ ಮತ್ತು ಫರ್ಹಾನ್ ಮೆಹಬೂಬ್ ಸಬುರಿಯಾ ಅವರಿಗೆ ೧0 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ೨ ಲಕ್ಷ ರೂಪಾಯಿ ದಂಡ ವಿಧಿಸಿದೆ. ಇವರಿಬ್ಬರೂ ತಂದೆ-ಮಗನಾಗಿದ್ದಾರೆ. ಮೂರನೇ ಆರೋಪಿ ಸಲೀಂ ಸಿದ್ದಿಕ್ ಅವರನ್ನು ಸಂಶಯದ ಲಾಭ ನೀಡಿ ನಿರಪರಾಧಿ ಎಂದು ಖುಲಾಸೆಗೊಳಿಸಲಾಗಿದೆ. ಗುಜರಾತ್ನಲ್ಲಿ ಗೋಹತ್ಯೆ, ಗೋಮಾಂಸ ಸಂಗ್ರಹಣೆ, ಸಾಗಾಟ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧವಿದೆ.
ಜುಲೈ ೯, ೨೦೨೪ ರಂದು ಗೋದ್ರಾ ಬಿ ವಿಭಾಗದ ಪೊಲೀಸ್ ಠಾಣೆಯ ಅಧಿಕಾರಿಗಳು ನಿಯಮಿತ ಗಸ್ತು ತಿರುಗುತ್ತಿದ್ದಾಗ, ಗೋದ್ರಾ-ಹಮೀರಪುರ ರಸ್ತೆಯ ಅಲಿ ಮಸೀದಿ ಪ್ರದೇಶದಲ್ಲಿ ಸಂದೇಹಾಸ್ಪದ ವಾಹನವೊಂದು ಪತ್ತೆಯಾಯಿತು. ವಾಹನವನ್ನು ತಡೆದು ವಿಚಾರಣೆ ನಡೆಸಲು ಪ್ರಯತ್ನಿಸಿದಾಗ ಕೆಲವರು ಅಲ್ಲಿಂದ ಓಡಿಹೋದರು. ಅವರಲ್ಲಿ ಇಬ್ಬರನ್ನು ಹಿಡಿಯಲಾಯಿತು. ವಾಹನವನ್ನು ತಪಾಸಣೆ ಮಾಡಿದಾಗ ಅದರಲ್ಲಿ ಮಾಂಸ ಮತ್ತು ಕೆಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ವಿಚಾರಣೆಯ ವೇಳೆ ಅವರು ತಮ್ಮ ಹೆಸರುಗಳನ್ನು ಮೆಹಬೂಬ್ ಅಬ್ದುಲ್ಲಾ ಸಬುರಿಯಾ ಮತ್ತು ಫರ್ಹಾನ್ ಮೆಹಬೂಬ್ ಸಬುರಿಯಾ ಎಂದು ಹೇಳಿದರು. ಸಲೀಂ ಸಿದ್ದಿಕ್ ಮತ್ತು ಫೈಸಲ್ ಮಕ್ಸೂದ್ ಅವರು ತಮ್ಮನ್ನು ಹಮೀರಪುರಕ್ಕೆ ಕರೆಸಿಕೊಂಡು ಮಾಂಸದ ದಾಸ್ತಾನು ತುಂಬಿಸಿಕೊಟ್ಟರು ಮತ್ತು ಮನೆಯಿಂದ ಮಾರಾಟಕ್ಕೆ ಕೊಂಡೊಯ್ಯಲು ಹೇಳಿದ್ದನ್ನು ಅವರು ಪೋಲೀಸರಿಗೆ ಹೇಳಿದ್ದಾರೆ.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು